ವಿರಾಗಿ ಚಲನಚಿತ್ರ ವೀಕ್ಷಿಸಿದ ಬಸವನಾಡಿನ ನಾನಾ ಮಠಾಧೀಶರು

ವಿಜಯಪುರ: ಭಕ್ತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಸಮಾಜ ಚಿಂತಕರು, ಶಿಕ್ಷಣ ಮತ್ತು ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಹಾನಗಲ್ಲ ಕುಮಾರಸ್ವಾಮೀದಿಗಳ ಚಲನಚಿತ್ರ ವಿರಾಗಿ ವಿಜಯಪುರ ನಗರದಲ್ಲಿ ಪ್ರದರ್ಶನ ಕಾಣುತ್ತಿದೆ. ನಗರದ ಅಮೀರ್ ಸಿನೇಮಾ ಮಂದಿರದಲ್ಲಿ ಪ್ರದರ್ಶನವಾಗುತ್ತಿರುವ ಈ ಚಲನಚಿತ್ರವನ್ನು ಮಸೂತಿ, ಮಮದಾಪುರ, ಬಸವನ ಬಾಗೇವಾಡಿ, ಆಲಮೇಲ, ಹತ್ತಳ್ಳಿ, ಮನಗೂಳಿ, ತಡವಲಾ ಸೇರಿದಂತೆ ನಾನಾ ಮಠಾಧೀಶರು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

ರಾಹುಲ್ ಸಿಂಧೆ- ಜಿ. ಪಂ. ಸಿಇಓ ಆಗಿ ಅತ್ಯುತ್ತಮ ಸೇವೆ ರಾಜ್ಯ ಮಟ್ಟದ ಪ್ರಶಸ್ತಿ- ರಾಜ್ಯ ಚುನಾವಣೆ ಆಯೋಗದಿಂದ ಘೋಷಣೆ

ವಿಜಯಪುರ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ಹವಣಾಧಿಕಾರಿ ರಾಹುಲ್ ಸಿಂಧೆ ಅವರಿಗೆ ರಾಜ್ಯ ಚುನಾವಣೆ ಆಯೋಗ ಜಿ. ಪಂ. ಸಿಇಓ ಆಗಿ ಅತ್ಯುತ್ತಮ ಸೇವೆ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಘೋಷಿಸಿದೆ. ವಿಜಯಪುರ ಜಿಲ್ಲೆಯ ಮತದಾರರಲ್ಲಿ ಯಶಸ್ವಿಯಾಗಿ ಜಾಗೃತಿ ಮೂಡಿಸಲು ಉತ್ತಮವಾಗಿ ಕಾರ್ಯ ನಿರ್ವಹಿಸಿದ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರನ್ನು ರಾಜ್ಯ ಚುನಾವಣೆ ಆಯೋಗ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಜಿಲ್ಲೆಯ ಮತದಾರರಲ್ಲಿ ಮತದಾನದ […]

ಜ. 26 ರಂದು ಗಣರಾಜ್ಯೋತ್ಸವದ ದಿನ ಆಶ್ರಯ ಮನೆಗಳ ಹಕ್ಕು ಪತ್ರ ವಿತರಣೆ- ಬಸನಗೌಡ ಪಾಟೀಲ ಯತ್ನಾಳ

ವಿಜಯಪುರ: ವಿಜಯಪುರ ನಗರದ  ಅಲ್ ಅಮಿನ್ ಹಿಂದುಗಡೆ ಇರುವ ನಮೋ ನಗರದಲ್ಲಿ ಪ್ರಧಾನಮಂತ್ರಿ ಅವಾಸ ಯೋಜನೆಯಡಿ ನಿರ್ಮಿಸಲಾಗಿರುವ ಆಶ್ರಯ ಮನೆಗಳ ಹಂಚಿಕೆ ಪತ್ರವನ್ನು ಜ.26 ರಂದು ಗಣರಾಜ್ಯೋತ್ಸವದ  ವಿತರಿಸಲಾಗುವುದು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.  ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವ ರು, ಅಂದು ಬೆ. 9.30ಕ್ಕೆ ಈ ಕಾರ್ಯಕ್ರಮ ನಡೆಯಲಿದೆ.  ಈ ಪ್ರದೇಶದಲ್ಲಿ ಬಡವರಿಗಾಗಿ ಅತ್ಯುತ್ತಮ ಗುಣಮಟ್ಟದ ಮನೆಗಳನ್ನು ನಿರ್ಮಿಸಲಾಗಿದೆ.  ಮೊದಲ ಹಂತದಲ್ಲಿ ಶೇ. 60 ರಷ್ಟು […]