ಬಿಜೆಪಿ ಗೆಲುವಿಗೆ ಜನಪರ ಯೋಜನೆಗಳೇ ಶ್ರೀರಕ್ಷೆ- ಪ್ರಕಾಶ ಅಕ್ಕಲಕೋಟ

ವಿಜಯಪುರ: ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಗಳೇ ಶ್ರೀರಕ್ಷೆಯಾಗಲಿವೆ ಎಂದು ಬಿಜೆಪಿ ಸಂಘಟನಾ ಮಹಾಮಂತ್ರಿ ಪ್ರಕಾಶ ಅಕ್ಕಲಕೋಟ ಹೇಳಿದ್ದಾರೆ.

ವಿಜಯಪುರ ನಗರದ ವಾ. ಸಂ. 33ರಲ್ಲಿ ಬರುವ ಬೂತ್ ಸಂಖ್ಯೆ 139 ಮತ್ತು 145ರ ವ್ಯಾಪ್ತಿಯಲ್ಲಿ ನಡೆದ ಬಿಜೆಪಿ ಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನಪರ, ರೈತಪರ, ಕಾರ್ಮಿಕರ ಪರವಾದ ನೈಜವಾದ ಕಾಳಜಿ ಹೊಂದಿರುವ ಏಕೈಕ ಪಕ್ಷ ಬಿಜೆಪಿ, ದೇಶಾಭಿಮಾನ ಹಾಗೂ ಜನಸೇವೆಯೇ ಬಿಜೆಪಿಯೇ ಧ್ಯೇಯವಾಗಿದೆ.  ಈ ಹಿನ್ನೆಲೆಯಲ್ಲಿ ಬಿಜೆಪಿಯ ನಪರ ಯೋಜನೆಗಳ ಬಗ್ಗೆ ಕಾರ್ಯಕರ್ತರು ಜಾಗೃತಿ ಮೂಡಿಸಬೇಕು ಎಂದು ಪ್ರಕಾಶ ಅಕ್ಕಲಕೋಟ ಹೇಳಿದರು.

ಮಹಾನಗರ ಪಾಲಿಕೆ ಸ್ಥಳೀಯ ಸದಸ್ಯ ಶಿವರುದ್ರ ಬಾಗಲಕೋಟ ಮಾತನಾಡಿ, ಬಿಜೆಪಿಗೆ ಕಾರ್ಯಕರ್ತರೇ ಜೀವಾಳ.  ದೇಶಭಕ್ತಿಯನ್ನೇ ಉಸಿರಾಗಿಸಿಕೊಂಡಿರುವ ಕಾರ್ಯಕರ್ತರ ಬಲ ಬಿಜೆಪಿ ಜೊತೆಗಿದೆ.  ಜನಪರ ಯೋಜನೆಯನ್ನು ಅನುಷ್ಠಾನ ಗೊಳಿಸುತ್ತಿರುವ ಬಿಜೆಪಿಗೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಜನತೆ ಆಶೀರ್ವಾದ ನೀಡಲಿದ್ದಾರೆ ಎಂದು ಹೇಳಿದರು.

ವಿಜಯಪುರ ನಗರದ ವಾ. ಸಂ. 33ರಲ್ಲಿ ಬಿಜೆಪಿ ಸಂಕಲ್ಪ ಅಭಿಯಾನ ನಡೆಯಿತು

ಈ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಕೇಂದ್ರ, ರಾಜ್ಯ ಸರಕಾರದ ಜೊತೆಗೆ ನಗರ ಶಾಸಕರ ಅಭಿವೃದ್ಧಿಗಳ ಬಗ್ಗೆ ಮನೆ ಮನೆಗೆ ತೆರಳಿ ಕರಪತ್ರ ವಿತರಿಸಿ ಕಾರು ಹಾಗೂ ಬೈಕುಗಳ ಮೇಲೆ ಸ್ಟಿಕರ್ ಅಂಟಿಸಿ, ಫಲಾನುಭವಿಗಳ ಸಂಪರ್ಕ, ಕರೆ ಮಾಡುವ ಮೂಲಕ ಸದಸ್ಯತ್ವ ನೊಂದಣಿ ಮಾಡಲಾಯಿತು.  ಅಲ್ಲದೇ, ಗೋಡೆಗಳ ಮೇಲೆ ಬರಹ ಬರೆಯಲಾಯಿತು.

ಈ ವೇಳೆ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಸವರಾಜ ಬೈಚಬಾಳ, ಮಲ್ಲಮ್ಮ ಜೋಗೂರ, ವಿಜಯ ಜೋಶಿ, ಸುವರ್ಣ ಕುರ್ಲೇ, ಸತೀಶ ಆಗಸರ, ಮುಖಂಡರಾದ ಶಿವಪುತ್ರ ಕಾಳಗಿ, ಸಂದೀಪ ಕಾಳೆ,ಶಿವಾನಂದ ಗಿಡವೀರ, ಧನಂಜಯ ಉಪ್ಪಾರ, ಲಿಂಗರಾಜ ಶಹಾಪುರ, ಸತೀಶ ಮಠಪತಿ, ಪ್ರಕಾಶ ಗಿಡವೀರ, ರಾಜು ಕರಾಡೆ, ಬಸವರಾಜ್ ಹಿರೇಮಠ, ವಿರೂಪಾಕ್ಷಪ್ಪ ಬಾಗಲಕೋಟ, ಸೂಗೂರು ಹುಣಸ್ಯಾಳ ,ಅಮಿತ್ ಕುರ್ಲೆ, ಹುಚ್ಚಪ್ಪ ಕವಿಶೆಟ್ಟಿ, ಸಂತೋಷ ಹುನಶ್ಯಾಳ, ಆನಂದ ಸಲ್ಫೇಕರ,  ಸುರೇಶ ಅಳಗುಂಡಗಿ, ಈರಣ್ಣ ಬಣಗಾರ, ದಾನಪ್ಪ ಕುರ್ಲೆ, ಆಶಿಶ ಹುಣಶ್ಯಾಳ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌