ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗಣರಾಜ್ಯೋತ್ಸವ ಆಚರಣೆ

ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದಿಂದ 74ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಪತ್ರಿಕಾ ಭವನ ಹಾಗೂ ಸಂಘದ ಹಳೆಯ ಕಾರ್ಯಾಲಯದ ಎದುರು ನಡೆದ ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ ಮತ್ತು ಸಂಘದ ಉಪಾಧ್ಯಕ್ಷ ಫಿರೋಜ್ ರೋಜಿಂದಾರ ಅವರು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಸಂಘದ ಖಜಾಂಚಿ ರಾಹುಲ ಆಪ್ಟೆ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಸಮೀರ ಇನಾಮದಾರ, ಗುರುರಾಜ ಲೋಕುರಿ, ವಿಶೇಷ ಆಮಂತ್ರಿತೆ ಕೌಶಲ್ಯ ಪನಾಳಕರ, ಪತ್ರಕರ್ತರಾದ ರಫೀ ಭಂಡಾರಿ, ದೇವೇಂದ್ರ ಹೆಳವರ, ಎಸ್. ಬಿ. ಪಾಟೀಲ, ನೀಲೇಶ ಬೇನಾಳ, ದೇವಪ್ಪ ಮೇತ್ರಿ, ಚಿದಂಬರ ಕುಲಕರ್ಣಿ, ಶರದ ಅರ್ಜುಣಗಿ, ಚಂದ್ರಕಾಂತ ಮಾವೂರ, ವಿಠ್ಠಲ ಲಂಗೋಟಿ, ಗಿರಿಜಾ ಕನಮಡಿ, ಕೃಷ್ಣಾ ಗಂಜಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌