ಕಾನಿಪ ಸಮ್ಮೇಳನ: ಹಿರಿಯ ಪತ್ರಕರ್ತರು, ಮಾಜಿ ಜಿಲ್ಲಾಧ್ಯಕ್ಷರಿಗೆ ಸನ್ಮಾನ- ಸಂಗಮೇಶ ಚೂರಿ

ವಿಜಯಪುರ: ಫೆ. 4 ಶನಿವಾರ ಮತ್ತು 5 ರಂದು ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ನಡೆಯಲಿರುವ ಕಾರ್ಯನಿರತ ಪತ್ರಕರ್ತರ 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಜಲ್ಲೆಯ ಹಿರಿಯ ಪತ್ರಕರ್ತರು ಮತ್ತು ಕಾರ್ಯನಿರತರ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನ ಕಾರ್ಯದರ್ಶಿಗಳನ್ನು ಸನ್ಮಾನಿಸಲಾಗುವುದು ಎಂದು ಕಾನಿಪ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ತಿಳಿಸಿದ್ದಾರೆ. 

ಕಾನಿಪ ಮಾಜಿ ಜಿಲ್ಲಾಧ್ಯಕ್ಷ ರಾಜು ಕೊಂಡಗೂಳಿ ಅವರನ್ನು ಭೇಟಿ ಮಾಡಿದ ಜಿಲ್ಲಾ ಘಟಕದ ಪದಾಧಿಕಾರಿಗಳು ಅಧಿಕೃತ ಆಹ್ವಾನ ನೀಡಿದರು

70 ವರ್ಷ ಮೀರಿದ ಹಿರಿಯ ಪತ್ರಕರ್ತರಾದ ವಿಜಯಪುರ ನಗರದ ಮುರಿಗೆಮ್ಮ ಮಿರ್ಜಿ, ಪಿ. ವಿ. ಮಮದಾಪೂರ, ಬಾಬುರಾವ ಕುಲಕರ್ಣಿ, ಬಾಬು ಅಕ್ಕಿ, ಶಿವನಗೌಡ ಪಾಟೀಲ, ನಿಂಗಪ್ಪ ಕೊಂಡಗೂಳಿ, ಪಿ. ಎಂ. ಮಣ್ಣೂರ, ದೇವರ ಹಿಪ್ಪರಗಿಯ ಬಿ. ಸಿ. ಹಿರೇಮಠ, ನಾಲತವಾಡದ ಶ್ರೀಕಂಠಯ್ಯ ಸಾಲಿಮಠ, ತಾಳಿಕೋಟೆಯ ಜಿ. ಟಿ. ಘೋರ್ಪಡೆ, ಕಾನಿಪ ಮಾಜಿ ಜಿಲ್ಲಾಧ್ಯಕ್ಷರಾದ ಮೋಹನ ಕುಲಕರ್ಣಿ, ರಫೀ ಭಂಡಾರಿ, ರಾಜು ಕೊಂಡಗೂಳಿ, ಶರಣು ಮಸಳಿ, ಸಚ್ಚೇಂದ್ರ ಲಂಬೂ, ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಕೆ. ಕೆ. ಕುಲಕರ್ಣಿ, ನಿಂಗಪ್ಪ ನಾವಿ, ಶಿವಾನಂದ ಬಳೂಲ, ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಮಾಜಿ ಸದಸ್ಯರಾದ ಸೀತಾರಾಮ ಕುಲಕರ್ಣಿ, ದೇವೇಂದ್ರ ಹೆಳವರ, ಪ್ರಕಾಶ ಬೆಣ್ಣೂರ ಅವರನ್ನು ಸನ್ಮಾನಿಸಲಾಗುವುದು ಎಂದು ಸಂಗಮೇಶ ಚೂರಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾನಿಪ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ, ಖಜಾಂಚಿ ರಾಹುಲ ಆಪ್ಟೆ, ಪತ್ರಕರ್ತರಾದ ಪ್ರದೀಪ ಕುಲಕರ್ಣಿ, ಚಿದಂಬರ ಕುಲಕರ್ಣಿ, ಷಡಾಕ್ಷರಿ ಕಂಪೂನವರ, ಸುನೀಲ ಗೋಡೆನವರ, ಸುನೀಲ ಕಾಂಬಳೆ, ಶ್ರೀಶೈಲ ಕೊಟ್ಟಲಗಿ, ವಿನೋದ ಮಣೂರ, ಚಿದಂಬರ ಕುಲಕರ್ಣಿ ಮುಂತಾದವರು ಸನ್ಮಾನಕ್ಕೆ ಪಾತ್ರರಾಗಿರುವ ಪತ್ರಕರ್ತರ ಮನೆಗಳಿಗೆ ತೆರಳಿ ಅಧಿಕೃತವಾಗಿ ಆಹ್ವಾನ ನೀಡಿದರು.

Leave a Reply

ಹೊಸ ಪೋಸ್ಟ್‌