ಶಾಸಕ, ವಿಪ ಸದಸ್ಯರ ಭಾವಚಿತ್ರವಿರುವ ಹಿಟ್ಟಿನ ಗಿರಣಿ ಹಂಚಿಕೆ- ಇದಕ್ಕೂ ನಮಗೂ ಸಂಬಂಧವಿಲ್ಲ- ಸ್ಪಷ್ಟನೆ ನೀಡಿದ ಶಾಸಕರ ಕಚೇರಿ

ವಿಜಯಪುರ: ಬಬಲೇಶ್ವರ ಮತಕ್ಷೇತ್ರದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಮತ್ತು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಭಾವಚಿತ್ರವಿರುವ ಹಿಟ್ಟಿನ ಗಿರಣಿಗಳನ್ನು ಹಂಚುತ್ತಿರುವುದು ಬೆಳಕಿಗೆ ಬಂದಿದೆ‌.

ಶಾಸಕರು, ವಿಪ ಸದಸ್ಯರ ಭಾವಚಿತ್ರವಿರುವ ಹಿಟ್ಟಿನಗಿರಣಿ

 

ಈ ಹಿನ್ನೆಲೆಯಲ್ಲಿ ಶಾಸಕರ ಕಚೇರಿ ಸ್ಪಷ್ಟೀಕರಣದ ಪ್ರಕಟಣೆ ನೀಡಿದೆ.

ಆತ್ಮೀಯರೇ,
ತಮಗೆಲ್ಲರಿಗೂ ಈ ಮೂಲಕ ತಿಳಿಸುವುದೇನೆಂದರೆ ಬಬಲೇಶ್ವರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಶ್ರೀ. ಎಂ. ಬಿ. ಪಾಟೀಲ ಸಾಹೇಬರು ಮತ್ತು ಸುನೀಲಗೌಡ ಪಾಟೀಲ ಸಾಹೇಬರ ಭಾವಚಿತ್ರ ಇರುವ ಹಿಟ್ಟಿನ ಗಿರಣಿಗಳನ್ನು ವೈಯಕ್ತಿಕವಾಗಿ ಕೆಲವರು ನೀಡುತ್ತಿದ್ದ, ಇದಕ್ಕೆ ಶಾಸಕರಾಗಲಿ ಹಾಗೂ ಶಾಸಕರ ಕಛೇರಿಯಿಂದಾಗಲಿ ಯಾವುದೇ ರೀತಿಯಿಂದ ಸಂಭಂಧ ಇರುವದಿಲ್ಲ ಎಂದು ಈ ಮೂಲಕ ತಿಳಿಸುತ್ತೆವೆ.

ಪ್ರಕಟಣೆ: ಶಾಸಕರ ಕಚೇರಿ.

Leave a Reply

ಹೊಸ ಪೋಸ್ಟ್‌