ದಾರ್ಶನಿಕ ಸರ್ವಜ್ಞರ ತ್ರಿಪದಿ-ಸರಳತೆ ಜನಮಾನಸದಲ್ಲಿ ಜನಪ್ರಿಯ- ಡಾ. ಶಂಕರಣ್ಣ ವಣಕ್ಯಾಳ

ವಿಜಯಪುರ: ಸರ್ವಜ್ಞರ ತ್ರಿಪದಿಗಳು ಸರಳತೆ ಹಾಗೂ ಪ್ರಾಸಬದ್ಧತೆಯಿಂದ ಜನಮಾನಸದಲ್ಲಿ ಇಂದಿಗೂ-ಎಂದೆಂದಿಗೂ ಜನಪ್ರಿಯವಾಗಿವೆ. ಸಮಾಜದಲ್ಲಿನ ಮೌಡ್ಯತೆ, ಅಂಕು-ಡೊಂಕುಗಳನ್ನು ತಮ್ಮ ತ್ರಿಪದಿಗಳ ಮೂಲಕ ತಿದ್ದುವ ಕಾರ್ಯ ಮಾಡಿದರು ಎಂದು ಅಪರ ಜಿಲಾಧಿಕಾರಿ ಡಾ. ಶಂಕರಣ್ಣ ವಣಕ್ಯಾಳ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಿರ್ಭೀತ, […]

ಬಿಜೆಪಿ ಬೆನ್ನು ಹತ್ತಿದವರು ಉದ್ಧಾರವಾಗಿಲ್ಲ- ಅವರನ್ನು ಬೆಂಬಲಿಸಿ ಹಾಳಾದವರ ಪಟ್ಟಿ ನನ್ನ ಬಳಿಯಿದೆ- ಸುನೀಲಗೌಡ ಪಾಟೀಲ

ವಿಜಯಪುರ: ಬಿಜೆಪಿಯ ಬೆನ್ನುಹತ್ತಿದವರು ಯಾರೂ ಉದ್ಧಾರವಾಗಿಲ್ಲ.  ಅವರನ್ನು ಬೆಂಬಲಿಸಿ ಹಾಳಾದವರ ಪಟ್ಟಿ ನನ್ನ ಬಳಿ ಇದೆ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಬಿಜೆಪಿ ದೌರ್ಜನ್ಯ ಮತ್ತು ಗೂಂಡಾಗಿರಿಯಿಂದ ಬೇಸತ್ತು ಕಾಂಗ್ರೆಸ್ಸಿಗೆ ಸೇರ್ಪಡೆಯಾದ ಹೊನವಾಡದವರ ವಸ್ತಿಯ ಮುಖಂಡರನ್ನು ಪಕ್ಷಕ್ಕೆ ಸ್ವಾಗತಿಸಿ ಅವರು ಮಾತನಾಡಿದರು. ಬಿಜೆಪಿಯವರನ್ನು ಬೆನ್ನು ಹತ್ತಿದವರು ಯಾರಾದರೂ ಉದ್ಧಾರವಾಗಿದ್ದರೆ ಅವರ ಹೆಸರು ಹೇಳಿ.  ಅವರಿಂದ ಹಾಳಾದವರ ದೊಡ್ಡ ಪಟ್ಟಿಯೇ ನನ್ನ ಬಳಿ ಇದೆ.  ಗ್ರಾ. ಪಂ. ಚುನಾವಣೆಯಲ್ಲಿ ಇವರಿಂದ ಬೆಂಬಲ ಪಡೆದು ಪರಾಜಿತರಾದ ಅಭ್ಯರ್ಥಿಗಳು ಸಾಲಗಾರರಾಗಿದ್ದಾರೆ.  ಆದರೆ, ಇವರು ಮಾತ್ರ ಮೂರು ಚುನಾವಣೆಗೆ ಸ್ಪರ್ಧಿಸಿದ ನಂತರವೂ ಹೊಸದಾಗಿ ಹೊಲ ಖರೀದಿ ಮಾಡುತ್ತಿದ್ದಾರೆ.  ದೊಡ್ಡ ವಾಹನ ಖರೀದಿಸುತ್ತಿದ್ದಾರೆ.  ಇವರ ಮಕ್ಕಳು ರೂ.  […]