ಶ್ರೀಹರಿ ಗೊಳಸಂಗಿಗೆ ಸಂದಿಗ್ಧತೆ- ಫೆ. 17 ಹೊರಡಿಸಲಾಗಿದ್ದ ಆದೇಶ ಫೆ. 18 ರದ್ದು- ಯಾವುದು ಗೊತ್ತಾ?

ವಿಜಯಪುರ: ಶ್ರೀಹರಿ ಗೊಳಸಂಗಿ ಅವರನ್ನು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮುಂದುವರೆಸಿ ಫೆ. 17 ರಂದು ಹೊರಡಿಸಲಾಗಿದ್ದ ಆದೇಶವನ್ನು ಮರುದಿನವೇ ರದ್ದು ಪಡಿಸಿ ಮತ್ತೋಂದು ಆದೇಶ ಹೊರಡಿಸಲಾಗಿದೆ.

ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ ಮತ್ತು ಸದಸ್ಯರ ಅವಧಿಯನ್ನು ಫೆ. 17 ರಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಅಥವಾ ಸರಕಾರದ ಮುಂದಿನ ಆದೇಶದವರೆಗೆ ವಿಸ್ತರಿಸಿ ನಗರಾಭಿವೃದ್ಧಿ ಇಲಾಖೆತ ಅಧೀನ‌ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು.

ಫೆ. 17 ರಂದು ಹೊರಡಿಸಲಾಗಿದ್ದ ಆದೇಶ

ಆದರೆ, ಇದೇ ಅಧೀನ‌ ಕಾರ್ಯದರ್ಶಿ ಫೆ. 18ರಂದು ಮೊದಲಿನ ಆದೇಶವನ್ನು ರದ್ದುಪಡಿಸಿ ಮತ್ತೋಂದು ಆದೇಶ ಹೊರಡಿಸಿದ್ದಾರೆ. ಹೀಗಾಗಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಶ್ರೀಹರಿ ಗೊಳಸಂಗಿ ಮತ್ತು ಸದಸ್ಯರ ಸದಸ್ಯತ್ವ ಅವಧಿಯನ್ನು ರದ್ದಾಗಿದೆ.

ಫೆ. 18 ರಂಸು ಹೊರಡಿಸಲಾದ ಹೊಸ ಆದೇಶ

ಈಗ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರು‌ ಯಾರಾಗುತ್ತಾರೆ ಎಂಬುದು ಒಂದೆರಡು ದಿನಗಳಲ್ಲಿ ಸ್ಪಷ್ಟವಾಗಲಿದೆ.

ನೋ ಕಮೆಂಟ್ ಎಂದ ಶ್ರೀಹರಿ ಗೊಳಸಂಗಿ

ಈ ವಿದ್ಯಮಾನಗಳ ಕುರಿತು ಬಸವ ನಾಡು ವೆಬ್ ಜೊತೆ ಮಾತನಾಡಿದ ಶ್ರೀಹರಿ ಗೊಳಸಂಗಿ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

Leave a Reply

ಹೊಸ ಪೋಸ್ಟ್‌