ಭಗೀರಥ ಮಹರ್ಷಿ ವೃತ್ತ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಯತ್ನಾಳ- ವೈಯಕ್ತಿಕವಾಗಿ ರೂ. 5 ಲಕ್ಷ ನೆರವು ಘೋಷಣೆ

ವಿಜಯಪುರ: ಭಗೀರಥ ವೃತ್ತ ನಿರ್ಮಾಣಕ್ಕೆ ವೈಯುಕ್ತಿಕವಾಗಿ ರೂ. 5 ಲಕ್ಷ ಅನುದಾನ ನೀಡುವುದಾಗಿ ವಿಜಯಪುರ ನಗರ ಶಾಸಕ ಬಸನಗೌಡ ರಾ ಪಾಟೀಲ ಯತ್ನಾಳ ಘೋಷಿಸಿದ್ದಾರೆ.

ನಗರದಲ್ಲಿ ಡಾ. ಬಿ. ಆರ್.ಅಂಬೇಡ್ಕರ್ ರಸ್ತೆಯ(ಸ್ಟೇಶನ್ ರೋಡ) ನವರತ್ನ ಹೋಟೆಲ್ ಬಳಿ ಭಗೀರತ ಮಹರ್ಷಿ ವೃತ್ತ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದ ಅವರು, ನಾಳೆಯೇ ಮುಖಂಡರು ಬಂದು ಹಣ ಪಡೆದುಕೊಳ್ಳಿ ಎಂದು ಹೇಳಿದರು.

ಭಗೀರಥರು ಪೌರಾಣಿಕ ರಾಜನಾಗಿದ್ದರು.  ಹಿಂದೂ ನದಿ ದೇವತೆ ಗಂಗಾ ಎಂದು ನಿರೂಪಿಸಲ್ಪಟ್ಟ ಪವಿತ್ರ ನದಿ.  ಪವಿತ್ರ ಗಂಗಾವನ್ನು ಸ್ವರ್ಗದಿಂದ ಭೂಮಿಗೆ ತಂದಿದ್ದಾರೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಜವಾಹರ ಗೋಸಾವಿ, ಜಿಲ್ಲಾ ಉಪ್ಪಾರ ಸೇವಾ ಸಂಘದ ಅಧ್ಯಕ್ಷ  ಜಕ್ಕಪ್ಪ ಯಡವೆ, ಭಗೀರಥ ಉಪ್ಪಾರ ಸಮಾಜದ ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ರೇಣುಕಾ ಪರಸಪ್ಪಗೋಳ, ಉಪಾಧ್ಯಕ್ಷೆ ಗೀತಾ ಗಾಣೂರ, ಪ್ರಧಾನ ಕಾರ್ಯದರ್ಶಿ ರೇಣುಕಾ ಗಾಣೂರ, ಭಾರತಿ ಹೊನಕಟ್ಟಿ, ರೋಹಿಣಿ ಚಮಕಾರ, ಸಾಹಿತಿ ಸರಸ್ವತಿ ಚಿಮ್ಮಲಗಿ, ನಾನಾ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಮತ್ತು ಉಪ್ಪಾರ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

Leave a Reply

ಹೊಸ ಪೋಸ್ಟ್‌