ಕಾನಿಪ ಪತ್ರಕರ್ತರ ದತ್ತಿ ನಿಧಿಗೆ ರೂ. 1.10 ಲಕ್ಷ ಹಣ ನೀಡಿದ ಹಿರಿಯ ಪತ್ರಕರ್ತ ಟಿ. ಕೆ. ಮಲಗೊಂಡ- ರಾಜ್ಯಾಧ್ಯಕ್ಷ ತಗಡೂರ ಅವರಿಂದ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(ಕೆಯುಡಬ್ಲ್ಯೂಜೆ) ದತ್ತಿ ನಿಧಿಗೆ ವಿಜಯಪುರ ಜಿಲ್ಲೆಯ ಹಿರಿಯ ಪತ್ರಕರ್ತ ಟಿ. ಕೆ. ಮಲಗೊಂಡ ಅವರು ರೂ. 1.10ಲಕ್ಷ ಹಣ ನೀಡಿದ್ದಾರೆ. 

ಬೆಂಗಳೂರಿನಲ್ಲಿ ಸಂಘದ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರಿಗೆ ದತ್ತಿ ನಿಧಿ ಸ್ಥಾಪಿಸಲು ಮಲಗೊಂಡ ಅವರು ಹಣ ನೀಡಿದರು.  ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರು ಮಲಗೊಂಡ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ಬೆಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮಾತನಾಡಿದರು

ಅಪರಾಧಕ್ಕೆ ಸವಾಲು ಪತ್ರಿಕೆಯ ಸಂಪಾದಕರಾದ ಟಿ. ಕೆ. ಮಲಗೊಂಡ ಅವರು, ಪ್ರತಿ ವರ್ಷ ಕೆಯುಡಬ್ಲ್ಯೂಜೆ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ ಅತ್ಯುತ್ತಮ ಅಪರಾಧ ವರದಿಗಾಗಿ ನೀಡುವಂತೆ ರಾಜ್ಯಾಧ್ಯಕ್ಷರಿಗೆ ತಿಳಿಸಿದರು.

ಈ ಸರಳ ಸಮಾರಂಭದಲ್ಲಿ ವಿಜಯಪುರ ಜಿಲ್ಲಾ ಪತ್ರಕರ್ತರ ಸಂಘದ ಇರ್ಫಾನ್ ಶೇಖ್, ಯಾದಗಿರಿ ಜಿಲ್ಲಾ ಸಂಘದ ಖಜಾಂಚಿ ಕುಮಾರಸ್ವಾಮಿ, ಚಿತ್ರದುರ್ಗ ಜಿಲ್ಲಾಧ್ಯಕ್ಷ ದಿನೇಶ ಗೌಡಗೆರೆ, ರಾಷ್ಟ್ರೀಯ ಮಂಡಳಿ ಸದಸ್ಯ ಸಿ. ಹೆಂಜಾರಪ್ಪ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌