ಘೋಣಸಗಿ, ಅಳಗಿನಾಳ, ಕನಮಡಿ ಗ್ರಾಮಗಳಲ್ಲಿ ಎಂ. ಬಿ. ಪಾಟೀಲ ಬಿರುಸಿನ ಪ್ರವಾಸ- ಕಾಂಗ್ರೆಸ್ ಗ್ಯಾರಂಟಿ ಸ್ಕೀಂ ಕಾರ್ಡ್ ವಿತರಣೆ

ವಿಜಯಪುರ: ಬಬಲೇಶ್ವರ ಮತಕ್ಷೇತ್ರದಲ್ಲಿ ಸರ್ವಾಂಗೀಣ ಮಾಡಿದ್ದೇನೆ. ಈ ಕೆಲಸಗಳನ್ನು ಜನರ ಮುಂದಿಟ್ಟುಕೊಂಡು ಜನಮತ ಕೇಳುತ್ತಿದ್ದೇನೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಘೊಣಸಗಿ, ಅಳಗಿನಾಳ ಮತ್ತು ಕನಮಡಿ, ಬಿಜ್ಜರಗಿ ಗ್ರಾಮಗಳಲ್ಲಿ ಬೂತ ಮಟ್ಟದಲ್ಲಿ ಮತದಾರರ ಬಿಜೆಪಿ ವೈಫಲ್ಯಗಳು, ಕಾಂಗ್ರೆಸ್ ಸಾಧನೆಗಳು ಮತ್ತು ಭರವಸೆಗಳ ಕುರಿತು ಅರಿವು ಹಾಗೂ ಕಾಂಗ್ರೆಸ್ ಗ್ಯಾರಂಟಿ ಸ್ಕೀಂ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಬಲೇಶ್ವರ ಮತಕ್ಷೇತ್ರದಲ್ಲಿ ಎಲ್ಲರಿಗಿಂತ ಹೆಚ್ಚು ಅನುದಾನ‌ […]

ರೇಣುಕಾಚಾರ್ಯರು ಸಮಾಜದಲ್ಲಿ ಸಮಾನತೆ-ಸಹಬಾಳ್ವೆ, ಸಾಮರಸ್ಯ ಸಾರಿದ ಜಗದ್ಗುರುಗಳು- ಎಸಿ ಕ್ಯಾ. ಮಹೇಶ ಮಾಲಗಿತ್ತಿ

ವಿಜಯಪುರ: ಸಾಮರಸ್ಯ,ಸಹಬಾಳ್ವೆ, ಸೌಹಾರ್ದತೆಯ ಉತ್ತಮ ಸಂದೇಶಗಳು ಹಾಗೂ ತತ್ವಾದರ್ಶಗಳ ಕುರಿತು  ಶ್ರೀ ಜಗದ್ಗುರು ರೇಣುಕಾಚಾರ್ಯ ಅವರ ಬೋಧನೆಗಳು ಸಾಮಾಜಿಕ ಸುಧಾರಣೆಗೆ ಪ್ರೇರಣೆಯಾಗಿವೆ ಎಂದು ವಿಜಯಪುರ ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯಪುರ ಇವರ ಸಹಯೋಗದಲ್ಲಿ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅವರು ಮಾತನಾಡಿದರು. ಸರ್ವ ಶ್ರೇಷ್ಠ,ಮೌಲಿಕವಾದ ಸಿದ್ಧಾಂತ ಶಿಖಾಮಣಿಯ […]

ಬಿ. ಎಲ್. ಡಿ. ಇ.ಸಂಸ್ಥೆಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ

ವಿಜಯಪುರ: ನಗರದ ಪ್ರತಿಷ್ಠಿತ ಬಿ. ಎಸ್. ಡಿ. ಇ.ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಎಐಸಿಟಿಇ ಪ್ರಾಯೋಜಿತ ಅಟಲ್ ಫ್ಯಾಕಲ್ಟಿ ಡೆವಲ್ಪಮೆಂಟ್ ಪ್ರೊಗ್ರಾಂ 15 ದಿನದ ಕಾರ್ಯಕ್ರಮ ಮಾ. ಫೆ. 20 ರಿಂದ ಮಾ. 3ರ ವರೆಗೆ ನಡೆಯಿತು.  ಸಸ್ಟೇನ್‍ಬಲ್ ಕನಸ್ಟ್ರಕ್ಸನ್ ಇಸ್ಸಿವ್ಸ್ ಛಾಲೆಂಜಸ್ ಮತ್ತು ಟೆಕ್ನಾಲಿಜಿಕಲ್ ಡೆವಲಪಮೆಂಟ್ ಡಿಕಾರ್ಬೊನೇಜಷನ್ ವಿಷಯದ ಮೇಲೆ ನಡೆದ ಈ ಕಾರ್ಯಕ್ರಮಕ್ಕೆ ಶಿಕ್ಷಣ ತಜ್ಞರು, ಕೈಗಾರಿಕೆ ತಜ್ಞರು ಮತ್ತು ನಾನಾ […]

ಮಹಿಳೆಯರು ಪೌಷ್ಠಿಕ, ಕಬ್ಬಿಣಾಂಶಯುಕ್ತ ಆಹಾರ ಸೇವಿಸಿ ಆರೋಗ್ಯಯುತ ಸಮಾಜ ಕಟ್ಟಬೇಕು- ಡಾ. ವಿದ್ಯಾ ಥೊಬ್ಬಿ

ವಿಜಯಪುರ: ಮಹಿಳೆಯರು ತಮ್ಮ ದಿನನಿತ್ಯದ ಜೀವನದಲ್ಲಿ ಪೌಷ್ಟಿಕ ಆಹಾರ ಮತ್ತು ಕಬ್ಬಿಣಾಂಶಯುಕ್ತ ಆಹಾರ ಸೇವಿಸಿ  ಆರೋಗ್ಯಯುತ ಸಮಾಜವನ್ನು ಕಟ್ಟಬೇಕು ಎಂದು ವಿಜಯಪುರಿನ ಆಲ್- ಅಮೀನ್ ಮೆಡಿಕಲ್ ಕಾಲೇಜಿನ ಸ್ತ್ರೀರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಡಾ. ವಿದ್ಯಾ ಥೊಬ್ಬಿ ಹೇಳಿದರು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಅಂತರಾಷ್ಟ್ರೀಯ ಮಹಿಳಾ ದಿನಾಚಾರಣೆ ಅಂಗವಾಗಿ ಪ್ರಾಣಿಶಾಸ್ತ್ರ ವಿಭಾಗ ಮತ್ತು ಆಹಾರ ಸಂಸ್ಕರಣೆ, ಪೋಷಣೆ ಮತ್ತು ಅಹಲ್ಯಾಬಾಯಿ ಮಹಿಳಾ ಅಧ್ಯಯನ ಪೀಠದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಮತ್ತು ಆರೋಗ್ಯ ಎಂಬ […]

ನಶಿಸಿ ಹೋಗುತ್ತಿರುವ ವಿಶಿಷ್ಟ ಪಾರಂಪರಿಕ ಕಲೆಗಳ ಉಳಿಸಿ ಬೆಳೆಸುವುದು ಅತ್ಯವಶ್ಯಕ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ಇಂದಿನ ದಿನಮಾನಗಳಲ್ಲಿ ನಶಿಸಿ ಹೋಗುತ್ತಿರುವ ವಿಶಿಷ್ಟ ಕಲಾ ಪರಂಪರೆಯನ್ನು  ಉಳಿಸಿ ಬೆಳೆಸಿಕೊಂಡು ಮುಂದಿನ ಯುವ ಪೀಳಿಗೆಗೆ ಪರಿಚಯಿಸುವುದು ಅತ್ಯವಶ್ಯಕವಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದಲ್ಲಿ ವಿಜಯಪುರ ನಗರದ ಐತಿಹಾಸಿಕ ಆನಂದ ಮಹಲ್ ಸ್ಮಾರಕ ಆವರಣದಲ್ಲಿ ಆಯೋಜಿಸಲಾಗಿದ್ದ ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ ಎಂಬ ಶೀರ್ಷಿಕೆಯಡಿ ತಳಸಮುದಾಯದ ನಶಿಸುತ್ತಿರುವ ವಿಶಿಷ್ಟ ಕಲಾ ಪರಂಪರೆಗೆ ಕಾಯಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನಪದ ಸಾಹಿತ್ಯ, ಚೌಡಕಿ ಹಾಡು, ಸೋಬಾನ […]

ಹೈಕೋರ್ಟ್ ನ್ಯಾಯಮೂರ್ತಿಗಳಿಂದ ವಿಜಯಪುರದಲ್ಲಿ ಗಾಂಧಿ ಭವನ ವೀಕ್ಷಣೆ

ವಿಜಯಪುರ:  ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಎಸ್.ಸುನಿಲ್ ದತ್ತ ಯಾದವ್ ಹಾಗೂ ನ್ಯಾಯಮೂರ್ತಿಗಳಾದ ಎಸ್.ರಾಚಯ್ಯ ಅವರು ಶನಿವಾರ ಬೆಳಗ್ಗೆ ನಗರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿರುವ ಗಾಂಧಿ ಭವನಕ್ಕೆ ಭೇಟಿ ನೀಡಿ,ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಎಸ್. ಸುನೀಲದತ್ತ ಯಾದವ ಮಾತನಾಡಿ, ಮಹಾತ್ಮಾ ಗಾಂಧೀಜಿಯವರ ತತ್ವ ಸಿದ್ಧಾಂತಗಳು ಅವರ ವಿಚಾರಧಾರೆಗಳಲ್ಲಿರುವ ಮಾಹಿತಿ ಉಪಯುಕ್ತ ಸಮಗ್ರ ಮಾಹಿತಿ ಈ ಭವನದ ಮೂಲಕ ನೀಡಿದವರ ಶ್ರಮ ಎದ್ದು ಕಾಣುತ್ತಿದೆ.ಮುಂಬರುವ ದಿನಗಳಲ್ಲಿ ಗಾಂಧಿ ಭವನವು ಗಾಂಧಿ ಚಿಂತನಾಶೀಲತೆ ನಿರಂತರವಾಗಿರಲಿ ಎಂದು ಆಶಿಸುತ್ತೇನೆ ಎಂದು […]

ಪ್ರಜಾಪ್ರಭುತ್ವ ದೇಶ ಬಲಿಷ್ಠಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ- ಜಿಲ್ಲಾಧಿಕಾರಿ ಡಾ. ದಾನಮ್ಮನವರ

ವಿಜಯಪುರ: ಪ್ರಜಾಪ್ರಭುತ್ವ ದೇಶವನ್ನು ಬಲಿಷ್ಟಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಚುನಾವಣಾ ಪೂರ್ವ ಹಂತದ ಹಾಗೂ ಚುನಾವಣೆ ದಿನದ ಮತದಾನವು ಪಾರದರ್ಶಕ, ನ್ಯಾಯಯುತ, ಮುಕ್ತ, ಹಾಗೂ ಶಾಂತಿಯುತವಾಗಿ ಜರುಗಿಸುವ ಸದುದ್ದೇಶದಿಂದ ಇಂದು ಒಂದು ಹಂತದ ತರಬೇತಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುಣಾವಣಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಹೇಳಿದರು. ಜಿಲ್ಲಾಡಳಿತದ ವತಿಯಿಂದ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ವಿದ್ಯುನ್ಮಾನ ಮತಯಂತ್ರಗಳ ನಿರ್ವಹಣೆ, ಚುನಾವಣಾ ವಿಷಯ ಹಾಗೂ ಮಾದರಿ ನೀತಿ ಸಂಹಿತೆ ಕುರಿತು […]

ಮಾ. 7 ರಂದು ವಿಜಯಪುರ ಜೋರಾಪುರ ಪೇಠೆಯ ಮಲ್ಲಯ್ಯನ ಓಣಿ ಪಾದಯಾತ್ರೆ ಕಮಿಟಿ ವತಿಯಿಂದ ಶ್ರೀಶೈಲಕ್ಕೆ ಪಾದಯಾತ್ರೆ

ವಿಜಯಪುರ: ನಗರದ ಜೋರಾಪುರ ಪೇಠೆಯ ಮಲ್ಲಯ್ಯನ ಗುಡಿ( ಮಲ್ಲಯ್ಯನ ಓಣಿ)ಯ ಶ್ರೀ ಮಲ್ಲಿಕಾರ್ಜುನ ಪಾದಾಯಾತ್ರಾ ಕಮೀಟಿ ವತಿಯಿಂದ ಮಾರ್ಚ್ 7 ರಿಂದ ಶ್ರೀಶೈಲ ಪಾದಯಾತ್ರೆ ಆರಂಭವಾಗಲಿದೆ. ಸತತ 29 ನೇ ವರ್ಷಗಳಿಂದ ಈ ಸಮಿತಿ ನೇತೃತ್ವದಲ್ಲಿ ಶ್ರೀಶೈಲ ಮಲ್ಲಯ್ಯನ ಭಕ್ತರು ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ.  15 ದಿನಗಳ ಈ ಪಾದಯಾತ್ರೆ ಹಿಟ್ನಳ್ಳಿ, ಮನಗೂಳಿ, ಬಸವನ ಬಾಗೇವಾಡಿ, ಹೂವಿನ ಹಿಪ್ಪರಗಿ, ಕೊಣ್ಣೂರ ಕ್ರಾಸ್, ತಾಳಿಕೋಟಿ, ಬಂಡೆಪ್ಪನ ಸಾಲವಾಡಗಿ, ಹುಣಸಗಿ, ದೇವತಕಲ್ಲ, ಶೆಳ್ಳಗಿ, ಸೂಗೂರ, ಅಂಜುಳ ಹೊಳಿ, ಮಸರಕಲ್ಲ, ಗಬ್ಬೂರ, ಕಲಮಲಾ, […]