ಎಂ. ಎಸ್. ರುದ್ರಗೌಡರ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಅಧ್ಯಕ್ಷರಾಗಿ ನೇಮಕ

ವಿಜಯಪುರ: ಕರ್ನಾಟಕ ದ್ರಾಕ್ಷಿ‌ ಮತ್ತು ವೈನ್ ಬೋರ್ಡ್ ನೂತನ ಅಧ್ಯಕ್ಷರನ್ನಾಗಿ ಬಿಜೆಪಿ ಮುಖಂಡ ಮಲ್ಲನಗೌಡ ಸಾಹೇಬಗೌಡ ರುದ್ರಗೌಡರ ಅವರನ್ನು ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

ಈ ಮುಂಚೆ ಚಿಕ್ಕಬಳ್ಳಾಪುರ ಜಿಲ್ಲೆಯ ಎನ್. ಎಂ. ರವಿನಾರಾಯಣರೆಡ್ಡಿ ಬಿ. ಎನ್. ಮದನಗೊಪಾಲರೆಡ್ಡಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ, ಈ‌ ಆ ಆದೇಶವನ್ನು ರದ್ದುಪಡಿಸಲಾಗಿದೆ.

ಸರಕಾರ ಹೊರಡಿಸಿರುವ ಆದೇಶ ಪ್ರತಿ

ಈ ಹಿನ್ನೆಲೆಯಲ್ಲಿ ಎಂ. ಎಸ್. ರುದ್ರಗೌಡರ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಯತ್ನಾಳ ಬೆಂಬಲಿಗರಾಗಿರುವ ಎಂ. ಎಸ್. ರುದ್ರಗೌಡರ ದ್ರಾಕ್ಷಿ ಬೆಳೆಗಾರರೂ ಆಗಿದ್ದಾರೆ.

Leave a Reply

ಹೊಸ ಪೋಸ್ಟ್‌