ಮಹಿಳಾ ಅಭಿವೃದ್ಧಿಗೆ ಕಾನೂನು ದಾರಿ ದೀಪ ವಾಗಲಿ- ಪ್ರೊ. ಉಜ್ವಲಾ ಸರನಾಡಗೌಡರ

ವಿಜಯಪುರ: ಸ್ವಾವಲಂಬನೆ ಬದುಕಿಗೆ ಮಹಿಳೆಯರಿಗೆ ಕಾನೂನುಗಳ ಅರಿವು ಅವುಗಳನ್ನು ಬಳಸಿಕೊಳ್ಳುವ ಜ್ಞಾನ ಬಹಳ ಅವಶ್ಯವಾಗಿದೆ ಎಂದು ಅಂಜುಮನ್ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಪ್ರೊ. ಉಜ್ವಲಾ ಸರನಾಡಗೌಡರ ಹೇಳಿದ್ದಾರೆ.

ಜಿಲ್ಲಾ ವೀರಶೈವ ಲಿಂಗಾಯ ಮಹಾಸಭಾ ಮಹಿಳಾ ಘಟಕ, ಜಿಲ್ಲಾ ಕದಳಿ ವೇದಿಕೆ ಹಾಗೂ ಸ್ಫೂರ್ತಿ ಮಹಿಳಾ ಗ್ರಾಮಿಣ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಲಿಂ. ಶ್ರೀಮತಿ. ಗಂಗಬಾಯಿ. ಚೆನ್ನಪ್ಪ. ಉಪ್ಪಿನ ಮತ್ತು ಲಿಂ. ಆದಪ್ಪ.ಕರಡಿ ಅವರ ದತ್ತಿ ಸ್ಮರಣೆ ಉಪನ್ಯಾಸ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಮತ್ತು ನಗರ ಬದುಕಿನ ಮಹಿಳೆಯರಿಗೆ ಸಿಗುವ ಅವಕಾಶಗಳಲ್ಲಿ ಅಸಮಾನತೆ ಇದೆ.  ಮಹಿಳೆ ಕುಟುಂಬ ಮತ್ತು ಸಾಮಾಜಿಕ ಜೀವನದಲ್ಲಿ ಹೋರಾಟ ಮಾಡುತ್ತ ತನ್ನ ಬಗೆಗೆ ಕಾಳಜಿಯನ್ನು ನಿರ್ಲಕ್ಷ ಮಾಡಿ ಅನಾರೋಗ್ಯ ದತ್ತ ಮುಖ ಮಾಡಿದ್ದಾಳೆ ಎಂದು ಅವರು ಹೇಳಿದರು.

ಡಾ. ರೇಖಾ ಹಿರೇಮಠ ಮಾತನಾಡಿ, 12ನೇ ಶತಮಾನದ ಶರಣೆಯರು ಅರುಹಿದ ಸಾಮಾಜಿಕ, ಧಾರ್ಮಿಕ ಚಿಂತನೆಗಳು  ಸಾರ್ವಕಾಲಕ್ಕೂ ಬದುಕಿಗೆ ದಾರಿದೀಪವಾಗಿವೆ.  ಮುಕ್ತಾಯಕ್ಕ, ಮೋಳಿಗೆ ಮಹಾದೇವಿ, ಬೊಂತಾದೇವಿ, ಅಕ್ಕಮಹಾದೇವಿ, ಸತ್ಯಕ್ಕ, ಲಕ್ಕಮ್ಮ ಮುಂತಾದ ಶರಣೆಯರ ಪ್ರಗತಿಪರ ಚಿಂತನೆ ಗಳು, ತತ್ವಾದರ್ಶಗಳು, ಮಹಿಳೆಯರ ವ್ಯಕ್ತಿತ್ವ ರೂಪಿಸುವಲ್ಲಿ ಸಹಕರಿಯಾಗಿವೆ ಎಂದು ಹೇಳಿದರು.

ಜಿಲ್ಲಾ ಕದಳಿ ವೇದಿಕೆಯ ಅಧ್ಯಕ್ಷ ಡಾ.ಉಮಾದೇವಿ ಹಿರೇಮಠ ಪ್ರಾಸ್ತಾವಿಕವಾಗಿ ಮಾನಾಡಿದರು.  ಜಿಲ್ಲಾ ವೀರಶೈವ ಮಹಾ ಸಭಾ ಮಹಿಳಾ ಘಟಕ ದ ಅಧ್ಯಕ್ಷೆ ಡಾ, ಬನುದೇವಿ ಸಂಕಣ್ಣವರ, ಸಿದ್ದರಾಮಪ್ಪ ಉಪ್ಪಿನ, ಡಾ. ವಿ. ಸಿ. ನಾಗಠಾಣ, ಮ. ಗು. ಯಾದವಾಡ, ಶಶಿಕಲಾ ಸ್ಥಾವರಮಠ, ವಿದ್ಯಾ ಕೋಟೆಣ್ಣವರ, ಶಶಿಕಲಾ ಇಜೇರಿ, ಭಾರತಿ ಸಿಂಹಾಸನಮಠ, ಕಮಲಾಕ್ಷಿ ಗೆಜ್ಜೆ, ಭಾರತಿ ಭುಯಾಪಸ ಪುಷ್ಪ ಮಹಾಂತಿನಮಠ, ಪದ್ಮಜಾ ಪಾಟೀಲ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಾನಾ ಕ್ಷೇತ್ರಗಳ ಮಹಿಳಾ ಸಾಧಕಿಯರಾದ ಇಂದುಮತಿ ಲಮಾಣಿ, ಅಕ್ಕಮಹಾದೇವಿ ಬುರ್ಲಿ, ಬೋರಮ್ಮ ಮುಗಳ್ಳೊಳ್ಳಿ, ಸಂಗೀತ ಮಠಪತಿ, ಅನ್ನಪೂರ್ಣ ಭೋಸಲೆ ಅವರನ್ನು ಸನ್ಮಾನಿಸಲಾಯಿತು.

ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ನಾನಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.  ದಾಕ್ಷಾಯಿಣಿ ಬಿರಾದಾರ ಸ್ವಾಗತಿಸಿದರು,  ಶಾರದಾ ಐಹೊಳೆ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌