ಬದುಕು ರೂಪಿಸಲು ನೆರವಾದ ನಾಯಕನಿಗೆ ಕ್ಷೀರ ನೀಡಿ ಕೃತಜ್ಞತೆ ಸಲ್ಲಿಸಿದ ಯುವಕ

ವಿಜಯಪುರ: ಹೈನುಗಾರಿಕೆ ಮತ್ತು ತೋಟಗಾರಿಕೆ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾದ ಕೆಪಿಸಿಸಿ ಪ್ರಚಾರ ಸಮಿತಿ‌ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ನಿವಾಸಕ್ಕೆ ಆಗಮಿಸಿದ ಯುವಕನೊಬ್ಬ ಹಾಲು‌ ಸಮರ್ಪಿಸಿ‌ ಕೃತಜ್ಞತೆ ಸಲ್ಲಿಸಿದ ಹೃದಯಸ್ಪರ್ಶಿ ಘಟನೆ ನಡೆಯಿತು. ವಿಜಯಪುರ ಜಿಲ್ಲೆಯ ತಿಕೋಟಾ  ತಾಲೂಕಿನ ಸಿದ್ದಾಪುರ ಕೆ ಗ್ರಾಮದ ಯುವ ರೈತ ವೃಷಭನಾಥ ಯಶವಂತ ಘೋಸರವಾಡ ಬೆಳ್ಳಂಬೆಳಿಗ್ಗೆ ಬೃಹತ್ ಹಾಲಿನ ಕ್ಯಾನ್ ಗಳೊಂದಿಗೆ ಆಗಮಿಸಿ ಎಂ. ಬಿ. ಪಾಟೀಲ ಅವರನ್ನು ಭೇಟಿ ಮಾಡಿದ್ದಾರೆ.  ಅಲ್ಲದೇ, ತಾನು ತಂದಿದ್ದ ಹಾಲನ್ನು […]

ಉತ್ತಮ ಜನಸ್ನೇಹಿ ಸೇವೆ ಒದಗಿಸಲು ಅಧಿಕಾರಿಗಳು ಮುಂದಾಗಬೇಕು- ಶಾಸಕ ರಮೇಶ ಭೂಸನೂರ

ವಿಜಯಪುರ: ಜನರೊಂದಿಗೆ ಪ್ರೀತಿ ವಿಶ್ವಾಸದಿಂದ ವರ್ತಿಸುವುದರ ಮೂಲಕ ಜನಸ್ನೇಹಿ ಆಡಳಿತ ನೀಡಲು ಸರಕಾರಿ ಅಧಿಕಾರಿ, ಸಿಬ್ಬಂದಿ ಮುಂದಾಗಬೇಕು ಎಂದು ಸಿಂದಗಿ ಶಾಸಕ ರಮೇಶ ಭೂಸನೂರ ಹೇಳಿದ್ದಾರೆ. ನಗರದ ಪ್ರಾದೇಶಿಕ ಸಾರಿಗೆ ಇಲಾಖೆ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿರು. ಈ ಕಟ್ಟಡ ಜನಸ್ನೇಹಿ ಕಟ್ಟಡವಾಗಿ ಹೊರಹೊಮ್ಮಲಿ.  ಕಚೇರಿಗೆ ಬರುವ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಂತಾಗಲಿ. ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಕಚೇರಿ ಬರುವ ಸಾರ್ವಜನಿಕರನ್ನು ಪ್ರೀತಿ ವಿಶ್ವಾಸದಿಂದ ಸೇವೆ ಒದಗಿಸಲು ಮುಂದಾಗಬೇಕು. ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವಂತಾಗಬಾರದು. ತ್ವರಿತಗತಿಯಲ್ಲಿ […]

ಲೋಕ್ ಪೊಲ್ ಚುನಾವಣೆ ಪೂರ್ವ ಸಮೀಕ್ಷೆ: ಬಬಲೇಶ್ವರದಲ್ಲಿ ಕಾಂಗ್ರೆಸ್ ಗೆಲುವು- ಎಂ. ಬಿ. ಪಾಟೀಲರ ಕೆಲಸ, ವರ್ಚಸ್ಸು ಪ್ರಮುಖ ಕಾರಣ

ವಿಜಯಪುರ: ಚುನಾವಣೆ ಸಮೀಕ್ಷೆಯಲ್ಲಿ ಮುಂಚೂಣಿಯಲ್ಲಿರುವ ಲೋಕ್ ಪೊಲ್ ಸಂಸ್ಥೆ ನಡೆಸಿರುವ ಚುನಾವಣೆ ಪೂರ್ವ ಸಮೀಕ್ಷೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲರು ಬಬಲೇಶ್ವರ ಮತಕ್ಷೇತ್ರದಲ್ಲಿ ಈ ಬಾರಿಯೂ ಭಾರಿ ಅಂತರದಲ್ಲಿ ಗೆಲುವು ಸಾಧಿಸುವುದು ನಿಚ್ಛಳವಾಗಿದೆ. ಲೋಕ್ ಪೊಲ್ ರಾಷ್ಟ್ರೀಯ ಮಟ್ಟದಲ್ಲಿ ಸಮೀಕ್ಷೆ ನಡೆಸುವ ಮೂಲಕ ಹೆಸರು ಮಾಡಿದ್ದು, ಕರ್ನಾಟಕದ ಚುನಾವಣೆ ಪೂರ್ವ ಸಮೀಕ್ಷೆಯನ್ನೂ ನಡೆಸಿದೆ.  ಈ ಸಮೀಕ್ಷೆಯಲ್ಲಿ ಬಬಲೇಶ್ವರ ಮತಕ್ಷೇತ್ರದಲ್ಲಿ ಎಂ. ಬಿ. ಪಾಟೀಲರು ತಮ್ಮ ಬಿಗೀ ಹಿಡಿತ ಮುಂದುವರೆಸಿದ್ದಾರೆ. ಲೋಕ್ ಪೊಲ್ ಸಂಸ್ಥೆಯ […]

ವಿಧಾನ ಸಭೆ ಚುನಾವಣೆ: ಮತ ಎಣಿಕೆ ಕೇಂದ್ರದ ಪೂರ್ವಭಾವಿ ಪರಿಶೀಲನೆ ನಡೆಸಿದ ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ

ವಿಜಯಪುರ: ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ನಗರದ ಸೈನಿಕ ಶಾಲೆಗೆ ಭೇಟಿ ನೀಡಿ, ಮುಂಬರುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮತ ಎಣಿಕೆ ಕೇಂದ್ರ ಭದ್ರತಾ ಕೊಠಡಿ ಸೇರಿದಂತೆ ನಾನಾ ಕೊಠಡಿಗಳ ಪರಿಶೀಲನೆ ನಡೆಸಿದರು. ಜಿಲ್ಲೆಯ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರಗಳ ದಾಸ್ತಾನು ಕೊಠಡಿ, ಮತ ಎಣಿಕೆ ಕೊಠಡಿ ಮತ್ತು ಭದ್ರತಾ ಕೊಠಡಿಗಳನ್ನು ಸ್ಥಾಪಿಸುವ ಕುರಿತು ಸೈನಿಕ ಶಾಲೆಯ ಪ್ರಾಂಶುಪಾಲರಾದ ಗ್ರೂಫ್ ಕ್ಯಾಪ್ಟನ್ ಪ್ರತಿಭಾ ಬಿμï್ಟ ಹಾಗೂ […]

90 ವರ್ಷದ ವೃದ್ಧನ ಎಡಚಪ್ಪೆ ಮರುಜೋಡಣೆ ಮಾಡಿ ಗಮನ ಸೆಳೆದ ವೈದ್ಯರು

ವಿಜಯಪುರ: ಎಡ ಚಪ್ಪೆ ಎಲುಬು ಮುರಿದುಕೊಂಡಿದ್ದ 90 ವರ್ಷದ ವೃದ್ಧನಿಗೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಆಸ್ಪತ್ರೆಯ ವೈದ್ಯರು ಎಲುಬು ಮರುಜೋಡಣೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.  ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಗುಂದವಾನ ಗ್ರಾಮದ ಮಾರುತಿ ವಾಗಮೋರೆ ಮನೆಯಲ್ಲಿ ಬಿದ್ದು ಎಡ ಚಪ್ಪೆಯ ಎಲುಬು ಮುರಿದುಕೊಂಡಿದ್ದರು.  ನಡೆಯಲು ಬಾರದೇ ಪರದಾಡುತ್ತಿದ್ದ ಇವರಿಗೆ ಹೃದಯ ಸಂಬಂಧಿ ಕಾಯಿಲೆ ಕೂಡ ಇತ್ತು.  ಈ ಹಿನ್ನೆಲೆಯಲ್ಲಿ ಬಿ.ಎಲ್.ಡಿ.ಇ ಆಸ್ಪತ್ರೆಯಗೆ ದಾಖಲಾದ ಇವರನ್ನು ಎಲುಬು, ಕೀಲು […]

ಅಂಗದಾನ, ಮಣ್ಣು ಸಂರಕ್ಷಣೆ ಅರಿವು ಮೂಡಿಸಲು 57 ದಿನ ಏಂಕಾಂಗಿ ಸೈಕಲ್ ಜಾಥಾ- ಬಸವರಾಜ ಶಾಂತಪ್ಪ ದೇವರ ಅವರಿಗೆ ರೈಲು ನಿಲ್ದಾಣದಲ್ಲಿ ಸ್ವಾಗತ

ವಿಜಯಪುರ: ನಗರದ ಆಶ್ರಮ ಬಳಿಯ ಐಶ್ವರ್ಯ ನಗರದ ನಿವಾಸಿ ಮತ್ತು ಆರೋಗ್ಯ ಇಲಾಖೆ ನಿವೃತ್ತ ನೌಕರ ಬಸವರಾಜ ಶಾಂತಪ್ಪ ದೇವರ ಅಂಗದಾನ ಮತ್ತು ಮಣ್ಣು ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ಏಕಾಂಗಿಯಾಗಿ 57 ದಿನ ಸೈಕಲ್ ಜಾಥಾ ಕೈಗೊಂಡಿದ್ದಾರೆ.  68ನೇ ವಯಸ್ಸಿನಲ್ಲಿಯೂ ಈ ನರ್ಮದಾ ಪರಿಕ್ರಮ ಕಾರ್ಯಕ್ರಮದಡಿ 3900 ಕಿ. ಮೀ. ಸೈಕಲ್ ಜಾತಾ ಮುಗಿಸಿಕೊಂಡು ವಾಪಸ್ಸಾದ ಅವರನ್ನು ದೇವರ ಕುಟುಂಬಸ್ಥರು ಮತ್ತು ಸ್ನೇಹಿತರು ಸ್ವಾಗತಿಸಿ ಬರಮಾಡಿಕೊಂಡರು.  ಈ ಸಂದರ್ಭದಲ್ಲಿ ಗುರುಶಾಂತ ನಿಡೋಣಿ, ಶ್ರೀಕಾಂತ ಕಟ್ಟಿಮನಿ, ಡಾ. […]

ಪಾರದರ್ಶಕ, ನಿರ್ಭೀತ ಚುನಾವಣೆಗೆ ಸಜ್ಜಾಗಲು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸೂಚನೆ

ವಿಜಯಪುರ: ಪಾರದರ್ಶಕ, ನಿರ್ಭಿತ, ನ್ಯಾಯ ಸಮ್ಮತ ಹಾಗೂ ಸುವ್ಯವಸ್ಥಿತ ಚುನಾವಣೆ ನಡೆಯುವಂತೆ ನೋಡಿಕೊಳ್ಳುವ ಮೂಲಕ ಚುನಾವಣೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ. ವಿಜಯ ಮಹಾಂತೇಶ ದಾನಮ್ಮನವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.  ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023ರ  ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಆಗಮಿಸಿದ್ದ ಭಾರತ ಚುನಾವಣಾ ಆಯೋಗವು ಚುನಾವಣಾ ಪ್ರಕ್ರಿಯೆ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅಗತ್ಯ ಸಲಹೆ ಸೂಚನೆಗಳನ್ನು […]

ಬಿ.ಎಲ್.ಡಿ.ಇ.ಎ ಎಂಜಿನಿಯರಿಂಗ್ ಕಾಲೇಜಿಗೆ ಇಂಡಿಯಾ ಬುಕ್ ಆಫ್ ರೆಕಾಡ್ಸ್ದಿಂದ ಮೆಚ್ಚುಗೆ ಪ್ರಮಾಣ ಪತ್ರ

ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ. ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಪ್ರಮಾಣ ಪತ್ರ ಲಭಿಸಿದೆ. ಇನ್ನೋವೆಟಮ್ ಎಂಜಿನಿಯರಿಂಗ್ ಕಂಪನಿ ನಡೆಸಿದ ಒಂದು ದಿನದ ಕಾರ್ಯಗಾರದಲ್ಲಿ  150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.  ವಿದ್ಯಾರ್ಥಿಗಳಿಗೆ ವೆಬಸೈಟ ಅಭಿವೃದ್ಧಿ ಹಾಗೂ ಹೋಸ್ಟಿಂಗ್ ಕುರಿತು ತರಭೇತಿ ಕೊಡಲಾಯಿತು.  ಶೈಕ್ಷಣಿಕ ಮತ್ತು ಉಧ್ಯಮ ಸಂಪನ್ಮೂಲ ವ್ಯಕ್ತಿಗಳು, ವಿದ್ಯಾರ್ಥಿಗಳಿಗೆ ವೆಬಸೈಟ ಅಭಿವೃದ್ಧಿ ಹೋ ಸ್ಟಿಂಗ್ ಬಗ್ಗೆ ಮಾಹಿತಿ […]