ಅಂಗದಾನ, ಮಣ್ಣು ಸಂರಕ್ಷಣೆ ಅರಿವು ಮೂಡಿಸಲು 57 ದಿನ ಏಂಕಾಂಗಿ ಸೈಕಲ್ ಜಾಥಾ- ಬಸವರಾಜ ಶಾಂತಪ್ಪ ದೇವರ ಅವರಿಗೆ ರೈಲು ನಿಲ್ದಾಣದಲ್ಲಿ ಸ್ವಾಗತ

ವಿಜಯಪುರ: ನಗರದ ಆಶ್ರಮ ಬಳಿಯ ಐಶ್ವರ್ಯ ನಗರದ ನಿವಾಸಿ ಮತ್ತು ಆರೋಗ್ಯ ಇಲಾಖೆ ನಿವೃತ್ತ ನೌಕರ ಬಸವರಾಜ ಶಾಂತಪ್ಪ ದೇವರ ಅಂಗದಾನ ಮತ್ತು ಮಣ್ಣು ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ಏಕಾಂಗಿಯಾಗಿ 57 ದಿನ ಸೈಕಲ್ ಜಾಥಾ ಕೈಗೊಂಡಿದ್ದಾರೆ.  68ನೇ ವಯಸ್ಸಿನಲ್ಲಿಯೂ ಈ ನರ್ಮದಾ ಪರಿಕ್ರಮ ಕಾರ್ಯಕ್ರಮದಡಿ 3900 ಕಿ. ಮೀ. ಸೈಕಲ್ ಜಾತಾ ಮುಗಿಸಿಕೊಂಡು ವಾಪಸ್ಸಾದ ಅವರನ್ನು ದೇವರ ಕುಟುಂಬಸ್ಥರು ಮತ್ತು ಸ್ನೇಹಿತರು ಸ್ವಾಗತಿಸಿ ಬರಮಾಡಿಕೊಂಡರು. 

ಈ ಸಂದರ್ಭದಲ್ಲಿ ಗುರುಶಾಂತ ನಿಡೋಣಿ, ಶ್ರೀಕಾಂತ ಕಟ್ಟಿಮನಿ, ಡಾ. ರವಿ ಕಟ್ಟಿಮನಿ. ರವಿ ಕಕಮರಿ, ಮಲ್ಲಯ್ಯ ಹಿರೇಮಠ, ಶ್ರೀಶೈಲ ಸಿಂದೂರ, ಸಿ. ಆರ್. ಪರಗೊಂಡ, ಮಲ್ಲನಗೌಡ ಪಾಟೀಲ, ರಾಜು ಹಿರೇಮಠ, ಬಸು ಗಾಳಿ, ರಾಜು ಮಸೂತಿ, ನಿಂಗಯ್ಯ ಮಠ, ಮಲ್ಲು ಗುಗದಡ್ಡಿ, ಮಲ್ಲಯ್ಯ ಹಿರೇಮಠ, ಪ್ರಭು ಮಠ, ದೇವರ, ಲಿಂಗದಳ್ಳಿ, ಶಿರಶ್ಯಾಡ ಕುಟುಂಬಸ್ಥರು ಮತ್ತೀತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌