ಇಂಟೆಲ್ ಇಂಡಿಯಾ ಸ್ಟೇಮ್ ದಿಂದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕಾರ್ಯಕ್ಕೆ ಪ್ರಶಂಸೆ, ನಗದು ಬಹುಮಾನ ವಿತರಣೆ

ವಿಜಯಪುರ: ನಗರದ ಪ್ರತಿಷ್ಠಿತ ಬಿ. ಎಲ್. ಡಿ. ಇ. ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೆಷನ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿಯರಾದ ಸಮೃದ್ಧಿ ಹಿರೇಮಠ ಮತ್ತು ಸೌಭಾಗ್ಯ ಮುದ್ದೇಬಿಹಾಳ ಅವರು ಇಂಟೆಲ್ ಇಂಡಿಯಾ ಪೌಂಡೆಷನ್ ಮಹಿಳೆಯರಿಗಾಗಿ ಲಿಂಕ್ಸ ಸ್ಕಿಲ್ಸ್ ಮತ್ತು ಲರ್ನಿಂಗ್ ಆಯೋಜಿಸಿದ್ದ ವಿ. ಎಲ್. ಎಸ್. ಐ ಹ್ಯಾಕಥಾನ್‌ನಲ್ಲಿ ಭಾಗವಹಿಸಿ ಪ್ರಶಂಸೆ ಪತ್ರ ಮತ್ತು ರೂ. 5000 ನಗದು ಬಹುಮಾನ ಪಡೆದಿದ್ದಾರೆ.

ಈ ಕುರಿತು ಜಂಟಿ ಮಾಧ್ಯಮ ಪ್ರಕಟಣೆ ನೀಡಿರುವ ಕಾಲೇಜಿನ ಪ್ರ‍್ರಾಚಾರ್ಯ ಡಾ. ವಿ. ಜಿ. ಸಂಗಮ ಮತ್ತು ವಿಭಾಗದ ಮುಖ್ಯಸ್ಥ ಡಾ. ಉಮೇಶ ದಿಕ್ಷೀತ್ ಈ ಮಾಹಿತಿ ನೀಡಿದ್ದಾರೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮುದ್ದೇನಹಳ್ಳಿ ಕೇಂದ್ರದ ಪ್ರಾಧ್ಯಾಪಕ ಡಾ. ತನುಜಾ ಮತ್ತು ಸಚೀನ ಪಾಟೀಲ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.  ಈ ವಿದ್ಯಾರ್ಥಿನಿಯರು ಪ್ರೋ. ಮಂಗಳಾ ಜೋಳದ ಮತ್ತು ಡಾ. ದಾನೇಶ್ವರಿ ಹತ್ತಿ ಅವರ ಮಾರ್ಗದರ್ಶನದ ಪಡೆದಿದ್ದರು.  ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಕಾಲೇಜಿನ ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

ಹೊಸ ಪೋಸ್ಟ್‌