ಅಗಸನಹಳ್ಳಿಯಲ್ಲಿ ಗಮನ ಸೆಳೆದ ವಿಠ್ಠಲ- ರುಕ್ಮಿಣಿ ದೇವರ ಜಾತ್ರೆ

ವಿಜಯಪುರ: ಬಬಲೇಶ್ವರ ತಾಲೂಕಿನ ಕಾಖಂಡಕಿ ಪಕ್ಕದಲ್ಲಿರುವ ಅಗಸನಹಳ್ಳಿ ಗ್ರಾಮದಲ್ಲಿ ವಿಠ್ಠಲ- ರುಕ್ಮಿಣಿ ದೇವರ ಜಾತ್ರೆ ವಿಜೃಂಭಣೆಯಿಂದ ನೆರವೇರಿತು.  ಕಳೆದ ಮೂರು ದಿನಗಳಿಂದ ದೇವಾಲಯ ಆವರಣದಲ್ಲಿ ಕೀರ್ತನೆ ಭಜನೆ ದೇವರ ಧ್ಯಾನ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.  ಪಾಂಡುರಂಗನ ಪಲ್ಲಕ್ಕಿ ಉತ್ಸವದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಯಲ್ಲಿ ಹರಿ ಭಜನೆ ನಾನಾ ವಾದ್ಯ ಮೇಳದೊಂದಿಗೆ ಮೆರವಣಿಗೆ ನಡೆಯಿತು. ಜಿಲ್ಲೆಯಷ್ಟೇ ಅಲ್ಲ, ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸಂತ ಮಂಡಳಿ ಸದಸ್ಯರು ಭಕ್ತಿಭಾವದ ಮತ್ತು ಗ್ರಾಮೀಣ ಸೊಗಡಿನ ಕಾರ್ಯಕ್ರಮವನ್ನು […]

ವಿಜಯಪುರ ನಗರದ ಪುರಾತನ ಸ್ವಯಂ ಶಿವಲಿಂಗ ದೇವಸ್ಥಾನಕ್ಕೆ ಯತ್ನಾಳ ಭೇಟಿ- ಉತ್ಖನನ ಮಾಡಿಸುವ ಭರವಸೆ

ವಿಜಯಪುರ: ನಗರದ ಹೋಟೆಲ್ ಆದಿಲ್‍ಶಾಹಿ ಹಿಂಭಾಗದಲ್ಲಿರುವ ಪುರಾತನ ಸ್ವಯಂ ಶಿವಲಿಂಗ ದೇವಸ್ಥಾನ ಕುರಿತು ಉತ್ಖನನ ಮಾಡಿಸಲಾಗುವುದು ಎಂದು ನಗರ ಶಾಸಕರಾದ ಬಸನಗೌಡ ರಾ ಪಾಟೀಲ ಯತ್ನಾಳ ಹೇಳಿದರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಈ ಐತಿಹಾಸಿಕವಾದ ಸುಂದರ ದೇವಸ್ಥಾನದ ಪರಿಚಯ ಜನರಿಗೆ ಇರಲಿಲ್ಲ.  ಇನ್ನೂ ಮುಂದೆ ಇಲ್ಲಿ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು. ದೇವಸ್ಥಾನ ಕುರಿತಂತೆ ಮುಧೋಳದ ಸಂಶೋಧಕ ಡಾ. ಸಂಗಮೇಶ ಕಲ್ಯಾಣಿ ಅವರಿಂದ ಮಾಹಿತಿ ಪಡೆದ ಶಾಸಕರು, ನಂತರ ಭಾರತೀಯ […]

ಸರಕಾರಗಳು ಎಲ್ಲ ಪದವೀಧರ ಶಿಕ್ಷಕರಿಗೆ ಉದ್ಯೋಗ ನೀಡಲು ಕ್ರಮ ಕೈಗೊಳ್ಳಬೇಕು- ಆಶಾ ಎಂ. ಪಾಟೀಲ

ವಿಜಯಪುರ: ಸರಕಾರಗಳು ದೇಶದ ಭವಿಷ್ಯ ರೂಪಿಸುವ ಎಲ್ಲ ಪದವೀಧರ ಶಿಕ್ಷಕರಿಗೆ ಉದ್ಯೋಗ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಶಾ ಎಂ. ಪಾಟೀಲ ಹೇಳಿದ್ದಾರೆ. ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈಗ ಯಾವುದೇ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರನ್ನು ನೇಕವಾದಿ ನೇಮತ ಮಾಡಿಕೊಳ್ಳುವುದಿಲ್ಲ.  ಸರಕಾರ ಅನುಮತಿ ನೀಡಿದ ನಂತರ ಮಾರ್ಗಸೂಚಿಯಂತೆ ಎಲ್ಲ ಪ್ರಕ್ರಿಯೆ ನಡೆಯುತ್ತದೆ. ಖಾಸಗಿ […]

ಸೈನಿಕ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ- ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಚಾಲನೆ

ವಿಜಯಪುರ: ನಗರದಲ್ಲಿರುವ ರಾಜ್ಯದ ಪ್ರಥಮ ಸೈನಿಕ ಶಾಲೆಯ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಅವರ ಪತ್ನಿ ಶ್ವೇತಾ ಎಂ. ದಾನಮ್ಮನವರ ಚಾನೆ ನೀಡಿದರು. ಇದಕ್ಕೂ ಮೊದಲು ಅಶ್ವಾರೂಡ ವಿದ್ಯಾರ್ಥಿಗಳು ಅತಿಥಿಗಳ:್ನು ಕ್ರೀಡಾಂಗಣಕ್ಕೆ ವೈಭವದ ಸ್ವಾಗತ ನೀಡಿ ಕರೆತಂದರು. ಬಳಿಕ ಮಾತನಾಡಿದ ಜಿಲ್ಲಾಧಿಕಾರಿಳು ಕ್ರೀಡೆಗಳು ಮನಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯಕವಾಗುತ್ತವೆ.  ಎಲ್ಲ ವಿದ್ಯಾರ್ಥಿಗಳು ಈ ಕ್ರೀಡೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕುಯ ಈ ಕ್ರೀಡಾಕೂಟದಲ್ಲಿ ಎಲ್ಲರೂ ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು ಎಂದು ಹೇಳಿದರು. […]

ಕಾಲಜ್ಞಾನದ ಹೇಳಿಕೆಗೆ ಹೆಸರಾದ ಕತ್ನಳ್ಳಿ ಸದಾಶಿವ ಜಾತ್ರೆಗೆ ಕ್ಷಣಗಣನೆ ಆರಂಭ- ಜ್ಞಾನ ದೀಪೋತ್ಸವ ಈ ಬಾರಿಯ ವಿಶೇಷ ಶ್ರೀ ಶಿವಯ್ಯ ಸ್ವಾಮೀಜಿ

ವಿಜಯಪುರ: ಚಹಾ ಮಾರುವವ ದೇಶದ ಪ್ರಧಾನಿಯಾಗುತ್ತಾನೆ.  ವೈದ್ಯರೂ ತಲೆಗೆ ಕೈ ಹಚ್ಚಿ ಕುಳಿತುಕೊಳ್ಳುವ ರೋಗ ಬಾಧಿಸುತ್ತೆ ಸೇರಿದಂತೆ ನಾನಾ ಭವಿಷ್ಯಗಳನ್ನು ಹೇಳುವ ಮೂಲಕ ಖ್ಯಾತವಾಗಿರುವ ಬಸವನಾಡು ವಿಜಯಪುರ ಜಿಲ್ಲೆಯ ಕತ್ನಳ್ಳಿ ಶ್ರೀ ಸದಾಶಿವ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿರುವ ಶ್ರೀ ಶಿವಯ್ಯ ಸ್ವಾಮೀಜಿ, ಈ ಬಾರಿಯ ಜಾತ್ರೆಯ ವಿಶೇಷತೆಗಳನ್ನು ವಿವರವಾಗಿ ಮಾಹಿತಿ ನೀಡಿದ್ದಾರೆ. ಮಾ. 21 ರಿಂದ 25ರ ವರೆಗೆ ಜಾತ್ರೆ ನಡೆಯಲಿದೆ.  ಈ ಬಾರಿಯ ಜಾತ್ರೆಯಲ್ಲಿ ಜ್ಞಾನ ದೀಪೋತ್ಸವ […]