ಜಲನಗರ ಬಸ್ ನಿಲ್ದಾಣಕ್ಕೆ ಅಂದವಾದ ಬಣ್ಣ ಹಚ್ಚಿ ಚಂದ ಮಾಡಿದ ಗಾನಯೋಗಿ ಸಂಘದ ಯುವಕರು

ವಿಜಯಪುರ: ನಗರದಲ್ಲಿ ಹದಗೆಟ್ಟಿದ್ದ ಜಲನಗರ ಬಸ್ ಸ್ಟಾಪ್ ನ್ನು ಗಾನಯೋಗಿ ಸಂಘದ ಯುವಕರು ಅಂದವಾದ ಬಣ್ಣ ಹಚ್ಚಿ ಚಂದವಾಗಿ ಕಾಣುವಂತೆ ಮಾಡಿದ್ದಾರೆ. 

ಅಷ್ಟೇ ಅಲ್ಲ, ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಆದರ್ಶ ಗುಣಗಳ ಹಾಗೂ ಅವರ ಸಂಕ್ಷೀಪ್ತ ಮಾಹಿತಿಯ ಕುರಿತು ಫಲಕಗಳನ್ನು ಬಸ್ ನಿಲ್ದಾಣದಲ್ಲಿ ಅಳವಡಿಸಿದ್ದಾರೆ.

ಈ ಸಂದರ್ಭದಲ್ಲಿ ಗಾನಬನ ಸಂಘದ ಅಧ್ಯಕ್ಷ ಪ್ರಕಾಶ ಆರ್. ಕೆ ಮಾತನಾಡಿ, ವಿಜಯಪುರ ಮಗರದ ಜನತೆ ಈ ಬಸ್ ನಿಲ್ದಾಣವನ್ನು ಶುಚಿಯಾಗಿಟ್ಟು ಪರಿಸರವನ್ನು ಸುಂದರವಾಗಿಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಾಹುಬಲಿ ಶಿವಣ್ಣವರ, ರಾಜಕುಮಾರ ಹೊಸಟ್ಟಿ, ವೀರೇಶ ಸೊನ್ನಲಗಿ, ಸಚಿನ ವಾಲಿಕಾರ, ವಿಠ್ಠಲ ಗುರುವಿನ, ರವಿ ರತ್ನಾಕರ, ಸಂತೋಷ ಚವ್ಹಾಣ, ಮಹೇಶ ಕುಂಬಾರ, ವಿಕಾಸ ಕಂಬಾಗಿ, ರೇವಣಸಿದ್ಧ ಹಿರೇಮಠ, ಪ್ರಮೋದ, ಸಂದೀಪ, ಬಾಬು ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌