ಗುಮ್ಮಟ ನಗರಿಯಿಂದ ಯತ್ನಾಳಗೆ ಟಿಕೆಟ್ ನೀಡಬೇಕು- ಬಿಜೆಪಿ ಕಾರ್ಪೋರೇಟರ್ ಗಳ ಆಗ್ರಹ

ವಿಜಯಪುರ: ಗುಮ್ಮಟ ನಗರಿ ವಿಜಯಪುರ ನಗರ ಮತಕ್ಷೇತ್ರದಿಂದ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ಆಗ್ರಹಿಸಿದ್ದಾರೆ.

ವಿಜಯಪುರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೇಮಾನಂದ ಬಿರಾದಾರ, ಮಾಜಿ ಉಪಮೇಯರ್ ರಾಜೇಶ ದೇವಗಿರಿ ಮತ್ತೀತರರು, ಕಳೆದ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಉಚ್ಛಾಟಿತರಾಗಿರುವ ಮುಖಂಡರು ಯತ್ನಾಳ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ವಿಜಯಪುರದಲ್ಲಿ ಬಿಜೆಪಿ ಕಾರ್ಪೋರೇಟರ್ ಗಳು ಜಂಟಿ ಸುದ್ದಿಗೋಷ್ಠಿ ನಡೆಸಿದರು

 

ಮಹಾನಗರ ಪಾಲಿಕೆಯ ಬಿಜೆಪಿಯ 18 ಕಾರ್ಪೋರೇಟರ್ ಗಳು ಯತ್ನಾಳರ ಬೆಂಬಲಕ್ಕೆ ನಿಂತಿದ್ದೇವೆ.  ಈ ಬಾರಿ ಯತ್ನಾಳರನ್ನು 25 ಸಾವಿರ್ಕಕೂ ಹೆಚ್ಚು ಮತಗಳಿಂದ ಆಯ್ಕೆ ಮಾಡಲು ನಗರದ ಜನತೆ ನಿರ್ಧರಿಸಿದ್ದಾರೆ.  ಯತ್ನಾಳ ಬಿಟ್ಟು ಬೇರೆಯವರಿಗೆ ಬಿಜೆಪಿ ಟಿಕೆಟ್ ನೀಡಿದರೂ ನಾವೆಲ್ಲರೂ ಪಕ್ಷದ ಅಧಿಕೃತ ಅಭ್ಯರ್ಥಿಯ ಪರ ಪ್ರಚಾರ ಮಾಡುತ್ತೇವೆ.  ಆದರೆ, ರಾಜಕೀಯದಲ್ಲಿ ಹಿರಿಯರಾಗಿರುವ ಯತ್ನಾಳ ಜನಪ್ರೀಯ ನಾಯಕರಾಗಿದ್ದು, ಅವರ ಬದಲು ಅಪ್ಪು ಪಟ್ಟಣಶೆಟ್ಟಿ ಅವರಿಗೆ ಯಾವುದೇ ಕಾರಣಕ್ಕೂ ವಿಜಯಪುರ ನಗರದಿಂದ ಟಿಕೆಟ್ ನೀಡಬಾರದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕಾರ್ಪೋರೇಟರ್ ಗಳಾದ ಜವಾಹರ ಗೋಸಾವಿ, ರಾಜಶೇಖರ ಕುರಿ, ಮಲ್ಲಿಕಾರ್ಜುನ ಗಡಗಿ, ಎಂ. ಎಸ್. ಕರಡಿ, ರಾಜು ಜಾಧವ, ಕಿರಣ ಪಾಟೀಲ, ವಿಠ್ಠಲ ಹೊಸಪೇಟಿ, ಮುಖಂಡ ಚಂದ್ರು ಚೌಧರಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌