ಎಂ. ಬಿ. ಪಾಟೀಲ ಶ್ರೇಯಸ್ಸು ಬಯಸಿ ಯುವಕರಿಂದ ಕಣಬೂರಿನಲ್ಲಿ ದೀರ್ಘದಂಡ ನಮಸ್ಕಾರ

ವಿಜಯಪುರ: ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ಅತೀ ಹೆಚ್ಚು ಮತಗಳಿಂದ ಗೆಲುವು ಸಾಧಿಸಲಿ ಮತ್ತು ಸರಕಾರದಲ್ಲಿ ಉನ್ನತ ಸ್ಥಾನಕ್ಕೇರಲಿ ಎಂದು ಪ್ರಾರ್ಥಿಸಿ ಯುವಕರು ದೀರ್ಘದಂಡ ನಮಸ್ಕಾರ ಹಾಕಿ ಗಮನ ಸೆಳೆದಿದ್ದಾರೆ.

ಬಬಲೇಶ್ವರ ತಾಲೂಕಿನ ಕಣಬೂರ ಗ್ರಾಮದ 24 ಯುವಕರು ಕೃಷ್ಣಾ ನದಿಯಿಂದ ಗ್ರಾಮದ ಶ್ರೀ ರಾಚೋಟೇಶ್ವರ ದೇವಸ್ಥಾನದ ವರೆಗೆ ದೀರ್ಘದಂಡ ನಮಸ್ಕಾರ ಹಾಕಿದರು.  ಅಲ್ಲದೇ, ಎಂ. ಬಿ. ಪಾಟೀಲರು ಉನ್ನತ ಸ್ಥಾನಕ್ಕೇರಲಿ.  ಈ ಭಾಗದಲ್ಲಿ ಮತ್ತು ನಾಡಿನಾದ್ಯಂತ ಹೆಚ್ಚೆಚ್ಚು ಅಭಿವೃದ್ಧಿ ಮಾಡಲಿ ಎಂದು ಪ್ರಾರ್ಥಿಸಿದರು.

ಎಂ. ಬಿ. ಪಾಟೀಲರ ಶ್ರೇಯಸ್ಸು ಬಯಸಿ ಕಣಬೂರ ಯುವಕರು ದೀರ್ಘದಂಡ ನಮಸ್ಕಾರ ಹಾಕಿದರು

ಈ ಸುದ್ದಿ ತಿಳಿದು ಗ್ರಾಮಕ್ಕೆ ಆಗಮಿಸಿದ ಎಂ. ಬಿ. ಪಾಟೀಲ ಅವರು, ಯುವಕರ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದರು.  ಬಳಿಕ ಮಾತನಾಡಿದ ಅವರು, ನೀವು ತೋರಿದ ಪ್ರೀತಿ ಮತ್ತು ಅಭಿಮಾನಕ್ಕೆ ಹೃತ್ಪೂವರ್ಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.  ನಿಮಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ.  ನಿಮ್ಮ ಮ್ಮ ಪ್ರೀತಿ, ವಿಶ್ವಾಸ, ಆಶೀರ್ವಾದ ಸದಾ ನನ್ನ ಮೇಲೆ ಇರಲಿ.  ನಾನೂ ಕೂಡ ನಿಮ್ಮೆಲ್ಲರ ಪ್ರೀತಿ ಮತ್ತು ಅಭಿಮಾನವನ್ನು ಉಳಿಸಿಕೊಂಡು ನಿಮ್ಮೆಲ್ಲರ ಅಭ್ಯುದಯಕ್ಕೆ ಈ ಮತಕ್ಷೇತ್ರದ ಅಭಿವೃದ್ಧಿಗೆ, ಈ ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಧನ್ಯವಾದ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಾಜೇಸಾಬ ಮುಲ್ಲಾ, ಭೀಮಶಿ ಮಾಸರಡ್ಡಿ, ಚಂದ್ರಶೇಖರ ಇಮ್ಮಣ್ಣವರ, ಸಂಜೀವಗೌಡ ಪಾಟೀಲ, ಸುನೀಲಗೌಡ ಪಾಟೀಲ, ಚಿಕ್ಕಯ್ಯ ಮಠದ, ಬಿ. ಎಚ್. ಮುಂಬಾರೆಡ್ಡಿ, ಎಚ್. ಎಸ್. ಕೋರಡ್ಡಿ, ಬಸವರಾಜ ದೇಸಾಯಿ, ಕುಮಾರ ದೇಸಾಯಿ, ರಾಯಪ್ಪ ಮಂಟೂರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌