ಮಖಣಾಪುರ ಎಲ್. ಟಿ.-2 ರಲ್ಲಿ ಗ್ರಾಮದೇವತೆ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ- ಡಾ. ದೇವಾನಂದ ಚವ್ಹಾಣ ಭಾಗಿ

ವಿಜಯಪುರ: ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯ ವಿಜಯಪುರ ತಾಲೂಕಿನ ಮಖಣಾಪುರ ತಾಂಡಾ 2ರಲ್ಲಿ ಅತ್ಯಂತ ಸಂಭ್ರಮದಿಂದ ಜರುಗಿದ ಗ್ರಾಮ ದೇವತೆ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವದಲ್ಲಿ ಡಾ. ದೇವಾನಂದ ಫೂ. ಚವ್ಹಾಣ ಭಾಗವಹಿಸಿ ಜಗನ್ಮಾತೆಯ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಯಿ ದುರ್ಗಾದೇವಿಯನ್ನು ಭಕ್ತಿಯಿಂದ ನೆನೆದರೆ ಜೀವನದಲ್ಲಿ ಕಷ್ಟ-ನಷ್ಟಗಳು ದೂರ ಆಗುತ್ತದೆ.  ಮಖಣಾಪುರ ಜನರಿಗೆ ದುರ್ಗಾದೇವಿಯೇ ಶ್ರೀರಕ್ಷೆಯಾಗಿ ನಿಂತಿದ್ದಾಳೆ ಎಂದು ಹೇಳಿದರು.

ಮಖಣಾಪುರ ಎಲ್. ಟಿ. -1 ರಲ್ಲಿ ನಡೆದ ಧಾರ್ಮಿಕ ಕಾರ್ಯಕ್ರದಮಲ್ಲಿ ಡಾ. ದೇವಾನಂದ ಚವ್ಹಾಣ ಮತ್ತೀತತರು ಉಪಸ್ಥಿತರಿದ್ದರು

ಮಖಣಾಪೂರ ಜನತೆ ನನ್ನ ಮೇಲೆ ಪ್ರೀತಿ ವಿಶ್ವಾಸ ಇಟ್ಟುಕೊಂಡು ಇಲ್ಲಿಯ ವರೆಗೆ ಕರೆಸಿದ್ದಕ್ಕೆ ನಾನು ಚಿರಋಣಿಯಾಗಿದ್ದೇನೆ. ಈ ಐದುವರ್ಷಗಳಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸ ತಿಳಿದ  ನೀವು ನನ್ನನ್ನು ನಿಮ್ಮ ಮನೆ ಮಗನಾಗಿಸಿಕೊಂಡಿದ್ದೀರಿ ಇದೆ ಪ್ರೀತಿ ವಿಶ್ವಾಸವನ್ನು ನಾನು ಎಂದಿಗೂ ಅಲ್ಲಗಳೆಯದೆ ತಾಯಿ ಶ್ರೀ ದುರ್ಗಾದೇವಿ ಸಾಕ್ಷಿಯಾಗಿ ನಾಗಠಾಣ ಕ್ಷೇತ್ರದ ಅಭಿವೃದ್ಧಿಗಾಗಿ ಸದಾಕಾಲ ದುಡಿಯುತ್ತೇನೆ ಎಂದು ಅ;ರು ಹೇಳಿದರು.

ಈ ಸಂಧರ್ಭದಲ್ಲಿ ಶ್ರೀ ಸೋಮನಿಂಗ ಮಹಾಸ್ವಾಮಿಗಳು, ಮುಖಂಡರಾದ ರಾಜು ಚವ್ಹಾಣ, ತಾಂಡಾ ನಾಯಕರಾದ ಸಚೀನ ನಾಯಕ, ನೀಲು ಕಾರಬಾರಿ, ಗೋವಾ ಸಚೀನ ಸೇರಿದಂತೆ ತಾಂಡಾದ ನಿವಾಸಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌