ನಾಗಠಾಣ(ಮೀ) ಬಿಜೆಪಿ ಅಭ್ಯರ್ಥಿ ಸಂಜೀವ ಐಹೊಳೆ ಪರ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಬಿರುಸಿನ ಪ್ರಚಾರ

ವಿಜಯಪುರ: ನಾಗಠಾಣ(ಮೀ) ಬಿಜೆಪಿ ಅಭ್ಯರ್ಥಿ ಸಂಜೀವ ಐಹೊಳೆ ಪರ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಬಿರುಸಿನ ಪ್ರಚಾರ ನಡೆಸಿದರು. 

ವಿಜಯಪುರ ತಾಲೂಕಿನ ಖತಿಜಾಪೂರ, ಜುಮನಾಳ, ಹಿಟ್ನಳ್ಳಿ, ಉತ್ನಾಳ, ಗ್ರಾಮಗಳಲ್ಲಿ ಅವರು ಮತಚಾನೆ ಮಾಡಿದರು.  ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಿಷ್ಠೆಯಿಂದ ಪಕ್ಷವನ್ನು ಸಂಘಟಿಸಿದ ಸಾಮಾನ್ಯ ಕಾರ್ಯಕರ್ತನಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿದೆ.  ಜನಪರ ನಿಲುವಿನ ಸಂಜೀವ ಐಹೊಳಿ‌ ಜನಸ್ಪಂದನೆಯ ಮನೋಭಾವವುಳ್ಳ ವ್ಯಕ್ತಿ, ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವಿದೆ.  ‌ಜನತೆ ಅವರಿಗೆ ಮತ ಹಾಕುವ ಮೂಲಕ ಆಶೀರ್ವಾದ ಮಾಡಬೇಕು ಎಂದು ಹೇಳಿದರು.

ಉಮೇಶ ಕಾರಜೋಳ ನಾಗಠಾಣ(ಮೀ) ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಂಜೀವ ಐಹೊಳೆ ಪರ ಪ್ರಚಾರ ಕೈಗೊಂಡರು

ಡಬಲ್ ಎಂಜಿನ್ ಬಿಜೆಪಿ ಸರಕಾರದ ಜನಪರ ಯೋಜನೆಗಳು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಿವೆ.  ಕಾರ್ಯಕರ್ತರು ಸರಕಾರದ ಅಭಿವೃದ್ಧಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ತಂತಮ್ಮ ವಾರ್ಡಗಳಲ್ಲಿ ಹೆಚ್ಚಿನ ಮತವನ್ನು ಬಿಜೆಪಿಗೆ ಹಾಕಿಸಿ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿ‌ಜೆಪಿ ಅಭ್ಯರ್ಥಿಯಾದ ಸಂಜೀವ ಐಹೊಳೆ, ಬಿಜೆಪಿ ನಾಗಠಾಣ ಮಂಡಲ ಅಧ್ಯಕ್ಷ ನವೀನ ಅರಕೇರಿ, ಸಾಹೇಬಗೌಡ ಬಿರಾದಾರ, ಉಮೇಶ ಕೋಳಕೂರ, ಅನೀಲ‌ ಬಿರಾದಾರ, ಸಿದ್ದನಗೌಡ ಬಿರಾದಾರ, ರಾಜಕುಮಾರ ಪಾಟೀಲ,ರಾಕೇಶ ಕೋಟಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌