ಯತ್ನಾಳ ದಿನಕ್ಕೆ ನಾಲ್ಕು ಬಾರಿ ವಿಷ ಕಾರುತ್ತಾರೆ- ಮತದಾರರು ತಕ್ಕಪಾಠ ಕಲಿಸುವ ಕಾಲ ಬಂದಿದೆ- ಎಂ. ಬಿ. ಪಾಟೀಲ

ವಿಜಯಪುರ: ಬಸನಗೌಡ ಪಾಟೀಲ ಯತ್ನಾಳ ದಿನಕ್ಕೆ ನಾಲ್ಕು ಬಾರಿ ವಿಷ ಕಾರುತ್ತಾರೆ ಎಂದು ಕೆ. ಪಿ. ಸಿ. ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಿಂದ ಯತ್ನಾಳ ಜಾತಿ, ಧರ್ಮಗಳ ಬಗ್ಗೆ ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲ ಮತ್ತು ರಾತ್ರಿ ವಿಷ ಕಾರುತ್ತಿದ್ದಾರೆ.  ನಿರಂತರವಾಗಿ ದ್ವೇಷವನ್ನು ಬಿತ್ತುವ, ಅವಮಾನಕರ ಮತ್ತು ಅಶ್ಲೀಲ ಹೇಳಿಕೆ ನೀಡುತ್ತ ಬಂದಿದ್ದಾರೆ.  ಬಾಯಿ ತೆರೆದರೆ ಬೆಂಕಿ ಉಗುಳುವಂತೆ ವಿಷ ಕಾರುತ್ತಿದ್ದಾರೆ […]