ನಾಗಠಾಣ ಮತಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ದೇವಾನಂದ ಚವ್ಹಾಣ ಪ್ರಚಾರ

ವಿಜಯಪುರ: ನಾಗಠಾಣ ಜೆಡಿಎಸ್ ಅಭ್ರ್ಥಿ ದೇವಾನಂದ ಚವ್ಹಾಣ ಮತಕ್ಷೇತ್ರ ವ್ಯಾಪ್ತಿಯ ವಿಜಯಪುರ ತಾಲೂಕಿನ ಹೇಗಡಿಹಾಳ, ಉಕುಮನಾಳ, ಕತಕನಹಳ್ಳಿ, ಹಾಲಹಳ್ಳಿ, ಶಿರಾಡೋಣ, ರೇವತಗಾಂವ, ದಸೂರ, ಉಮರಜ, ಗೋವಿಂದಪೂರ, ನಿವರಗಿ, ಹೊಳಿಸಂಖ, ಹತ್ತಳ್ಳಿ, ಹಾವಿನಾಳ, ಗೋಡಿಹಾಳ, ಬರಡೋಲ, ಬರಡೋಲ ತಾಂಡಾ, ಗ್ರಾಮಗಳಲ್ಲಿ ಮನೆ-ಮನೆಗೆ ತೆರಳಿ ಪ್ರಚಾರ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಐದು ವರ್ಷಗಳಿಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದು, ನಾಗಠಾಣ ಕ್ಷೇತ್ರದ ಪ್ರತಿಯೊಂದು ಕುಟುಂಬಗಳಿಗೆ ಅಭಿವೃದ್ಧಿ ಯೋಜನೆಗಳು ತಲುಪಿವೆ ಎಂದು ಹೇಳಿದರು.

ನಾಗಠಾಣ ಮತಕ್ಷೇತ್ರದ ನಾನಾ ಕಡೆ ಜೆಡಿಎಸ್ ಅಭ್ಯರ್ಥಿ ದೇವಾನಂದ ಚವ್ವಾಣ ಪ್ರಚಾರ ನಡೆಸಿದರು

ಎಚ್‌. ಡಿ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಶ್ರೀಶಕ್ತಿ ಸಂಘಗಳಲ್ಲಿ ಸಾಲ ಮನ್ನಾ ಮಾಡುತ್ತಾರೆ.  ಹೆಣ್ಣು ಮಕ್ಕಳೆಗೆ ಭಾಗ್ಯ ಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದಾರೆ.  ಕುಮಾರಸ್ವಾಮಿ ಅವರು ಸರ್ವಜನಾಂಗ ಶಾಂತಿಯ ತೋಟ ಕಟ್ಟಲು ಪಣ ತೊಟ್ಟಿದ್ದಾರೆ.  ಅವರ ಪರವಾಗಿ ನಾಗಠಾಣ ಕ್ಷೇತ್ರದ 2ನೇ ಬಾರಿ ನನಗೆ ಟಿಕೆಟ್ ಕೊಟ್ಟಿದ್ದಾರೆ.  ಮತ್ತೊಮ್ಮೆ ನೀವು ನನಗೆ ಮತವನ್ನು ನೀಡಿ ಕುಮಾರಸ್ವಾಮಿ ಅವರನ್ನು ಮುಖ್ಯ ಮಂತ್ರಿ ಮಾಡುವುದರ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡೋಣ ಎಂದು ಹೇಳಿದರು.

ಈ ಸಂಧರ್ಭದಲ್ಲಿ ರವಿಕುಮಾರ ಚವ್ಹಾಣ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.   ಮುಖಂಡರು, ಕಾರ್ಯಕರ್ತರು, ಸದಸ್ಯರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌