ಕೇಂದ್ರ ಸರಕಾರದಿಂದ ದ್ವೇಷ ರಾಜಕಾರಣ ಆರೋಪ- ಗುಮ್ಮಟ ನಗರಿಯಲ್ಲಿ ಕೈ ಕಾರ್ಯಕರ್ತರಿಂದ ಪ್ರತಿಭಟನೆ

ವಿಜಯಪುರ: ಕೇಂದ್ರ ಸರಕಾರ ಅಕ್ಕಿ ವಿತರಣೆ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ದ್ವೇಷ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಡಾ. ಬಿ. ಆರ್. ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ನಾನಾ ಮುಖಂಡರು, ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದ ಜನತೆಗೆ ಐದು ಜನಪರ ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಹೇಳಿತ್ತು.  ಅದರಲ್ಲಿ ಅನ್ನಭಾಗ್ಯ ಯೋಜನೆಯೂ ಒಂದಾಗಿದೆ.  ರಾಜ್ಯ ಹಸಿವು ಮುಕ್ತವಾಗಬೇಕು ಎಂಬ ಒಳ್ಳೆಯ ಉದ್ದೇಶದಿಂದ ಬಡವರಿಗೆ ತಲಾ 10 ಕೆಜಿ ಅಕ್ಕಿ ಉಚಿತವಾಗಿ ನೀಡಬೇಕೆಂದು ಮಾಡಿದ್ದ ಸಂಕಲ್ಪದಂತೆ ಸಿಎಂ ಎಸ್. ಸಿದ್ಧರಾಮಯಯ್ ನೇತೃತ್ವದ ಸರಕಾರ ಯೋಜನೆ ಜಾರಿಗೆ ಮುಂದಾಗಿದೆ.  ಕೇಂದ್ರ ಸರಕಾರದಿಂದ ನಿರೀಕ್ಷೆಯಂತೆ ಅಕ್ಕಿ ಪಡೆಯಲು ರಾಜ್ಯ ಸರಕಾರ ಕೇಂದ್ರ ಆಹಾರ ಇಲಾಖೆಯಿಂದ ಭರವಸೆಯ ಪತ್ರವನ್ನು ಪಡೆದಿತ್ತು.  ಆದರೆ, ಕೇಂದ್ರ ಬಿಜೆಪಿ ಸರಕಾರ ಇದಕ್ಕೆ ಅಡ್ಡಗಾಲು ಹಾಕಿದ.  ಕೊಟ್ಟ ಭರವಸೆಯನ್ನು ಒಂದೇ ದಿನದಲ್ಲಿ ಹಿಂಪಡೆದು ದ್ವೇಷ ರಾಜಕಾರಣ ಆರಂಭ ಮಾಿದೆ.  ಕರ್ನಾಟಕದಲ್ಲಿ ಹೀನಾಯ ಸೋಲು ಕಂಡು ಕಂಗಾಲಾಗಿರುವ ಬಿಜೆಪಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಬಿಜೆಪಿಗೆ ಮುಳುವಾಗುತ್ತೆ ಎಂದು ಭಾವಿಸಿ ಜನಪರ ಯೋಜನೆಗಳಿಗೆ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಕಾರ್ಯಕರ್ತರು ವಿಜಯಪುರದಲ್ಲಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ ಮುಶ್ರೀಫ್, ಜಿಲ್ಲಾ ಉಪಾಧ್ಯಕ್ಷರಾದ ವೈಜನಾಥ ಕರ್ಪೂರಮಠ, ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ, ಪ್ರಚಾರ ಸಮಿತಿ ಸಂಚಾಲಕ ಸಂಗಮೇಶ ಬಬಲೇಶ್ವರ, ಪಿಸಿಸಿ ಸದಸ್ಯ ಬಿ. ಎಸ್. ಪಾಟೀಲ(ಯಾಳಗಿ), ಎಸ್.ಸಿ. ಘಟಕದ ಜಿಲ್ಲಾ ಅಧ್ಯಕ್ಷ ರಮೇಶ ಗುಬ್ಬೇವಾಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ಮಹಾದೇವಿ ಗೋಕಾಕ, ಕೆಪಿಸಿಸಿ ವೈದ್ಯಕೀಯ ವಿಭಾಗದ ಪ್ರಧಾನ ಕಾರ್ಯದರ್ಶಿ ಡಾ.ರವಿ ಬಿರಾದಾರ, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಸಾಹೇಬಗೌಡ ಬಿರಾದಾರ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಬ್ಬೀರ ಜಾಗೀರದಾರ, ಎನ್‌ಎಸ್‌ಯುಐ ಜಿಲ್ಲಾ ಅಧ್ಯಕ್ಷ ಅಮಿತ ಚವ್ಹಾಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐ.ಎಂ. ಇಂಡಿಕರ ಮುಂತಾದವರು ಮಾತನಾಡಿದರು.

ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ಡಾ.ಗಂಗಾಧರ ಸಂಬಣ್ಣಿ, ಆಜಾದ ಪಟೇಲ, ಬ್ಲಾಕ್ ಅಧ್ಯಕ್ಷರುಗಳಾದ ಜಮೀರಅಹ್ಮದ ಬಕ್ಷಿ, ಆರತಿ ಶಹಾಪೂರ, ಸುರೇಶ ಹಾರಿವಾಳ, ಗುರು ತಾರನಾಳ, ರಫೀಕ ಪಕಾಲೆ, ಸಿದ್ದು ಗೌಡನ್ನವರ, ರಾಮಚಂದ್ರ ಹಕ್ಕೆ, ಅಂಗ ಘಟಕಗಳ ಅಧ್ಯಕ್ಷರಾದ ಮಹ್ಮದಹನೀಫ ಮಕಾನದಾರ, ಪಯಾಜ ಕಲಾದಗಿ, ನಿಂಗಪ್ಪ ಸಂಗಾಪೂರ, ಆನಂದ ಜಾಧವ, ಎಂ.ಬಿ. ಮಂಡೆಗಾರ, ಲಾಲಸಾಬ ಕೊರಬು, ರಾಜೇಶ್ವರಿ ಚೋಳಕೆ, ಜಯಶ್ರೀ ಭಾರತೆ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ವಸಂತ ಹೊನಮೊಡೆ, ಎಂ.ಜಿ. ಯಂಕAಚಿ, ಭೀಮಾಶಂಕರ ಸಿ. ಸಾವುಕಾರ, ಅಪ್ತಾಬಖಾದ್ರಿ ಇನಾಮದಾರ, ಚನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ, ಶರಣಪ್ಪ ಯಕ್ಕುಂಡಿ, ಅಷ್ಫಾಕ ಮನಗೂಳಿ, ಮಲ್ಲಿಕಾರ್ಜುನ ಪರಸಣ್ಣವರ, ಅಕ್ಬರ್ ನದಾಫ ಮಹಾನಗರಪಾಲಿಕೆ ಸದಸ್ಯರಾದ ಅಬ್ದುಲ್‌ರಜಾಕ ಹೊರ್ತಿ, ಜಮೀರಅಹ್ಮದ ಬಾಂಗಿ, ದಿನೇಶ ಹಳ್ಳಿ, ಅಪ್ಪು ಪೂಜಾರಿ, ಶಬ್ಬೀರ ಮನಗೂಳಿ, ಆಸೀಫ್ ಶಾನವಾಲೆ, ಬಂದೇನವಾಜ ಬೀಳಗಿ, ಇದ್ರೂಸ್ ಬಕ್ಷಿ, ಮಿಲಿಂದ ಚಂಚಲಕರ, ಇಲಿಯಾಸ ಸಿದ್ದಿಕಿ, ಮೈನುದ್ದೀನ ಬೀಳಗಿ, ಸಂತೋಷ ಚವ್ಹಾಣ, ಶಬ್ಬೀರ ಪಾಟೀಲ, ಮಹಿಳಾ ಪದಾಧಿಕಾರಿಗಳಾದ ಗಂಗೂಬಾಯಿ ಧುಮಾಳೆ, ಆಸ್ಮಾ ಕಾಲೇಬಾಗ, ಸುಜಾತಾ ಶಿಂದೆ, ಜಯಶ್ರೀ ಹದನೂರ, ಅಂಬಿಕಾ ಪಾಟೀಲ, ಮಹಾನಂದಾ ಬಮ್ಮಣ್ಣಿ, ಅಕ್ರಮ ಮಾಶಾಳಕರ, ಧನರಾಜ ಎ., ಕೆ.ಎಸ್. ಪಾರಶೆಟ್ಟಿ, ಹಾಜಿ ಪಿಂಜಾರ, ಪರಶುರಾಮ ಹೊಸಮನಿ, ಸಂತೋಷ ಬಾಲಗಾಂವಿ, ಸತೀಶ ಅಡವಿ, ಸತೀಶ ದೊಡಮನಿ, ಬಾಬುಸಾಬ ಯಾಳವಾರ, ಮಾದೇವ ಜಾಧವ, ನಾಗೇಶ ತಾಳಿಕೋಟಿ, ಪರಶುರಾಮ ಜಮಖಂಡಿ, ಬದ್ರು ಮಣೂರ, ಕಾಶಿನಾಥ ರಾಠೋಡ, ಗವಿಮಠ, ಈರಪ್ಪ ಕುಂಬಾರ, ಸಂತೋಷ ಕಾಂಬಳೆ, ಶಾಕೀರ ಖಾಜಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌