ಉತ್ನಾಳದ ಚನ್ನಮ್ಮ ವಿದ್ಯಾವರ್ಧಕ ಸಂಸ್ಥೆ ಮತ್ತೀತರ ಸಂಘಗಳಿಂದ ಹಿರಿಯ ಪತ್ರಕರ್ತ ಸುಶೀಲೇಂದ್ರ ನಾಯಕ ಸೇರಿ ಐವರಿಗೆ ವೀರ ಸಾವರ್ಕರ ಪ್ರಶಸ್ತಿ ಪ್ರಧಾನ

ವಿಜಯಪುರ: ಹಿರಿಯ ಪತ್ರಕರ್ತ ಸುಶಿಲೇಂದ್ರ ನಾಯಕ ಅವರು ಪತ್ರಿಕಾ ರಂಗಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ವಿಜಯಪುರ ನಗರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಕಲಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ವೀರ ಸಾವರ್ಕರ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಸುಶೀಲೇಂದ್ರ ನಾಯಕ

ಉತ್ನಾಳ ಚನ್ನಮ್ಮ ವಿದ್ಯಾವರ್ಧಕ ಸಂಸ್ಥೆ, ಮಲ್ಲಸರ್ಜ ದೇಸಾಯಿ ಅಂತಾರಾಷ್ಟ್ರೀಯ ಕ್ರೀಡಾ ತರಬೇತಿ ಕೇಂದ್ರ, ಅಖಿಲ ಕರ್ನಾಟಕ ಪಂಚಮಸಾಲಿ ಪರಿಷತ್ತು, ಅಖಿಲ ಭಾರತ ಪಂಚಮಸಾಲಿ ಪರಿಷತ್ತು, ಶ್ರೀ ಬೆಳವಡಿ ಮಲ್ಲಮ್ಮ ದೈಹಿಕ ಮತ್ತು ಸೈನಿಕರ ತರಬೇತಿ ಕೇಂದ್ರದ ಸಂಯುಕ್ತಾಶ್ರ್ಯದಲ್ಲಿ ಈ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಇತರ ಕ್ಷೇತ್ರಗಳ ಸಾಧಕರಾದ ಬಸವರಾಜ ಬ ಬಿರಾದಾರ, ಅಮರನಾಥ ಆರಾಧ್ಯ, ಗುರುರಾಜ ಹೊಸಕೋಟಿ, ಎಚ್. ಎ. ಕಾಂಚನಮಾಲಾ ಅವರನ್ನೂ ಸನ್ಮಾನಿಸಿ ಗೌರವಿಸಲಾಯಿತು.

Leave a Reply

ಹೊಸ ಪೋಸ್ಟ್‌