ಕಡೂರಿನಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಬಸವನಾಡಿನ ಯೋಗಪಟುಗಳ ಉತ್ತಮ ಸಾಧನೆ

ಚಿಕ್ಕಮಗಳೂರು: ಜಿಲ್ಲೆಯ ಕಡೂರಿನಲ್ಲಿ ಸ್ನೇಹಮಯಿ ವಿವೇಕಾನಂದ ಯೋಗ ಕೇಂದ್ರದಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ ಮತ್ತು ಚಾಂಪಿಯನ್ ಆಫ್ ಚಾಂಪಿಯನ್ ಹಾಗೂ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ವಿಜಯಪುರದ ಯೋಗಪಟಗಳು ಉತ್ತಮ ಸಾಧನೆ ಮಾಡಿದ್ದಾರೆ.

ವಿಜಯಪುರ ಜ್ಞಾನಯೋಗಾಶ್ರಮದಲ್ಲಿ ಶ್ರೀ ಬಸವಾನಂದ ಸ್ವಾಮೀಜಿಗಳಿಂದ ಯೋಗಪಟುಗಳು ಆಶೀರ್ವಾದ ಪಡೆದರು

ವಿಜಯಪುರದ ಯೋಗ ಗುರು ಎಂ. ಪಿ. ದೊಡಮನಿ ಅವರ ಮಾರ್ಗದರ್ಶನದಲ್ಲಿ ಬಸವನಾಡಿನ ಯೋಗಪಟುಗಳಾದ ರಾಜು ಮಾನೆ ಮತ್ತು ಮಡಿವಾಳಪ್ಪ ದೊಡಮನಿ ಪ್ರಥಮ ಸ್ಥಾನ ಪಡೆದಿದ್ದಾರೆ.  ಐಶ್ವರ್ಯ ರಜಪೂತ ಹಾಗೂ ಸೋಮನಾಥ ಗುರುಮಠ 5ನೇ ಸ್ಥಾನ ಪಡೆದಿದ್ದಾರೆ.  ವಿಜೇತರು ಪ್ರಶಸ್ತಿ ಮತ್ತು ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ.

ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರು ಸಾಧನೆ ಮಾಡಿದ ಯೋಗಪಟುಗಳನ್ನು ಅಭಿನಂದಿಸಿದರು

ಈ ಸ್ಪರ್ಧೆಯಲ್ಲಿ ವಿಜಯಪುರದ ಮಧುಮತಿ, ಶ್ರಾವಣಿ, ಸಾಧನಾ, ವೈಶಾಲಿ, ಪೂಜಾ, ರಕ್ಷಿತಾ ಕೂಡ ಭಾಗವಹಿಸಿದ್ದರು.

ಸಾಧನೆ ಮಾಡಿದ ಯೋಗಪಟುಗಳಿಗೆ ವಿಜಯಪುರದಲ್ಲಿ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮಿಜಿ ಮತ್ತು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಶುಭ ಹಾರೈಸಿ ಆರ್ಶಿವದಿಸಿದರು.

Leave a Reply

ಹೊಸ ಪೋಸ್ಟ್‌