ಹುಂಡೈ ಎಕ್ಸ್ಟರ್ ಕಾರ್ ಬಿಡುಗಡೆ ಮಾಡಿದ ಮಹಾನಗರ ಪಾಲಿಕೆ ಆಯುಕ್ತ ಬದರುದ್ದೀನ್ ಸೌದಾಗರ

ವಿಜಯಪುರ: ನಗರದ ಹೊರವಲಯದಲ್ಲಿರುವ ನಾರಾಯಣ ಹುಂಡೈ ಕಾರ್ ಶೋರೂಂ ನಲ್ಲಿ ಹುಂಡೈ ಎಕ್ಸ್ ಟರ್ ನೂತನ ವಾಹನವನ್ನು ಮಹಾನಗರ ಪಾಲಿಕೆ ಆಯುಕ್ತ ಬದರುದ್ದಿನ್ ಸೌದಾಗರ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. 

ಕಾರ್ ಶೋರೂಂ ಮಾಲೀಕ ಗೋವಿಂದ ಜೋಶಿ ನೂತನ ಕಾರಿನ ಕುರಿತು ಮಾತನಾಡಿ, ನೂತನ ಕಾರು ತನ್ನದೇಯಾದ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು,  ಹೊಸ ಎಕ್ಸ್ಟರ್ ಧ್ವನಿ ಆಜ್ಞೆಗಳೊಂದಿಗೆ ಎಲೆಕ್ಟ್ರಿಕ್ ಸನ್‌ರೂಫ್ (ಮೊದಲ-ಸೆಗ್ಮೆಂಟ್) ಮತ್ತು ಡ್ಯುಯಲ್ ಕ್ಯಾಮೆರಾಗಳೊಂದಿಗೆ ಡ್ಯಾಶ್‌ಕ್ಯಾಮ್ ಅನ್ನು ತೆರೆದುಕೊಳ್ಳುತ್ತದೆ ಎಂದು ತಿಳಿಸಿದರು.

ಎರಡನೆಯದು 2.31 ಇಂಚಿನ ಐಅಆ ಡಿಸಪ್ಲೆ, ಸ್ಮಾಟ್ಫೋðನ್ ಅಪ್ಲಿಕೇಶನ್-ಆಧಾರಿತ ಸಂಪರ್ಕ, ಮತ್ತು ಡ್ರೈವಿಂಗ್(ಸಾಮಾನ್ಯ), ಈವೆಂಟ್(ಸುರಕ್ಷತೆ), ಮತ್ತು ರಜೆ(ಸಮಯ-ನಡೆಯುವಿಕೆ) ನಂಥ ಬಹು ರೆಕಾರ್ಡಿಂಗ್ ವಿಧಾನಗಳನ್ನು ಹೊಂದಿದೆ.  ಅಲ್ಲದೇ, ಇದು ಆರು ಏರ್‌ಬ್ಯಾಗ್‌ಗಳು, ಊ- ಆಕಾರದ ಐಇಆ ಆಖಐ ಗಳು, ಡ್ಯುಯಲ್-ಟೋನ್ ಪೇಂಟ್‌ಜಾಬ್, ರೂಫ್ ರೈಲ್‌ಗಳು, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಐಇಆ ಟೈಲ್ ಲೈಟ್‌ಗಳು, ಫಾಕ್ಸ್ ಸ್ಕಿಡ್ ಪ್ಲೇಟ್‌ಗಳು ಮತ್ತು ಡೈಮಂಡ್-ಕಟ್ ಅಲಾಯ್ ಚಕ್ರಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಅವರು ಮಾಹಿತಿ ನೀಡಿದರು.

ವಿಜಯಪುರದಲ್ಲಿ ಹುಂಡೈ ಎಕ್ಸ್ ಟರ್ ನೂತನ ವಾಹನವನ್ನು ಮಹಾನಗರ ಪಾಲಿಕೆ ಆಯುಕ್ತ ಬದರುದ್ದಿನ್ ಸೌದಾಗರ ಮಾರುಕಟ್ಟೆಗೆ ಬಿಡುಗಡೆ ಮಾಡಿದರು

2023 ಹ್ಯುಂಡೈ ಎಕ್ಸ್ಟರ್ 1.2-ಲೀಟರ್ ಓಂ ಪೆಟ್ರೋಲ್ ಎಂಜಿನ್‌ನಿಂದ ಮ್ಯಾನುವಲ್ ಮತ್ತು ಒಖಿ ಘಟಕಗಳೊಂದಿಗೆ ಜೋಡಿಸಲ್ಪಡುತ್ತದೆ.  ಸಿಎನ್‌ಜಿ ಆವೃತ್ತಿಯೂ ಸಹ ಆಫರ್‌ಗಾಗಿ ಇರುತ್ತದೆ .  ಮೈಕ್ರೋ-ಎಸ್‌ಯುವಿ ಏಳು ರೂಪಾಂತರಗಳು ಮತ್ತು ಒಂಬತ್ತು ಬಣ್ಣಗಳಲ್ಲಿ ಲಭ್ಯವಿರುತ್ತದೆ ಎಂದು ಮಾಲೀಕ ಗೋವಿಂದ ಜೋಶಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ರಾಜಕುಮಾರ ಹಿರೇಮಠ, ಇಪ್ಕೋ ಟೋಕಿಯೋ ಜನರಲ್ ಇನ್ಶೂರೆನ್ಸ್ ಬಿಸಿನೆಸ್ ಹೆಡ್ ಗಣಪತಿ ಭಟ್, ಅಕೌಂಟ್ ಹೆಡ್ ಸಂಗಮೇಶ ಅಂಗಡಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌