ಜೈನ ಮುನಿ ಕೊಲೆ ಪ್ರಕರಣ- ಹಂತಕರನ್ನು ಗಲ್ಲಿಗೇರಿಸಬೇಕು- ಮನಗೂಳಿ ಹಿರೇಮಠದ ಸಂಗನಬಸವ ಶ್ರೀಗಳ ಆಗ್ರಹ

ವಿಜಯಪುರ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದ ಜೈನ ಮುನಿಗಳ ಕೊಲೆ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಹಿರೇಮಠದ ಶ್ರೀ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ.

ಈ ಕುರಿತು ವಿಡಿಯೋ ಸಂದೇಶ ನೀಡಿರುವ ಅವರು, ಜೈನಮುನಿಗಳ ಕೊಲೆಯನ್ನು ಖಂಡಿಸುತ್ತೇನೆ.  ಇಂದು ರಾಜ್ಯದಲ್ಲಿ ಯಾವುದೇ ಧರ್ಮದ ಸ್ವಾಮೀಜಿಗಳು ತಮ್ಮ ಸ್ವಂತಕ್ಕಾಗಿ ಯಾವ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ.  ಈ ಸಮಾಜದ ಜನರೇ ತಂದೆ-ತಾಯಿ, ಈ ಸಮಾಜದ ಜನತೆಯೇ ನಮ್ಮ ಬಂಧು- ಬಳಗ ಎಂಬ ರೀತಿಯಲ್ಲಿ ಸ್ವಾಮೀಜಿಗಳು ಜೀವನ ಮಾಡುತ್ತಿರುತ್ತಾರೆ.  ಅದರಲ್ಲಿ ಜೈನಮುನಿ ಸ್ವಾಮೀಜಿಗಳ ಮಠದಲ್ಲಿಯೇ ಇದ್ದುಕೊಂಡು ಅವರ ಹತ್ತಿರದಲ್ಲಿಯ ಇರುವ ವ್ಯಕ್ತಿಗಳು ವಿದ್ಯುತ್ ಶಾಕ್ ನೀಡಿ ಚಿತ್ರಹಿಂಸೆ ನೀಡಿ ಅಮಾನುಷವಾಗಿ ಕೊಲೆ ಮಾಡಿದ್ದಾರೆ.  ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರು ಸುಮ್ಮನೆ ಕೂಡಬಾರದು.  ಬೇರೆ ಬೇರೆ ವಿಚಾರಕ್ಕೆ ನೀವು ಬೆಂಬಲ ಕೊಡುತ್ತೀರಿ.  ಅವರಿಗೆ ಸಹಕಾರ ಕೊಡುತ್ತೀರಿ.  ಸರಕಾರ ಕೂಡಲೇ ಕೊಲೆ ಮಾಡಿರುವ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದ್ದಾರೆ.

ಜೈನ ಧರ್ಮದ ಎಲ್ಲ ಭಕ್ತಾದಿಗಳು ಹಾಗೂ ಸ್ವಾಮೀಜಿ ಘಟನೆಯನ್ನು ಖಂಡಿಸಿ ಸೂಕ್ತ ಸ್ವಾಮೀಜಿಗಳ ರಕ್ಷಣೆಗೆ ಆಗ್ರಹಿಸಿ ಉಪವಾಸ ಮಾಡುತ್ತಿದ್ದಾರೆ.  ಸರಕಾರದವರು ಎಚ್ಚರ ವಹಿಸಿ ಸ್ವಾಮೀಜಿಗಳಿಗೆ ಬೆಂಬಲ ನೀಡಿ ನ್ಯಾಯ ಒದಗಿಸಬೇಕು ಎಂದು ಸಂಗನಬಸವ ಶಿವಾಚಾರ್ಯರು ಆಗ್ರಹಿಸಿದ್ದಾರೆ.

Leave a Reply

ಹೊಸ ಪೋಸ್ಟ್‌