ರಾಹುಲ ಗಾಂಧಿ ವಿರುದ್ಧ ಕೇಂದ್ರ ಸರಕಾರ ದ್ವೇಷ ರಾಜಕಾರಣ ಆರೋಪ- ಗುಮ್ಮಟ ನಗರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಮೌನ ಪ್ರತಿಭಟನೆ

ವಿಜಯಪುರ: ಪ್ರಜಾಪ್ರಭುತ್ವ ಉಳಿವಿಗಾಗಿ ದೇಶದ ಹಿತಾಸಕ್ತಿ ಕಾಪಾಡಲು ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ವಿರುದ್ಧ ಕೇಂದ್ರ ಸರಕಾರ ಸುಳ್ಳು ಆರೋಪಗಳನ್ನು ಮಾಡಿ ದ್ವೇಷ ರಾಜಕೀಯ ನಡೆಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ವಿಜಯಪುರ ನಗರದಲ್ಲಿ ಮೌನ ಪ್ರತಿಭಟನೆ ನಡೆಸಿದರು. 

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಹೋರಾಟದಲ್ಲಿ ಪಾಲ್ಗೋಂಡ ನಾನಾ ಮುಖಂಡರು ರಾಹುಲ ಗಾಂಧಿ ಅವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ ಮಾತನಾಡಿ, ರಾಹುಲ್ ಗಾಂಧಿ ರವರ ಜನಪ್ರಿಯತೆ ಮತ್ತು ಜನಪರ ಕಾಳಜಿಯನ್ನು ಕಂಡು ಕೇಂದ್ರ ಬಿಜೆಪಿ ಸರಕಾರ ನಿದ್ದೆಗೆಡಿಸಿಕೊಂಡಿದೆ.  ಅಲ್ಲದೇ, ರಾಹುಲ ಗಾಂಧಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿ ಅಧಿಕಾರದ ಪ್ರಭಾವ ಬೀರಿ ನ್ಯಾಯಾಂಗವನ್ನು ತಮ್ಮ ಕೈಗೊಂಬೆಯಾಗಿ ಕೆಲಸ ಮಾಡುವಂತೆ ಮಾಡಿದ ಎಂದು ಆರೋಪಿಸಿದರು.

ವಿಜಯಪುರದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದರು

 

ರಾಹುಲ ಗಾಂಧಿ ಅವರು ಸತ್ಯವನ್ನು ಅಂಜದೆ, ಅಳುಕದೆ ಮಾತನಾಡಿದ್ದು ತಪ್ಪಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಏನೂ ಮಾತನಾಡಬಾರದೆ? ರಾಜಕೀಯವಾಗಿ ಟೀಕೆ ಸಹಿಸದವರು ಇಂದು ಅಧಿಕಾರದಲ್ಲಿದ್ದು, ರಾಹುಲ ಗಾಂಧಿ ಅವರ ಏಳಿಗೆ ಸಹಿಸಲಾರದೆ ತಾಳ್ಮೆ ಕಳೆದುಕೊಂಡವರಂತೆ ಮಾಡುತ್ತಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ.  ರಾಹುಲ ಗಾಂಧಿ ವಿರುದ್ಧ ಬಿಜೆಪಿ ಮುಖಂಡರು ಯಾವ ರೀತಿ ತಮ್ಮ ಭಾಷೆಗಳನ್ನು ಬಳಸಿದ್ದಾರೆ ಎಂಬುದನ್ನು ಮೊದಲು ಮನಗಾಣಬೇಕು.  ಇಂಥ ಟೀಕೆಗಳಿಗೆ ಎಂದೂ ನಮ್ಮ ನಾಯಕರು ತಲೆಕೆಡಿಸಿಕೊಳ್ಳಲಿಲ್ಲ.  ಆ ಟೀಕೆಗಳು ರಾಜಕೀಯವಾಗಿ ತೆಗೆದುಕೊಂಡು ತಮ್ಮ ಸರಳತೆಯನ್ನು ಮೆರೆದಿರುತ್ತಾರೆ.  ಇದನ್ನು ಬಿಜೆಪಿಯವರು ಕಲಿಯಬೇಕಾಗಿದೆ.  ನ್ಯಾಯಾಲಯ ತೀರ್ಪು ಕೊಟ್ಟ ಘಳಿಗೆಯಲ್ಲಿಯೇ ರಾಹುಲ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಬಿಜೆಪಿಯ ಕೇಂದ್ರ ಸರಕಾರ ದ್ವೇಷ ಸಾಧಿಸಿರುವುದು ಇಡೀ ದೇಶದ ಜನರಿಗೆ ಅರ್ಥವಾಗಿದೆ.  ಇಂಥ ಕೀಳುಮಟ್ಟದ ರಾಜಕಾರಣವನ್ನು ಬಿಜೆಪಿಯವರು ಮಾಡುತ್ತಿದ್ದರೂ ರಾಹುಲ ಗಾಂಧಿ ಅವರು ತಮಗಾದ ಅನ್ಯಾಯವನ್ನು ಜನತಾ ನ್ಯಾಯಾಲಯದ ಮುಂದಿಡುತ್ತಿದ್ದಾರೆ.  ಇದಕ್ಕೆ ಇಡೀ ದೇಶಾದ್ಯಂತ ಬೆಂಬಲ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಂದ ಹಿಡಿದು ಮುಖಂಡರು, ಹಾಗೂ ಜನಸಾಮಾನ್ಯರೂ ಕೂಡ ನೈತಿಕ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ರಾಹುಲ ಆಪ್ ಆಗೇ ಬಡೋ, ಹಮ್ ಆಪಕೆ ಸಾಥ ಹೈ ಘೋಷವಾಕ್ಯದೊಂದಿಗೆ ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಇಡೀ ದೇಶ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿ, ದುರಹಂಕಾರಿ ಬಿಜೆಪಿಯನ್ನು ಮನೆಗೆ ಕಳುಹಿಸುವ ದಿನ ದೂರವಿಲ್ಲ ಎಂದು ಪ್ರೊ. ರಾಜು ಆಲಗೂರ ಹೇಳಿದರು.

ಈ ಮೌನ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಶರಣಪ್ಪ ಸುಣಗಾರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಆಜಾದ ಪಟೇಲ, ಡಾ. ಗಂಗಾಧರ ಸಂಬಣ್ಣಿ, ಮಹಾದೇವಿ ಗೋಕಾಕ, ಕೆಪಿಸಿಸಿ ವಕ್ತಾರ ಎಸ್. ಎಂ. ಪಾಟೀಲ ಗಣಿಹಾರ, ಮುಖಂಡರಾದ ಕೆ. ಎಫ್. ಅಂಕಲಗಿ, ವಿದ್ಯಾವತಿ ಅಂಕಲಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಮೀರಅಹ್ಮದ ಬಕ್ಷಿ, ಆರತಿ ಶಹಾಪೂರ, ಜಾವಿದ ಮೊಮೀನ, ಸುರೇಶ ಹಾರಿವಾಳ, ಜಿಲ್ಲಾ ಅಂಗಘಟಕಗಳ ಅಧ್ಯಕ್ಷರಾದ ಶಬ್ಬೀರ ಜಾಗೀರದಾರ, ವಿದ್ಯಾರಾಣಿ ತುಂಗಳ, ನಿಂಗಪ್ಪ ಸಂಗಾಪೂರ, ವಿಜಯಕುಮಾರ ಘಾಟಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಸಾಹೇಬಗೌಡ ಬಿರಾದಾರ, ಹೊನಮಲ್ಲ ಸಾರವಾಡ, ಹಾಜಿಲಾಲ ದಳವಾಯಿ, ಚನಬಸಪ್ಪ ನಂದರಗಿ, ಸಮದ ಸುತಾರ, ಶರಣಪ್ಪ ಯಕ್ಕುಂಡಿ, ಅಸ್ಪಾಕ ಮನಗೂಳಿ, ಕನ್ನಾನ ಮುಶ್ರೀಫ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಬ್ದುಲ್‌ ಖಾದಿರ ಖಾದಿಮ, ಪಯಾಜ ಕಲಾದಗಿ, ಮಹಾನಗರಪಾಲಿಕೆ ಸದಸ್ಯರಾದ ಜಮೀರಅಹ್ಮದ ಬಾಂಗಿ, ಮೈನುದ್ದೀನ್ ಬೀಳಗಿ, ಮುಖಂಡರಾದ ಸಂತೋಷ ದೊಡಮನಿ, ಜಯಶ್ರೀ ಭಾರತೆ, ರಾಜೇಶ್ವರಿ ಚೋಳಕೆ, ಗಂಗೂಬಾಯಿ ಧುಮಾಳೆ, ಹಮಿದಾ ಪಟೇಲ, ಭಾರತಿ ಹೊಸಮನಿ, ಸರಿತಾ ನಾಯಕ, ಲಲಿತಾ ದೊಡಮನಿ, ಜಯಶ್ರೀ ಹದನೂರ, ಲಕ್ಷ್ಮಿ ಕ್ಷೀರಸಾಗರ, ಸಮಿಮಾ ಅಕ್ಕಲಕೋಟ, ರಮಿಜಾ ನದಾಫ್, ಕಾಶಿಬಾಯಿ ಹಡಪದ, ವರ್ಷಾ ಭೋವಿ, ಮುಸ್ಕಾನ, ಅಕಬರ ನಾಯಕ, ಸಂತೋಷ ಬಾಲಗಾಂವಿ, ಪರಶುರಾಮ ಹೊಸಮನಿ, ತಾಜುದ್ದೀನ್ ಖಲೀಫಾ, ಬಾಬು ಯಾಳವಾರ, ಮಹಾದೇವ ರಾವಜಿ, ಲಾಲಸಾಬ ಕೊರಬು, ವಸೀಮ್ ತಾವರಗೇರಿ, ಕೃಷ್ಣಾ ಲಮಾಣಿ, ಪಿರೋಜ ಬಳಬಟ್ಟಿ, ವಸಿಮ್ ಇನಾಮದಾರ, ಅಶೋಕ ಪಾಟೀಲ, ಅನಿಲಕುಮಾರ ಯರನಾಳ, ಜೆ. ಎಂ. ಮೋಮಿನ್, ಸರ್ಫರಾಜ ಇನಾಮದಾರ, ಸಿದ್ದು ಹಡಪದ, ಲಕ್ಷ್ಮಣ ಚಲವಾದಿ, ಇಮ್ರಾನ ಮಕಾನದಾರ, ನಜಿರಸಾಬ ಬೀಳಗಿ, ಅಬ್ದುಲ್‌ ಸತ್ತಾರ ಬಾಗವಾನ, ಕೆ. ಎ. ಮುಶ್ರೀಫ್, ಮೈಬೂಬ ಚೌಧರಿ, ಕೃಷ್ಣಾ ಲಮಾಣಿ, ಚಂದ್ರಕಾಂತ ತೊರವಿ, ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌