ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿ- ಗುಮ್ಮಟ ನಗರಿಯ ವಿದ್ಯಾರ್ಥಿ ಉಸ್ಮಾನಗಣಿ ವಾಲಿಕಾರ ಪ್ರಥಮ ಸ್ಥಾನ

ವಿಜಯಪುರ: ನಗರದ ಸ್ಟಾರ್ ಬುಡೋಕಾನ್ ಕರಾಟೆ ಕ್ಲಬ್ ಕರಾಟೆ ತರಬೇತಿಯ ವಿದ್ಯಾರ್ಥಿಗಳು ಗದಗದಲ್ಲಿ ನಡೆದ ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಉಸ್ಮಾನಗಣಿ ಎಂ. ವಾಲಿಕಾರ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.

ಅಲ್ಲದೇ, ವಿದ್ಯಾರ್ಥಿಗಳಾದ ಸ್ವಾಲೇಹಾ ಎಂ. ವಾಲಿಕಾರ, ಝಕಿ ಐ. ಹೊನ್ನುಟಗಿ ದ್ವಿತಿಯ ಸ್ಥಾನ ಪಡೆದಿದ್ದಾರೆ.  ವಿದ್ಯಾರ್ಥಿ ಸಫೀಯಾ ಎಂ. ವಾಲಿಕಾರ ತೃತಿಯ ಸ್ಥಾನ ಪಡೆದುಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಎಂದು ಕ್ಲಬ್ ನ ಕರಾಟೆ ತರಬೇತಿದಾರ ನಾಸೀರ ಎಂ. ಇಂಡಿಕರ, ಮುತ್ತುರಾಜ ಲಿಂಗದಳ್ಳಿ, ಮುಸ್ತಾಕಅಹ್ಮದ ವಾಲಿಕಾರ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌