ಸಾಲ ತೀರಿಸಲು, ಆರ್ಮಿ, ಪಿ ಎಸ್ ಐ ಪರೀಕ್ಷೆ ಪಾಸು ಮಾಡು, ಬೂಂದಿ ಲಾಡು ಅರ್ಪಿಸುವೆ- ಹನುಮಂತನ ಹುಂಡಿಯಲ್ಲಿ ಭಕ್ತರ ವಿಶಿಷ್ಠ ಬೇಡಿಕೆಗಳ ಚೀಟಿಗಳು
ವಿಜಯಪುರ: ನಾನು ಮಾಡಿದ ಸಾಲ ತೀರಿಸಲು ಪರಿಹಾರಕ್ಕೆ ದಾರಿ ತೋರಿಸು ಯಲಗೂರ ಹನಮಂತಪ್ಪ. ಆರ್ಮಿ ರನ್ನಿಂಗ ಇವತ್ತು ಸ್ಟಾರ್ಟ್ ಮಾಡೀನಿ ದೇವರೆ. ಪಾಸ ಮಾಡು. ಅತೀ ವೇಗ ಓಡುವಂಗ ಮಾಡು. ಆರೋಗ್ಯವಾಗಿ ಇಡು ದೇವರೆ. ಗೋರ್ನಮೆಂಟ್ ಜಾಬ್ ಪಿ. ಎಸ್. ಐ ಮಾಡು. ಹೆಂಡತಿ ಮಕ್ಕಳ ನಡುವೆ ಜಗಳವಾಗದಂತಿರಿಸು. ಮಗನಿಗೆ ಎಂಬಿಎ ಸೀಟ್ ಸಿಗಲಿ. ಮತ್ತೆ ಬಂದು ನಿನ್ನ ದರ್ಶನ ಮಾಡುತ್ತೇನೆ. ನೌಕರಿ ಅವಶ್ಯಕತೆ ತುಂಬಾ ಇದೆ. ಬೇಗನೇ ಒಳ್ಳೆಯ ಕಂಪನಿಯಲ್ಲಿ ಹೆಚ್ಚಿನ ಸಂಬಳದ ನೌಕರಿ ಸಿಕ್ಕು […]