ಡಾ. ದರ್ಶನ ಮನೋಹರ ಬಿರಾದಾರ ರಾಷ್ಟ್ರೀಯ ಹೃದ್ರೋಗ ತಜ್ಞರ ಸಮಾವೇಶಕ್ಕೆ ಉತ್ತಮ ಉದಯೋನ್ಮುಖ ಹೃದ್ರೋಗ ತಜ್ಞರಾಗಿ ಆಯ್ಕೆ

ವಿಜಯಪುರ: ಹೈದರಾಬಾದಿನಲ್ಲಿ ಕಾರ್ಡಿಯಾಲಜಿ ಸೊಸೈಟಿ ಆಫ್ ಇಂಡಿಯಾ ಏರ್ಪಡಿಸಿದ ರಾಷ್ಟ್ರಮಟ್ಟದ ಹೃದಯ ರೋಗ ತಜ್ಞರ ಸಮಾವೇಶದಲ್ಲಿ ಉತ್ತಮ ಉದಯೋನ್ಮುಖ ಹೃದಯ ರೋಗ ತಜ್ಞ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಹೃದರೋಗ ತಜ್ಞ ಡಾ. ದರ್ಶನ ಮನೋಹರ ಬಿರಾದಾರ ಆಯ್ಕೆಯಾಗಿದ್ದಾರೆ.

ಪ್ರತಿವರ್ಷ ಯುವ ಹೃದಯರೋಗ ತಜ್ಞರನ್ನು ಕಾರ್ಡಿಯಾಲಜಿ ಸೊಸೈಟಿ ಆಫ್ ಇಂಡಿಯಾದಿಂದ ಉತ್ತಮ ಉದಯೋನ್ಮುಖ ತಜ್ಞರನ್ನು ಆಹ್ವಾನಿಸಿ, ಈ ಪ್ರಶಸ್ತಿ ನೀಡಲಾಗುತ್ತದೆ.  ಈ ಪ್ರಶಸ್ತಿಗೆ ಕರ್ನಾಟಕದಿಂದ ಇಬ್ಬರು ಆಯ್ಕೆಯಾಗಿದ್ದಾರೆ.  ಅದರಲ್ಲಿ ಡಾ. ದರ್ಶನ ಆಯ್ಕೆಯಾಗಿರುವುದು ಸಂತಸ ತಂದಿದೆ.

ಸದ್ಯ ಡಾ. ದರ್ಶನ ಮನೋಹರ ಬಿರಾದಾರ ಅವರು ವಿಜಯಪುರ ನಗರದ ಪ್ರತಿಷ್ಠಿತ ಬಿ. ಎಲ್. ಡಿ. ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆಯ ಹಾರ್ಟ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಪ್ರಶಸ್ತಿಗೆ ಭಾಜರಾದ ಡಾ. ದರ್ಶನ ಬಿರಾದಾರ ಅವರಿಗೆ ವಿವಿ ಕುಲಾಧಿಪತಿ ಮತ್ತು ಸಚಿವ ಎಂ. ಬಿ. ಪಾಟೀಲ್, ಕುಲಪತಿ ಡಾ. ಆರ್. ಎಸ್. ಮುಧೋಳ, ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಅಭಿನಂದಿಸಿದ್ದಾರೆ.

Leave a Reply

ಹೊಸ ಪೋಸ್ಟ್‌