ರಾಜ್ಯ ಸರಕಾರದಿಂದ ಸರ್ವಾಧಿಕಾರಿ ಧೋರಣೆ ಆರೋಪ- ಗುಮ್ಮಟ ನಗರಿಯಲ್ಲಿ ಬಿಜೆಪಿಯಿಂದ ಹಲಗೆ ಬಾರಿಸಿ ಪ್ರತಿಭಟನೆ

ವಿಜಯಪುರ: ಕಾಂಗ್ರೆಸ್ ಸರಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ವಿಧಾನಸಭೆ ಅಧಿವೇಶನದಲ್ಲಿ ಮಾರ್ಷಲ್‌ ಗಳು ದೌರ್ಜನ್ಯ ಎಸಗಿದ್ದಾರೆ.  ಅಲ್ಲದೇ, ಕಾಂಗ್ರೆಸ್ ಸರಕಾರದ ಸಂವಿಧಾನ ವಿರೋಧಿ ಧೋರಣೆ ಅನುಸರಿಸುವ ಮೂಲಕ 10 ಶಾಸಕರನ್ನು ಅಮಾನತು ಮಾಡಿದೆ.  ಸಭಾಧ್ಯಕ್ಷರ ಈ ನಡೆ ಅಸಂವಿಧಾನಿಕವಾಗಿದೆ.  ಅಲ್ಲದೇ, ಹಿರಿಯ ಶಾಸಕರೆಂಬ ಕಾಳಜಿಯೂ ಇಲ್ಲದೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಎಳೆದಾಡಿ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ನಡೆಸಿತು.  ಸರ್ಕಾರದ ವಿರುದ್ಧ ಘೋಷಣೆ ಕೂಗಿ ಹಲಗೆ ಭಾರಿಸುವುದರ ಮೂಲಕ ಪ್ರತಿಭಟನೆ ನಡೆಸಿದರು.

ನಗರದ ಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭಿಸಿದ ನೂರಾರು ಬಿಜೆಪಿ ಕಾರ್ಯಕರ್ತರು,  ಗಾಂಧಿ ಚೌಕ್‌ಗೆ ತೆರಳಿ ಸಭೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ದೇಶ ವಿರೋಧಿ ಚಟುವಟಿಕೆ ನಡೆಸುವರು ಕಾಂಗ್ರೆಸ್ ಆಡಳಿತದಲ್ಲಿ ಚುರುಕಾಗುತ್ತಾರೆ.  ಕಾಂಗ್ರೆಸ್ಸಿನವರು ರಕ್ಷಣೆಯಾಗಿ ನಿಲ್ಲುವುದರಿಂದ ಈ ಚಟುವಟಿಕೆಗಳು ಹೆಚ್ಚಾಗುತ್ತವೆ.  ನೀವು ಏನು ಮಾಡಿದರು ನಡೆಯುತ್ತದೆ ಎಂಬ ಅಹಂಕಾರ ನಡೆಯುವುದಿಲ್ಲ.  ಮಾಡಿರುವ ತಪ್ಪನ್ನು ಎತ್ತಿ ತೋರಿಸಿದಕ್ಕೆ ಶಾಸಕರಿಗೆ ಅಪಮಾನ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಭೆಗೆ ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡಿರುವ ತಪ್ಪನ್ನು ಪ್ರಶ್ನಿಸಿದಕ್ಕೆ, ಪಕ್ಷಾತೀತವಾಗಿ ಇರಬೇಕೆಂಬ ನಿಯಮ ಗಾಳಿಗೆ ತೂರಿ, ಕಾಂಗ್ರೆಸ್‌ನ ಕೈಗೊಂಬೆಯಾಗಿ ನಮ್ಮ 10 ಶಾಸಕರನ್ನು ಅಮಾನತ್ತು ಮಾಡಿಲಾಗಿದೆ.  ಅಷ್ಟೇ ಅಲ್ಲ, ಹಿರಿಯ ಶಾಸಕರು ಎಂಬ ಮಾನವೀಯತೆ ಸಹ ಇಲ್ಲದೆ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಎಳೆದಾಡಿ ಅಪಮಾನ ಮಾಡುವ ಮೂಲಕ ಅಮಾನವಿಯ ರೀತಿಯಲ್ಲಿ ನಡೆದುಕೊಳ್ಳಲಾಗಿದೆ.  ಇದು ಹೀಗೆ ಮುಂದುವರೆದರೆ ಬಿಜೆಪಿ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಸಂಗಣ್ಣ ಕೆ. ಬೆಳ್ಳುಬ್ಬಿ, ಮುಖಂಡರಾದ ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ ಮಾತನಾಡಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಮಳುಗೌಡ ಪಾಟೀಲ, ಬೆಳಗಾವಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಬಿಜೆಪಿ ಮುಖಂಡರಾದ ವಿವೇಕಾನಂದ ಡಬ್ಬಿ, ಭೀಮಾಶಂಕರ ಹದನೂರ, ಸುರೇಶ ಬಿರಾದಾರ, ಉಮೇಶ ಕೋಳಕೂರ, ಚಿದಾನಂದ ಚಲವಾದಿ, ಕಾಸುಗೌಡ ಬಿರಾದಾರ, ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಎಂ. ಎಸ್. ಕರಡಿ, ಪ್ರೇಮಾನಂದ ಬಿರಾದಾರ, ರಾಜಶೇಖರ ಕುರಿಯವರ, ರಾಹುಲ ಜಾಧವ, ಕಿರಣ ಪಾಟೀಲ, ವಿಠ್ಠಲ ಹೊಸಪೇಟ, ಮಲ್ಲಿಕಾರ್ಜುನ ಗಡಗಿ, ರಾಜು ಗೋಸಾವಿ, ಮಹೇಶ ಒಡೆಯರ, ಮುಖಂಡರಾದ ರಾಘವ ಅಣ್ಣಿಗೇರಿ, ರಮೇಶ ಬಿರಾದಾರ(ಬಬಲೇಶ್ವರ), ಪಾಂಡು ಸಾಹುಕಾರ ದೊಡಮನಿ, ಚಂದ್ರು ಚೌದರಿ, ಅಶೋಕ ಬೆಲ್ಲದ, ಲಕ್ಷ್ಮಣ ಜಾಧವ, ಮಡಿವಾಳ ಯಾಳವಾರ, ಶಂಕರ ಹೂಗಾರ, ಬಸವರಾಜ ಗೊಳಸಂಗಿ, ವಿಠ್ಠಲ ನಡುವಿನಕೇರಿ, ಶ್ರೀಶೈಲ ಕಣಮುಚನಾಳ, ದತ್ತಾ ಗೊಲಂಡೆ, ಪ್ರವೀಣ ಬಿಜ್ಜರಗಿ, ವಿಕ್ರಮ ಗಾಯಕವಾಡ, ಗುರು ಗಚ್ಛಿನಮಠ, ನಾಗರಾಜ ಬಿರಾದಾರ, ಸಚೀನ ಕೋರಿ, ವಿಜಯ ಜೋಶಿ, ಕೃಷ್ಣಾ ಗುನ್ನಾಳಕರ, ರಮೇಶ ಬಿರಾದಾರ, ಪ್ರಕಾಶ ರಾಠೋಡ, ಕಾಂತು ಶಿಂದೆ, ಸಂತೋಷ ತಳಕೇರಿ, ಲಕ್ಷ್ಮಿ ಕನ್ನೊಳ್ಳಿ, ವಿಠ್ಠಲ ಕಿರಸೂರ,  ಡಾ. ಬಾಬು ರಾಜೆಂದ್ರ ನಾಯಕ, ರಾಜೇಶ ತವಸೆ, ವಿನಾಯಕ ದಹಿಂಡೆ, ರಾಜು ತಾಳಿಕೋಟಿ ಸೇರಿದಂತೆ ಪಕ್ಷದ ಎಲ್ಲಾ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌