ರಾಷ್ಟ್ರೀಯ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಗುಮ್ಮಟ ನಗರಿಯ ವಿದ್ಯಾರ್ಥಿಗಳ ಸಾಧನೆ

ವಿಜಯಪುರ: ಬೆಂಗಳೂರಿನಲ್ಲಿ ನಡೆದ ಇಂಡಿಪೆಂಡೆನ್ಸ್ ಕಪ್ ರಾಷ್ಟ್ರೀಯ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ವಿಜಯಪುರ ನಗರದ ಬೆಸ್ಟ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ಕರಾಟೆ ಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ.

ಕುಮಟೆ ಮತ್ತು ಕಟಾ ವಿಭಾಗದಲ್ಲಿ ತಲಾ 10 ಪದಕ ಸೇರಿದಂತೆ ಒಟ್ಟು 20 ಪದಕಗಳನ್ನು ಗೆಲ್ಲುವ ಮೂಲಕ ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಕುಮಟೆ ವಿಭಾಗದಲ್ಲಿ ಅರುಣ, ಉದಯ, ಗುರುದಾಸ, ಜಗದೀಶ, ಶಿವರಾಜ, ಸಮರ್ಥ ಪ್ರಥಮ ಸ್ಥಾನ ಪಡೆದಿದ್ದು, ಸಿದ್ದಾಂತ ದ್ವಿತೀಯ ಮತ್ತು ಮನೋಜ, ರೋನಕ, ಪುಷ್ಪಾಶ್ರೀ ತೃತೀಯ ಸ್ಥಾನ ಪಡೆದಿದ್ದಾರೆ.

ಕಟಾ ವಿಭಾಗದಲ್ಲಿ ಪುಶ್ಪಶ್ರೀ, ಸಿದ್ದಾಂತ, ಅರುಣ, ಉದಯ, ಜಗದೀಶ ಮತ್ತು ಸಮರ್ಥ ಪ್ರಥಮ ಸ್ಥಾನ ಪಡೆದಿದ್ದು, ರೋನಕ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಕರಾಟೆ ಪಟುಗಳ ಈ ಸಾಧನೆಗೆ ಬೆಸ್ಟ್ ಮಾರ್ಷಲ್ ಆರ್ಟ್ಸ್ ಅಕ್ಯಾಡೆಮಿಯ ಮುಖ್ಯ ತರಬೇತುದಾರ ಜಗದೀಶ ಗುಳೇದಗುಡ್ಡ ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

ಹೊಸ ಪೋಸ್ಟ್‌