ಸಿಕ್ಯಾಬ್ ಎ.ಆರ್.ಎಸ್. ಇನಾಮದಾರ ಮಹಿಳಾ ಕಾಲೇಜಿನಲ್ಲಿ ಪ್ರೇಮಚಂದ ಜಯಂತಿ ಆಚರಣೆ

ವಿಜಯಪುರ: ನಗರದ ಸಿಕ್ಯಾಬ್ ಎ. ಆರ್. ಎಸ್. ಇನಾಮದಾರ ಮಹಿಳಾ ಮಹಾವಿದ್ಯಾಲಯದ ಉರ್ದು ಮತ್ತು ಹಿಂದಿ ವಿಭಾಗದ ಸಂಯುಕ್ತಾಶ್ರಯದಲ್ಲಿ ಪ್ರೇಮಚಂದ ಜಯಂತಿ ಆಚರಿಸಲಾಯಿತು.

ಈ ಸಮಾರಂಭದಲ್ಲಿ ಪಾಲ್ಗೋಂಡ ಮಹಾರಾಷ್ಟ್ರದ ಉದಯಗಿರಿ ಮಹಾವಿದ್ಯಾಲಯದ ಪ್ರೊ. ಹಾಮೀದ್ ಅಶ್ರಫ್ ಮಾತನಾಡಿ, ಪ್ರೇಮಚಂದ ಒಬ್ಬ ಮಹಾನ್ ಕಾದಂಬರಿಕಾರ ಮತ್ತು ಬರಹಗಾರರಾಗಿದ್ದರು.  ಲೌಕಿಕ ಸಂಪತ್ತಿನ ಹಿಂದೆ ಹೋಗದೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು.  ಅವರು ಮಾನವೀತೆಯ ಪ್ರತಿಪಾದಕರಾಗಿದ್ದು, ಮಾನವೀಯ ಗುಣಗಳು ಮತ್ತು ಮೌಲ್ಯಗಳನ್ನು ಪ್ರತಿಪಾದಿಸಿದ್ದರು.  ಪರಸ್ಪರ ಪ್ರೀತಿ, ಪ್ರೇಮಗಳು, ಸೌಹಾರ್ದತೆ ಅವರ ಕೃತಿಗಳ ಸಂದೇಶವಾಗಿದೆ.  ವಿದ್ಯೆ ಮತ್ತು ಜ್ಞಾನ ಅಂತರದೃಷ್ಟಿಗಳನ್ನು ಬೆಳೆಸುತ್ತದೆ.  ಸಂಪತ್ತಿನ ಹಿಂದೆ ಹೋಗದೆ ಜ್ಞಾನ ಕಡೆ ಹೋದರೆ ಸಂಪತ್ತು ತಾನಾಗಿಯೇ ಬರುತ್ತದೆ.  ಇಂದಿನ ಕಾಲದಲ್ಲಿ ವಿದ್ಯಾರ್ಜನೆ ಹೆಚ್ಚು ಅವಶ್ಯವಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಸಾಹಿತ್ಯ ಅಧ್ಯಯನ ಮಾಡಲು ಮುಂದೆ ಬರಬೇಕೆಂದು ಕರೆ ನೀಡಿದ ಅವರು, ಪ್ರೇಮಚಂದ ಅವರು 15ಕ್ಕೂ ಹೆಚ್ಚು ಕಾದಂಬರಿಗಳು ಮತ್ತು 300ಕ್ಕೂ ಹೆಚ್ಚು ಸಣ್ಣಕತೆಗಳನ್ನು ಬರೆದರು.  ಪತ್ರಕರ್ತ, ಸಂಪಾದಕ, ಉರ್ದು, ಹಿಂದಿ ಲೇಖಕರಾಗಿ ಕಾರ್ಯ ನಿರ್ವಹಿಸಿದರು.  ಇವರು ಎಂದೂ ಪ್ರಚಾರ ಬಯಸಲಿಲ್ಲ.  ಕೀರ್ತಿಯ ಬೆನ್ನು ಬೀಳಲಿಲ್ಲ.  ಸರಳವಾದ ಜೀವನವನ್ನು ನಡೆಸಿದರು ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ. ಟಿ. ಕೋಟ್ನಿಸ್ ಮಾತನಾಡಿ, ಪ್ರೇಮಚಂದರ ಉರ್ದು ಮತ್ತು ಹಿಂದಿ ಕಾದಂಬರಿಗಳು ಮಾನವೀಯ ಮೌಲ್ಯಗಳನ್ನು ಸಾರುತ್ತವೆ.  ಸಾಹಿತ್ಯದ ದೃಷ್ಟಿಯಿಂದ ಇವರಿಗೆ ನೋಬಲ್ ಪ್ರಶಸ್ತಿ ನೀಡಿ ಗೌರವಿಸಬೇಕಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಹೀನ್ ಕುರಾನ್ ಪಠಸಿದರು.  ಜೊಹರಾ ಜಾಗೀರದಾರ ಹಮ್ದ ಹಾಡಿದರು,  ಮಿನ್ಹಾಜ್ ಹಳ್ಳಿ, ಜೈನಬ್ ನಾಗರಬಾವಡಿ, ಸದಫನಾಜ ಮುಧೋಳ ಪ್ರೇಮಚಂದ ಕುರಿತು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಉಪಪ್ರಚಾರ್ಯೆ ಜೋಹರಾ ಖಾಜಿ, ನಸ್ರಿನ ಸುಲ್ತಾನಾ, ಮಹಾವಿದ್ಯಾಲಯದ ಪ್ರಾಧ್ಯಪಕ ವರ್ಗ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರದ್ದರು.

ಡಾ. ಎಚ್. ಕೆ. ಯಡಹಳ್ಳಿ ಸ್ವಾಗತಿಸಿದರು.  ಡಾ. ಹಾಜೀರಾ ಪರವೀನ ಪರಿಚಯಿಸಿದರು. ಡಾ. ಮೊಹ್ಮದ ಸಮೀಯುದ್ದೀನ್ ನಿರೂಪಿಸಿದರು.  ಪ್ರೊ. ಹಸನ್ ಕಾದ್ರಿ ವಂದಿಸಿದರು.

Leave a Reply

ಹೊಸ ಪೋಸ್ಟ್‌