ಬಸವನಾಡಿನಿಂದ ಕಾಫಿನಾಡಿನ ಮೂಲಕ ಧರ್ಮಸ್ಥಳಕ್ಕೆ ಸ್ಲೀಪರ್ ಬಸ್- ಸಾರಿಗೆ ಸಚಿವರಿಗೆ ಡಾ. ಎಲ್. ಎಚ್. ಬಿದರಿ ಮನವಿ ಪತ್ರ ಸಲ್ಲಿಕೆ

ವಿಜಯಪುರ: ಬಸವನಾಡು ವಿಜಯಪುರದಿಂದ ಕಾಫಿನಾಡು ಚಿಕ್ಕಮಗಳೂರು ಮಾರ್ಗವಾಗಿ ಸುಕ್ಷೇತ್ರ ಧರ್ಮಸ್ಥಳಕ್ಕೆ ಪ್ರತಿನಿತ್ಯ ಒಂದು ಸ್ಲೀಪರ್ ಇಲ್ಲವೆ ವೊಲ್ವೊ ಬಸ್ ಸೇವೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ನಗರದ ಚಿಕ್ಕಮಕ್ಕಳ ಖ್ಯಾತ ವೈದ್ಯ ಡಾ. ಎಲ್. ಎಚ್. ಬಿದರಿ ಅವರು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಸೋಮವಾರ ಬೆಂಗಳೂರಿನಲ್ಲಿ ಸಾರಿಗೆ ಸಚಿವರನ್ನು ಭೇಟಿ ಮಾಡಿದ ವಿಜಯಪುರ ಜಿಲ್ಲಾ ಪ್ರವಾಸೋದ್ಯಮ ಮತ್ತು ಸಮಗ್ರ ಅಭಿವೃದ್ಧಿ ವೇದಿಕೆ ಸಂಚಾಲಕರೂ ಆಗಿರುವ ಡಾ. ಎಲ್. ಎಚ್. ಬಿದರಿ ಅವರು, ಈ ಬಸ್ ಸೇವೆ ಆರಂಭಿಸಿದರೆ ಜಿಲ್ಲೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ.  ಅಲ್ಲದೇ, ಸಂಸ್ಥೆಗೆ ಆದಾಯವೂ ಹೆಚ್ಚಲಿದೆ.  ಈ ಬಸ್ಸು ಚಿಕ್ಕಮಗಳೂರು ಮಾರ್ಗವಾಗಿ ಸಂಚರಿಸಿದರೆ ಪ್ರವಾಸಿಗರಿಗೆ ಮತ್ತು ದೇವರ ದರ್ಶನಕ್ಕೆ ತೆರಳುವು ಭಕ್ತಾದಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಡಾ. ಎಲ್. ಎಚ್. ಬಿದರಿ ಅವರು ಸಲ್ಲಿಸಿದ ಮನವಿ ಪತ್ರದ ಮೇಲೆ ಸಚಿವ ರಾಮಲಿಂಗಾರೆಡ್ಡಿ ಷರಾ ಹಾಕಿದರು

ವಿಜಯಪುರ- ಬೆಂಗಳೂರು ಸ್ಲೀಪರ್, ವೊಲ್ವೊ ಬಸ್ ಸೇವೆ ಹೆಚ್ಚಿಸಲು ಆಗ್ರಹ

ಇದೇ ವೇಳೆ ಡಾ. ಎಲ್. ಎಚ್. ಬಿದರಿ ಅವರು, ವಿಜಯಪುರದಿಂದ ಬೆಂಗಳೂರಿಗೆ ಪ್ರತಿನಿತ್ಯ ಇನ್ನೂ ಒರಡು ಸ್ಲೀಪರ್ ಇಲ್ಲವೆ ವೋಲ್ವೊ ಬಸ್ ಗಳ ಸೇವೆಯನ್ನು ಆರಂಭಿಸಬೇಕು.  ಇದರಿಂದ ವಿಜಯಪುರದಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅವರು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಈ ಕುರಿತು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Leave a Reply

ಹೊಸ ಪೋಸ್ಟ್‌