ಚಂದ್ರಯಾನ 3 ಯಶಸ್ವಿ- ಬಸವ ಜನ್ಮಭೂಮಿಯಲ್ಲಿ ಸಚಿವ ಶಿವಾನಂದ ಪಾಟೀಲ ನೇತೃತ್ವದಲ್ಲಿ ಸಂಭ್ರಮಾಚರಣೆ

ವಿಜಯಪುರ: ಭಾರತದ ಬಹುನಿರೀಕ್ಷಿತ ಚಂದ್ರಯಾನ 3 ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಬಸವಣ್ಣನವರ ತವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ಜವಳಿ, ಸಕ್ಕರೆ ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ ನೇತೃತ್ವದಲ್ಲಿ ಬೆಂಬಲಿಗರು ಮತ್ತು ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು. 

ಪರಸ್ಪರ ಸಿಹಿ ಹಂಚಿದ ಕಾರ್ಯಕರ್ತರು ಇಸ್ರೊ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ, ಇಸ್ರೊ ವಿಜ್ಞಾನಿಗಳು ಚಂದ್ರಯಾನ 3 ಯಶಸ್ವಿಯಾಗಿ ಮಾಡುವ ಮೂಲಕ ಕೋಟ್ಯಂತರ ಭಾರತೀಯರ ಜನರ ಕನಸು ನನಸು ಮಾಡಿದ್ದಾರೆ.  ವಿಕ್ರಮ್ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿರುವುದು ಸಂತಸ ತಂದಿದೆ ಎಂದು ಹೇಳಿದರು.

ಬಸವನ ಬಾಗೇವಾಡಿಯಲ್ಲಿ ಯುವ ಮುಖಂಡ ಶಂಕರಗೌಡ ಬಿರಾದಾರ ಸಚಿವ ಶಿವಾನಂದ ಪಾಟಿೀಲ ಅವರಿಗೆ ಸಿಹಿ ತಿನ್ನಿಸಿ ಚಂದ್ರಯಾನ 3 ಯಶಸ್ಸಿ ಸಂಭ್ರಮಾಚರಣೆಯಲ್ಲಿ ಪಾಲ್ಗೋಂಡರು

ನಮ್ಮ ವಿಜ್ಞಾನಿಗಳ ಬಹುದಿನದ ಪ್ರಯತ್ನದಿಂದ ಇಂದು ಚಂದ್ರವು ನಮ್ಮ ಅಂಗೈಯಲ್ಲಿ ಇದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.  ವಿಶ್ವದ ಅನೇಕ ರಾಷ್ಟ್ರಗಳು ಚಂದ್ರಯಾನ ಮೇಲೆ ಸಂಶೋಧನೆ ಮಾಡಲು ಸಾಕಷ್ಟು ದುಡ್ಡನ್ನು ಖರ್ಚು ಮಾಡುತ್ತಾರೆ.  ಆದರೆ, ನಮ್ಮ ಇಸ್ರೊ ವಿಜ್ಞಾನಿಗಳು ಕಡಿಮೆ ವೆಚ್ಚದಲ್ಲಿ ಅಭೂತಪೂರ್ವ ಕಾರ್ಯವನ್ನು ಮಾಡಿ ಇಡೀ ಜಗತ್ತಿನಲ್ಲಿ ನಾವು ಪ್ರಭಾವಿಗಳು ಎಂದು ತೋರಿಸಿ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷರಾದ ಶಂಕರಗೌಡ ಬಿರಾದಾರ ಅವರು ಸಚಿವರಿಗೆ ಸಿಹಿ ಹಂಚಿದರು.

ಈ ಸಂದರ್ಭದಲ್ಲಿ ಬಸವನ ಬಾಗೇವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಯುವ ಕಾಂಗ್ರೆಸ್ಸಿನ ಜೀವನ ಮ್ಯಾಗೇರಿ, ಬಸವರಾಜ ನಾಯ್ಕೋಡಿ, ಶಿವಾನಂದ ತೋಳನೂರ, ಬಸವರಾಜ ಚಿಂಚೋಳಿ, ಪ್ರವೀಣ ಪಾಟೀಲ, ಶಿವು ಮಡಿಕೇಶ್ವರ, ಕೊಟ್ರೇಶಿ ಹೆಗಡ್ಯಾಳ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌