ವಿಜಯಪುರ ನೂತನ ಎಸ್ಪಿ ಸೋನಾವಣೆ ರಿಷಿಕೇಶ ಭಗವಾನ ಅಧಿಕಾರ ಸ್ವೀಕಾರ

ವಿಜಯಪುರ: ವಿಜಯಪುರ ಜಿಲ್ಲಾ ನೂತನ‌ ಎಸ್ಪಿಯಾಗಿ 2014ರ ಬ್ಯಾಚಿನ‌ ಐಪಿಎಸ್ ಅಧಿಕಾರಿ ಸೋನಾವಣೆ ರಿಷಿಕೇಶ ಭಗವಾನ ಅಧಿಕಾರ ಸ್ವೀಕರಿಸಿದ್ದಾರೆ.

ಸೆಪ್ಟೆಂಬರ್‌ 5 ರಂದು ರಾಜ್ಯ ಸರಕಾರ ಸೋನಾವಣೆ ರಿಷಿಕೇಶ ಭಗವಾನ‌ ಅವರನ್ನು ವಿಜಯಪುರ ಎಸ್ಪಿಯಾಗಿ ವರ್ಗಾವಣೆ ಮಾಡಿತ್ತು.

ಇಂಟಲಿಜನ್ಸ್ ವಿಭಾಗದ ಎಸ್ಪಿಯಾಗಿದ್ದ ಸೋನಾವಣೆ ರಿಷಿಕೇಶ ಭಗವಾನ ಅವರು ಈಗ ಸ್ವಲ್ಪ ಹೊತ್ತಿನ ಮುಂಚೆ ವಿಜಯಪುರ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡರು.

ನಿರ್ಗಮಿತ ಎಸ್ಪಿ ಎಚ್. ಡಿ. ಆನಂದ ಕುಮಾರ ಬ್ಯಾಟನ್ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ವಿಜಯಪುರ ನೂತನ ಎಸ್ಪಿ ಸೋನಾವಣೆ ರಿಷಿಕೇಷ ಭಗವಾನ ಅವರಿಗೆ ನಿರ್ಗಮಿತ ಎಸ್ಪಿ ಎಚ್. ಡಿ. ಆನಂದಕುಮಾರ ಶುಭ ಕೋರಿದರು

ವಿಜಯಪುರ ಎಸ್ಪಿಯಾಗಿದ್ದ ಎಚ್. ಡಿ. ಆನಂದಕುಮಾರ ಅವರನ್ನು ನಾಗರಿಕ ಹಕ್ಕುಗಳು ಮತ್ತು ಜಾರಿ ನಿರ್ದೇಶನಾಲಯದ ಎಸ್ಪಿಯಾಗಿ ವರ್ಗಾವಣೆ ಮಾಡಿದೆ.

ಸೋನಾವಣೆ ರಿಷಿಕೇಶ ಭಗವಾನ ಅವರು ಬಿ.ಇ(ಇ ಆ್ಯಂಡ್ ಸಿ) ಪದವೀಧರರಾಗಿದ್ದು, ಈ ಮುಂಚೆ ಯಾದಗಿರಿ ಮತ್ತು ದಕ್ಷಿಣ ಕನ್ನಡ ಎಸ್ಪಿಯಾಗಿ‌ ಸೇವೆ ಸಲ್ಲಿಸಿದ್ದಾರೆ.

ಈಗ ಅವರು ವಿಜಯಪುರ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

Leave a Reply

ಹೊಸ ಪೋಸ್ಟ್‌