ಬಸವ ನಾಡಿನಲ್ಲಿದೆ ತಿರುಪತಿ ವೆಂಕಟೇಶ್ವರನ ದೇವಸ್ಥಾನ- ಇಲ್ಲಿ ವರ್ಷಕ್ಕೊಂದು ಬಾರಿ ಮಾತ್ರ ಸಿಗುತ್ತೆ ಭಕ್ತರಿಗೆ ದರ್ಶನ

ವಿಜಯಪುರ: ತಿಮ್ಮಪ್ಪ ಎಂದರೆ ಸಾಕು ಎಲ್ಲರಿಗೆ ತಟ್ಟನೆ ನೆನಪಾಗುವುದು ತಿರುಪತಿ ತಿಮ್ಮಪ್ಪನ ದೇವಸ್ಥಾನ.  ಆದರೆ, ಗ್ರಾಮಸ್ಥರು ನಿರ್ಮಿಸಿರುವ ವೆಂಕಟೇಶ್ವರನ ದೇವಸ್ಥಾನವೊಂದು ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿದೆ.  ವರ್ಷಕ್ಕೊಂದು ಬಾರಿ ಭಕ್ತರ ದರ್ಶನಕ್ಕಾಗಿ ಬಾಗಿಲು ತೆರೆಯುವುದು ಇಲ್ಲಿನ ಸಂಪ್ರದಾಯವಾಗಿದ್ದು, ಭಕ್ತರು ಕೂಡ ಈ ಒಂದು ಶುಭ ದಿನಕ್ಕಾಗಿ ವರ್ಷವಿಡೀ ಕಾಯುವುದು ಗಮನಾರ್ಹವಾಗಿದೆ. ಹೀಗೆ ಜಿಟಿಜಿಟಿ ಮಳೆಯ ನಡುವೆ ಕೈಯ್ಯಲ್ಲೊಂದು ಛತ್ರಿ, ತಲೆಯ ಮೇಲೋಂದು ಬುತ್ತಿಯ ಬುಟ್ಟಿ ಇಟ್ಟುಕೊಂಡು ಈ ಮಹಿಳೆಯರು ಹೊರಿರುವುದು ಇದೇ ತಿಮ್ಮಪ್ಪ ಅರ್ಥಾತ್ ವೆಂಕಟೇಶ್ವರನ ದರ್ಶನಕ್ಕಾಗಿ.  […]