ಸ್ಪೂರ್ತಿ, ಸ್ಪರ್ಧಾತ್ಮಕ ಮನೋಭಾವ, ನಿರಂತರ ಪರಿಶ್ರಮದಿಂದ ಉತ್ತಮ ಕ್ರೀಡಾಪಟುವಾಗಬಹುದು- ಜಾವೀದ ಜಮಾದಾರ

ವಿಜಯಪುರ: ಸ್ಪೂರ್ತಿ, ಸ್ಪರ್ಧಾತ್ಮಕ ಮನೋಭಾವ ಹಾಗೂ  ನಿರಂತರ  ಪರಿಶ್ರಮದಿಂದ ಉತ್ತಮ ಕ್ರೀಡಾಪಟುಗಳಾಗಲು ಸಾಧ್ಯ ಎಂದು ರಾಷ್ಚ್ರ ಯುವ ಪ್ರಶಸ್ತಿ ಪುರಸ್ಕೃತರ ಪೆಡರೇಶನ್ ಅಧ್ಯಕ್ಷ ಡಾ. ಜಾವೀದ ಜಮಾದಾರ ಹೇಳಿದ್ದಾರೆ. ನಗರದ ಡಾ. ಬಿ. ಆರ್  ಅಂಬೇಡ್ಕರ  ಜಿಲ್ಲಾ  ಕ್ರೀಡಾಂಗಣದಲ್ಲಿ  ಜಿಲ್ಲಾಡಳಿತ,  ಜಿಲ್ಲಾ ಪಂಚಾಯಿತಿ,  ಹಾಗೂ  ಯುವ ಸಬಲೀಕರಣ ಮತ್ತು ಕ್ರೀಡಾ  ಇಲಾಖೆ, ಕರ್ನಾಟಕ  ಕ್ರೀಡಾ ಪ್ರಾಧಿಕಾರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಜಯಪುರ ತಾಲೂಕು  ಮಟ್ಟದ ದಸರಾ ಕ್ರೀಡಾಕೂಟ -ಉದ್ಗಾಟಿಸಿ ಅವರು ಮಾತನಾಡಿದರು. ಕ್ರೀಡೆಯು ಮನುಷ್ಯನಿಗೆ ಮನೊಚೈತನ್ಯ, ಉಲ್ಲಾಸ, ನೀಡುತ್ತದೆ.  […]

ಶಿಕ್ಷಕರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಲು ಬಿಇಓ ಕಚೇರಿ ಸಿಬ್ಬಂದಿಯ ಕರ್ತವ್ಯವಾಗಿದೆ- ಸಂತೋಷಕುಮಾರ ಎಸ್. ವಿಜಾಪುರ

ವಿಜಯಪುರ: ಶಿಕ್ಷಕರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಸಕಾಲದಲ್ಲಿ ನೀಡಿ ಅವರನ್ನು ಪ್ರೋತ್ಸಾಹಿಸುವುದು ಬಿಇಒ ಕಚೇರಿಯ ಎಲ್ಲ ಕಾರ್ಯ ನಿರ್ವಾಹಕರ ಕರ್ತವ್ಯ ಎಂದು ಧಾರವಾಡ ಶಹರ ಬಿಇಒ ಕಚೇರಿಯ ಪತ್ರಾಕಿಂತ ವ್ಯವಸ್ಥಾಪಕ ಸಂತೋಷಕುಮಾರ ಎಸ್. ವಿಜಾಪೂರ ಹೇಳಿದ್ದಾರೆ.  ಮುದ್ದೇಬಿಹಾಳದಲ್ಲಿ ಇತ್ತೀಚೆಗೆ ಬಿಇಒ ಕಚೇರಿಯ ತಪಾಸಣೆ ಕಾರ್ಯ ನಿರ್ವಹಿಸಿದ ಧಾರವಾಡ ಶಿಕ್ಷಣ ಇಲಾಖೆ ಆಯುಕ್ತಾಲಯದ ಅಧಿಕಾರಿಗಳ ಮತ್ತು ಸಿಬ್ಬಂದಿಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನ ಸುಮಾರು 1100ಕ್ಕೂ ಹೆಚ್ಚಿನ ಶಿಕ್ಷಕರ ಸೇವಾ ಪುಸ್ತಕಗಳು ಹಾಗೂ ಕಚೇರಿಯ ಇತರೆ ಕಡತಗಳನ್ನು ಅಧಿಕಾರಿಗಳು […]

ಕ್ರೀಡೆ ಮಾನವನ ಆರೋಗ್ಯಕ್ಕೆ ಟಾನಿಕ್ ಇದ್ದಂತೆ- ಶಂಕರಗೌಡ ಎಸ್. ಸೋಮನಾಳ

ವಿಜಯಪುರ: ಕ್ರೀಡೆಗಳು ಮಾನವನ ಆರೋಗ್ಯಕ್ಕೆ ಟಾನಿಕ್ ಇದ್ದಂತೆ.  ಕ್ರೀಡೆಯಲ್ಲಿ ಭಾಗವಹಿಸುವುದರಿಂದ  ಮಾನಸಿಕ ಮತ್ತು ದೈಹಿಕವಾಗಿ ಸದೃಡರಾಗಬಹುದು ಎಂದು ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಎಸ್ ಸೋಮನಾಳ ಹೇಳಿದ್ದಾರೆ.  ನಗರದ ಹೊರ ವಲಯದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ 2022-23ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನದ ಅಂಗವಾಗಿ ಅಂತರ ವಿಭಾಗಗಳ ಸ್ನಾತಕ ಮತ್ತು ಸ್ನಾತಕೋತ್ತರ ಹಾಗೂ ಸಂಶೋಧನೆ ವಿದ್ಯಾರ್ಥಿನಿಯರು, ಬೋಧಕ, ಬೋಧಕರ ಹೊರತಾದ ಸಿಬ್ಬಂದಿಗಳಿಗಾಗಿ ಏರ್ಪಡಿಸಿದ್ದ ನಾನಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕ್ರೀಡಾ […]

ವಿಜಯಪುರ ನಗರದಲ್ಲಿ ಅಭಿವದ್ಧಿ ಕಾರ್ಯಗಳಿಂದಾಗಿ ಅಸ್ತಮಾ, ದರಿದ್ರತನ ಓಡಿ ಹೋಗಿವೆ- ಶಾಸಕ ಯತ್ನಾಳ

ವಿಜಯಪುರ: ವಿಜಯಪುರ ನಗರದಿಂದ ಅಸ್ತಮಾ ಮತ್ತು ದರಿದ್ರತನ ಓಡಿ ಹೋಗಿದೆ ಎಂದು ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಹೇಳಿದ್ದಾರೆ.  ವಿಜಯಪುರ ನಗರ ವಲಯ ವ್ಯಾಪ್ತಿಯ ಅಫಜಲಪುರ ಟಕ್ಕೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ-49 ರಲ್ಲಿ ನೂತನವಾಗಿ ಅಳವಡಿಸಲಾದ ಸಿಸಿ ಕ್ಯಾಮೆರಾ ಉದ್ಘಾಟಿಸಿ ಅವರು ಮಾತನಾಡಿದರು. ನಗರದಲ್ಲಿ ರಸ್ತೆಗಳು ಅಭಿವೃದ್ಧಿ ಆಗಿರುವುದರಿಂದ ಧೂಳು ಕಡಿಮೆಯಾಗಿದೆ.  ಇದರಿಂದ ಸಾರ್ವಜನಿಕರಿಗೆ ತಲೆ ನೋವಾಗಿದ್ದ ಅಸ್ತಮಾ ಓಡಿ ಹೋಗಿದೆ ಎಂದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದಾಗ ಸ್ವತ ವೈದ್ಯರೇ ಹೇಳಿದ್ದಾರೆ.  ಕಳೆದ […]