ವಿಜಯಪುರ ಜಿಲ್ಲೆಯಲ್ಲಿ 3ನೇ ಶನಿವಾರ ಅಂಗನವಾಡಿ ಮಕ್ಕಳ ಪಾಲಕರ ಸಭೆ- 48315 ಜನ ಭಾಗಿ- ಜಿ. ಪಂ. ಸಿಇಓ ರಾಹುಲ ಶಿಂಧೆ

ವಿಜಯಪುರ: ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಗ್ರಾ. ಪಂ. ಗಳ ಮೂಲಕ ಮಕ್ಕಳ ಸ್ನೇಹಿ ಕುರ್ಚಿ ಮತ್ತು ಮೇಜು ಒದಗಿಸಿರುವುದು ಮಕ್ಕಳು ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಲು ಮತ್ತು ಆಸಕ್ತಿ ತಳೆಯಲು ಸಹಕಾರಿಯಾಗಿದೆ ಎಂದು ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂದೆ ತಿಳಿಸಿದ್ದಾರೆ. ಪ್ರತಿ ಮೂರನೇ ಶನಿವಾರ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಪಾಲಕರ ಸಭೆ ನಡೆಯುತ್ತದೆ.  ಈ ಸಭೆಗೆ ಆಗಮಿಸಿದ್ದ ಮಕ್ಕಳ ಪಾಲಕರು, ಕೇಂದ್ರದಲ್ಲಿ ಆಗಿರುವ ಬದಲಾವಣೆಯಿಂದ ತಮ್ಮ ಮಕ್ಕಳು ಓದಿನಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ.  […]