ಕೇಂದ್ರ ಬರ ಅದ್ಯಯನ ತಂಡ ಭೇಟಿ ಹಿನ್ನೆಲೆ- ಹೊರ್ತಿ ಗ್ರಾಮಕ್ಕೆ ಡಿಸಿ ಟಿ. ಭೂಬಾಲನ್ ಭೇಟಿ- ಹಾನಿಗೊಳಗಾದ ಬೆಳೆ ವೀಕ್ಷಣೆ

ವಿಜಯಪುರ: ಕೇಂದ್ರ ಬರ ತಂಡ ವಿಜಯಪುರ ಜಿಲ್ಲೆಗ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಜಿಲ್ಲೆಯ ಹೊರ್ತಿ ಮತ್ತು ಕಪನಿಂಬರಗಿ ಗ್ರಾಮಗಳಿಗೆ  ಭೇಟಿ ನೀಡಿ, ಬರದಿಂದ ಹಾನಿಗೊಳಗಾದ ಬೆಳೆ ವೀಕಅಷಣೆ ಮಾಡಿದರು.

ತೋಟಗಾರಿಕೆ ಬೆಳೆಗಳಾದ ಲಿಂಬೆ, ಈರುಳ್ಳಿ, ಮೆಣಸಿನಕಾಯಿ, ಕೃಷಿ ಬೆಳೆಗಳಾದ ಸಜ್ಜೆ, ಮೆಕ್ಕೆಜೋಳ ಬೆಳೆಗಳ   ಕುರಿತು ಮಾಹಿತಿ ಪಡೆದುಕೊಂಡ ಅವರು, ಕೋಳೂರಗಿ ಗ್ರಾಮದ ರೈತರೋರ್ವ ಜಮೀನಿನಲ್ಲಿ ಸೂರ್ಯಕಾಂತಿ ಬೆಳೆ ಕಟಾವು ವೀಕ್ಷಿಸಿದರು.  ಅಲ್ಲದೇ, ಕಪನಿಂಬರಗಿ ಕೆರೆ ವೀಕ್ಷಣೆ ಮಾಡಿದರು.

ವಿಜಯಪುರ ಡಿಸಿ ಟಿ. ಭೂಬಾಲನ್ ಅವರು ಹೊರ್ತಿ ಬಳಿ ನಾನಾ ಗ್ರಾಮಗಳಿಗೆ ತೆರಳಿ ಬರದಿಂದ ಹಾನಿಗೀಡಾದ ಬೆಳೆ ವೀಕ್ಷಿಸಿದರು

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂಧೆ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಹುಲ ಭಾವಿದೊಡ್ಡಿ, ಕೃಷಿ ಇಲಾಖೆ ಉಪನಿರ್ದೇಶಕ ಪ್ರಕಾಶ ಚವ್ಹಾಣ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌