ಯುದ್ಧಪೀಡಿತ ಇಸ್ರೆಲ್ ನಿಂದ ಬಸವನಾಡಿಗ ವಾಪಸ್ಸಾದ ಸಹಾಯಕ ಪ್ರಾಧ್ಯಾಪಕ ಸುಮೇಶ ಕೆ. ಜಿ.

ವಿಜಯಪುರ: ಯುದ್ಧ ಪೀಡಿತ ಇಸ್ರೆಲಿನಲ್ಲಿ ಸಿಲುಕಿದ್ದ ಬಸವನಾಡು ವಿಜಯಪುರದ ಸಹಾಯಕ ಪ್ರಾಧ್ಯಾಪಕ ಸುಮೇಶ ಕೆ. ಜಿ. ತಾಯ್ನಾಡಿಗೆ ವಾಪಸ್ಸಾಗಿದ್ದಾರೆ.

ಇಸ್ರೇಲ್ ನ ಜೆರುಸೆಲಂನಿಂದ ವಿಮಾನ ಮೂಲಕ ಸ್ವದೇಶಕ್ಕೆ ಆಗಮಿಸಿದ ಅವರು, ವಿಜಯಪುರಕ್ಕೆ ಬಂದ ಬಳಿಕ ಜಿಲ್ಲಾಧಿಕಾರಿ ಟಿ. ಭೂಬಾಲನ ಅವರನ್ನು ಭೇಟಿ ಮಾಡಿದರು.  ಅಲ್ಲದೇ, ಇಸ್ರೆಲ್ ನಲ್ಲಿ ತಾವು ಎದುರಿಸಿದ ಪರಿಸ್ಥಿತಿಯ ಕುರಿತು ಮಾಹಿತಿ ನೀಡಿದರು.  ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಸುಮೇಶ ಕೆ. ಜಿ. ಅವರಿಗೆ ಸಿಹಿ ತಿನ್ನಿಸಿ ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾಡಳಿತ ಮತ್ತು ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರಕ್ಕೆ ಸುಮೇಶ ಕೆ. ಜಿ. ಅವರು ಕೃತಜ್ಞತೆ ಸಲ್ಲಿಸಿದರು.

ವಿಜಯಪುರ ಜಿಲ್ಲೆಯ ಹಿಟ್ನಿನಹಳ್ಳಿಯಲ್ಲಿರುವ ಕೃಷಿ ಮಹಾವಿದ್ಯಾಲಯದ ಕೃಷಿ ಸಂಶೋಧನಾ ಕೇಂದ್ರದ ಹವಾಮಾನ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಸುಮೇಶ ಗೋವಿಂದ ಅವರು, ಅಧ್ಯಯನ ಹಿನ್ನೆಲೆಯಲ್ಲಿ ಇಸ್ರೆಲಿಗೆ ತೆರಳಿದ್ದರು.

Leave a Reply

ಹೊಸ ಪೋಸ್ಟ್‌