ಕಿತ್ತೂರು ರಾಣಿ ಚೆನ್ನಮ್ಮ ಅವರ ತತ್ವಾದರ್ಶಗಳು ದಾರಿದೀಪವಾಗಿವೆ- ಮಹಾದೇವ ಮುರಗಿ

ವಿಜಯಪುರ: ನಾಡು- ನುಡಿಗಾಗಿ, ಈ ದೇಶಕ್ಕಾಗಿ ಸಮಾಜದ ಸುಧಾರಣೆಗಾಗಿ, ಸ್ವಾಭಿಮಾನಕ್ಕಾಗಿ ಧೀರೋದಾತ್ತೆತೆಯಿಂದ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮರಂತಹ ಮಹನೀಯರ ಆದರ್ಶ ವಿಚಾರಗಳು ಇಂದಿನ ಪೀಳಿಗೆಗೆ ದಾರಿದೀಪವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ  ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಈ ದೇಶದ ಇತಿಹಾಸ,  ಸಮಾಜದ ಸುಧಾರಣೆಗಾಗಿ ಹೋರಾಡಿದ ಮಹನೀಯರ ಬಗ್ಗೆ ಇಂದಿನ ಯುವ ಪೀಳಿಗೆ ಅರಿತುಕೊಳ್ಳುವ ಉದ್ದೇಶದಿಂದ ಜಯಂತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕಿತ್ತೂರು ಚೆನ್ನಮ್ಮ ಅವರು  ಮಾಡಿದ ಕಾರ್ಯಗಳಿಂದ ಇತಿಹಾಸದ ಪುಟದಲ್ಲಿ ಅವರು ಅಜರಾಮರವಾಗಿದ್ದಾರೆ. ಇಂತಹ ಮಹನೀಯರ ಕುರಿತಾಗಿ ಅಧ್ಯಯನ ಮಾಡುವ ಮೂಲಕ ಮತ್ತಷ್ಟು ತಿಳಿದುಕೊಳ್ಳಬೇಕು.  ಧೈರ್ಯ ಶೌರ್ಯ ಕೆಚ್ಚೆದೆಯ ಹೋರಾಟದ ಕಿತ್ತೂರು ಚೆನ್ನಮ್ಮ ಗುಣಗಳನ್ನು ಅಳವಡಿಸಿಕೊಂಡು ಬೆಳೆಸಿಕೊಂಡಾಗ ಮಾತ್ರ ಜಯಂತಿ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ. ಈ ನಿಟ್ಟಿನಲ್ಲಿ  ಇಂದಿನ ಯುವ ಪೀಳಿಗೆ ಮಹನೀಯರ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಉಪನ್ಯಾಸಕರಾಗಿ ಭಾಗವಹಿಸಿದ್ದ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಅವರು ಮಾತನಾಡಿ, ಕಿತ್ತೂರಿನಲ್ಲಿ ನಡೆದ ಮೊಟ್ಟ ಮೊದಲ ಹೋರಾಟ ಬ್ರಿಟೀಷರಿಗೆ ಸೋಲಿನ ಕಹಿಯನ್ನು ನೀಡಿದ್ದು ಕಿತ್ತೂರು.  ಬಲಿಷ್ಠವಾದ ಸೈನ್ಯ ಹೊಂದಿದ್ದ ಬ್ರಿಟೀಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಲು ಚೆನ್ನಮ್ಮನ ಹೃದಯದಲ್ಲಿ ತುಂಬಿಕೊಂಡಿರುವ ನಾಡ ಭಕ್ತಿ ನಾಡ ಪ್ರೇಮ ಆವರಿಸಿಕೊಂಡಿರುವುದರಿAದ ಧೀರತನದಿಂದ ಎದುರಿಸಲು ಸಾಧ್ಯವಾಯಿತು. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬುದರ ವಿರುದ್ದ ಮೊದಲು ಸಿಡಿದೆÀದ್ದ ಸಂಸ್ಥಾನ ಕಿತ್ತೂರು. ಇದು ಹೋರಾಟಕ್ಕೆ ನಾಂದಿಯಾಯಿತು. ಕೆಚ್ಚೆದೆಯಿಂದ ಪುಟ್ಟ ಸಂಸ್ಥಾನದ ಉಳಿವಿಗಾಗಿ ಧೈರ್ಯ-ಶೌರ್ಯದಿಂದ ಹೋರಾಡಿದ ಚೆನ್ನಮ್ಮ ಓರ್ವ ಕನ್ನಡತಿ ಎಂಬುದು ನಮಗೆ ಹೆಮ್ಮೆ. ಸರದಾರ ಗುರುಸಿದ್ಧಪ್ಪ, ಅಮಟೂರ ಬಾಳಪ್ಪ ಅವರು ಕಿತ್ತೂರು ಸೈನ್ಯದ ನಾಯಕರಾಗಿ ಮುಂಚೂಣಿಯಲ್ಲಿದ್ದರು ಎಂದು ಹೇಳಿದರು.

ಧೂಳಪ್ಪಗೌಡ ದೇಸಾಯಿಯವರು ಚೆನ್ನಮ್ಮಗೆ ಸಮರ ಕಲೆ ಕಲಿಸಿದ್ದರು. ಶೌರ್ಯ ಸಾಹಸ ಕಲಿಸಿದ್ದರು. ಸ್ತಿತಪ್ರಜ್ಞತ್ವವು, ಚರಿತ್ರೆ ಮತ್ತು ಸಮಕಾಲೀನ ಪ್ರಜ್ಞೆಗಳಿಗೆ ಕಿತ್ತೂರು ಇತಿಹಾಸ ಮೈಲಿಗಲ್ಲು.   ಅಭಿಜಾತ ಕನ್ನಡದ ಮೂಲ ಸಾಮಗ್ರಿ ಜನಪದರ ಲಾವಣಿ ಹಂತಿ ಪದ, ಗೀಗೀ ಪದ, ಅಲಾವಿ ಹಾಡಿನೊಳಗೆ ಚೆನ್ನಮ್ಮ ಕುರಿತಾಗಿ ವರ್ಣನೆ ಕಾಣಬಹುದಾಗಿದೆ. ಚೆನ್ನಮ್ಮನ ವ್ಯಕ್ತಿತ್ವದ ಗುಣಗಳನ್ನು ಅಳವಡಿಸಿಕೊಳ್ಳಬೇಕು.ಸಮಯೋಚಿತ ನಿರ್ಧಾರಗಳನ್ನು ಕೈಗೊಳ್ಳುವ ಶಕ್ತಿ ಚೆನ್ನಮ್ಮಗೆ ಇತ್ತು. ಗಂಭೀರ ನಡೆ, ವಿವೇಕಯುತ ನಿಲುವು ಹೊಂದಿದ್ದ ಚೆನ್ನಮ್ಮ ತ್ಯಾಗ ಜೀವಿಯಾಗಿದ್ದರು. ಸಂಸ್ಥಾನದ ಗೌರವವನ್ನು ಎತ್ತಿ ಹಿಡಿದು, ಚೆನ್ನಮ್ಮ  ಸ್ವಾತಂತ್ರ‍್ಯ ಯಜ್ಞದ ಮಹಾಚಿಲುಮೆ ಎಂದು ಡಾ.ಮೈತ್ರೇಯಿಣಿ ಹೇಳಿದರು.

ಈ ನೆಲದ ಮಣ್ಣಿನಲ್ಲಿ, ಗಾಳಿಯ ಪರಿಮಳದಲ್ಲಿ, ಅರಿವಿನ ಬೆಳಕಿನಲ್ಲಿ ಇಂದಿಗೂ ಜೀವಕಳೆಯಾಗಿ ಚೆನ್ನಮ್ಮ ಅವರ ಕ್ಷಾತ್ರ ತೇಜಸ್ಸು ತ್ಯಾಗಕ್ಕೆ ಸ್ವಾವಲಂಬನೆಗೆ ಗರುರುತಿಸಿಕೊಂಡಿದ್ದನ್ನು ಗಮನಿಸಬಹುದಾಗಿದೆ. ಹೆಣ್ಣು ಮಕ್ಕಳು ಎಲ್ಲಾ ರಂಗಗಳಲ್ಲೂ ಮುಂದೆ ಬಂದು ತಮ್ಮ ಜೀವನವನ್ನು ಉಜ್ವಲಗೊಳಿಸಿಕೊಳ್ಳಬೇಕು. ಇತಿಹಾಸ ಮುಂಬರುವ ತಲೆಮಾರಿಗೆ ತಲುಪಿಸಬೇಕು. ಅವರ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಜಯಂತಿ ಕಾರ್ಯಕ್ರಮದಲ್ಲಿ ವಿರೇಶ ವಾಲಿ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಮಹಾನಗರ ಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರಣ್ಣವರ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಎನ್ ಎಚ್ ನಾಗೂರ, ಮುಖಂಡರಾದ ಬಿ. ಎಂ. ಪಾಟೀಲ, ಶ್ರೀಶೈಲ ಬುಕ್ಕಣಿ,ಸಿದ್ದು ಅವಟಿ, ದಾನೇಶ ಅವಟಿ,ವಿಜಯ ಹಿರೋಳಿ, ನಿಂಗಪ್ಪ ಸಂಗಾಪೂರ, ನಿವೃತ್ತ ಶಿಕ್ಷಕ ಎಚ್. ಮಮದಾಪುರ, ನಾನ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮೆರವಣಿಗೆಗೆ ಚಾಲನೆ: ಇದಕ್ಕೂ ಮೊದಲು ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರದ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಚಾಲನೆ ನೀಡಿದರು. ಮೆರವಣಿಗೆಯು ವಿವಿಧ ಕಲಾ ತಂಡಗಳೊಂದಿಗೆ ನಾನಾ ವೃತ್ತಗಳಲ್ಲಿ ಸಂಚರಿಸಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದ ವರೆಗೆ ನಡೆಯಿತು.

Leave a Reply

ಹೊಸ ಪೋಸ್ಟ್‌