ಶ್ರೀ ಸಿದ್ಧೇಶ್ವರ ಸಂಸ್ಥೆಯ ಗೋರಕ್ಷಾ ಕೇಂದ್ರದ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆ

ವಿಜಯಪುರ: ಶ್ರೀ ಸಿದ್ಧೇಶ್ವರ ಸಂಸ್ಥೆಯ ಕಗ್ಗೋಡ ಶ್ರೀ ರಾಮನಗೌಡ ಬಾ ಪಾಟೀಲ(ಯತ್ನಾಳ) ಗೋ ರಕ್ಷಾ ಕೇಂದ್ರದ ಸಾವಯವ ಗೋ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಉದ್ಘಾಟಿಸಲಾಯಿತು.

ನಗರದ ಶ್ರೀ ಸಿದ್ಧೇಶ್ವರ ದೇವಾಲಯದ ಪಕ್ಕದಲ್ಲಿ ಪ್ರಾರಂಭಿಸಲಾಗಿರುವ ಈ ಮಾರಾಟ ಮಳಿಗೆಯನ್ನು ಸಂಸ್ಥೆಯ ಉಪಾಧ್ಯಕ್ಷ ಸಂಗು ಸಜ್ಜನ ಮತ್ತು ಚೇರಮನ್‌ ಬಸಯ್ಯ ಎಸ್. ಹಿರೇಮಠ ಉದ್ಘಾಟಿಸಿದರು.

ವಿಜಯಪುರದಲ್ಲಿ ಶ್ರೀ ಸಿದ್ಧೇಶ್ವರ ಸಂಸ್ಥೆಯ ಕಗ್ಗೋಡ ಗೋ ರಕ್ಷಾ ಕೇಂದ್ರದ ಸಾವಯವ ಗೋ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಸಂಗು ಸಜ್ಜನ, ಬಸಯ್ಯ ಹಿರೇಮಠ ಉದ್ಘಾಟಿಸಿದರು

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಸ್. ಎಚ್. ದೇಸಾಯಿ, ಬಸವರಾಜ ಸುಗೂರ, ಕೋಶಾಶದ್ಯಕ್ಷ ಶಿವಾನಂದ ನೀಲಾ, ನಿರ್ದೇಶಕ ರಮೇಶ ಹಳ್ಳದ, ಸದಾಶಿವ ಗುಡ್ಡೋಡಗಿ, ಎಂ. ಎಸ್. ಕರಡಿ, ಎಸ್. ಎಚ್. ನಾಡಗೌಡ, ಸಾಯಬಣ್ಣ ಎಸ್. ಭೋವಿ, ಎನ್. ಎಂ. ಗೋಲಾಯಿ, ಮಲಕಪ್ಪ ಗಾಣಿಗೇರ, ಚಂದು ಹುಂಡೇಕಾರ, ಸುನೀಲ ಉಕುಮನಾಳ ಮುಂತಾದವರು ಉಪಸ್ಥಿತರಿದ್ದರು.

 

ಗೋವಿನ ಉತ್ಪನ್ನಗಳು, ಪಂಚಗವ್ಯ ಸಾಬೂನು, ಸಾವಯವ ಬೆಲ್ಲ, ಪಂಚಗವ್ಯ ಘ್ರತ, ಹಾಲು, ಮೊಸರು, ಬೆಣ್ಣೆ, ಮಜ್ಜಿಗೆ, ತುಪ್ಪ, ಗಿಣ್ಣದ ಹಾಲು, ಕುಳ್ಳ, ವಿಭೂತಿ, ಚರ್ಮರಕ್ಷಕ ಮಲಾಮು, ದಂತಮಂಜನ, ಸೊಳ್ಳೆ ಬತ್ತಿ, ಧೂಪದ ಬತ್ತಿ, ಶುದ್ದ ಕುಂಕುಮ, ಗೋಅರ್ಕ, ಸಿರಿಧಾನ್ಯಗಳು, ಬೇಳೆ ಕಾಲುಗಳು, ಗಾಣದ ಎಣ್ಣಿ, ಹಣ್ಣು ತರಕಾರಿ, ಗೋಮೂತ್ರ, ಸಗಣಿ ಗೊಬ್ಬರ, ಎರೆಹುಳು ಗೊಬ್ಬರ ಇನ್ನಿತರ ಉತ್ಪನ್ನಗಳು ಇಲ್ಲಿ ಮಾರಾಟಕ್ಕೆ ಲಭ್ಯವಿವೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

Leave a Reply

ಹೊಸ ಪೋಸ್ಟ್‌