ವಿಶ್ವಪ್ರಕಾಶ ಟಿ ಮಲಗೊಂಡ ನಟನೆಯ ತುಷಾರ ಸಿನೇಮಾ ನಾ ನಿನ್ನ ಕಾವಲುಗಾರ ಹಾಡು ಬಿಡುಗಡೆ

ವಿಜಯಪುರ: ಯುವ ನಟ ವಿಶ್ವಪ್ರಕಾಶ ಮಲಗೊಂಡ ನಟಿಸಿರುವ ಮತ್ತು ಈಗಾಗಲೇ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿ ತೆರೆಗೆ ಬರಲು ಸಿದ್ಧವಾಗಿರುವ ತುಷಾರ್ ಸಿನಿಮಾದ ಹಾಡು ನಾ ನಿನ್ನ ಕಾವಲುಗಾರ ಬಿಡುಗಡೆಯಾಗಿದೆ.

ಪವನಕುಮಾರ ಬೂದಿಹಾಳ ಅವರು ನಾ ನಿನ್ನ ಕಾಯೋ ಕಾವಲುಗಾರ ಹಾಡಿಗೆ ಸಾಹಿತ್ಯ ರಚಿಸಿದ್ದು, ಮಂಜು ಕವಿ ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿಬಂದಿದೆ.  ಹೊಸ ಪ್ರತಿಭೆ ಆರ್ ಜೆ ನವೀನ ಈ ಹಾಡಿಗೆ ಧ್ವನಿಯಾಗಿದ್ದಾರೆ.  ದೀಪಾವಳಿ ಹಬ್ಬದ ಅಂಗವಾಗಿ ಚಿತ್ರತಂಡ ಈ ಹಾಡನ್ನು Charvi Music YouTube Channel ನಲ್ಲಿ ಬಿಡುಗಡೆ ಮಾಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ತುಷಾರ್ ಚಿತ್ರದ ನಟ ಮತ್ತು ನಿರ್ದೇಶಕ ವಿಶ್ವಪ್ರಕಾಶ ಟಿ. ಮಲಗೊಂಡ, ಈಗಾಗಲೇ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಬಿರುಸಿನಿಂದ ಸಾಗಿದೆ.  ತುಂಬಾ ಕನಸ್ಸಿಟ್ಟುಕೊಂಡು ಮಾಡಿರುವ ಈ ಸಿನಿಮಾದ ಹಾಡನ್ನು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಿದ್ದೇವೆ.  ಈ ಹಾಡಿನ ಚಿತ್ರೀಕರಣ ಉತ್ತರ ಕರ್ನಾಟಕ ಹಾಗೂ ಬೆಂಗಳೂರಿನ ಸುತ್ತಮುತ್ತ ನಡೆದಿದೆ ಎಂದು ಮಾಹಿತಿ ನೀಡಿದರು.

ವಿಶ್ವಪ್ರಕಾಶ ಟಿ. ಮಲಗೊಂಡ ನಟನೆಯ ತುಷಾರ್ ಸಿನೇಮಾದ ಚಿತ್ರ

ತುಷಾರ್ ಗೆ ಜೋಡಿಯಾಗಿ ಶಿಲ್ಪಾ ಮೂರ್ತಿ ಹಾಗೂ ಸಾನ್ವಿ ಅಭಿನಯಿಸಿದ್ದಾರೆ.  ತುಷಾರ್ ಸಿನಿಮಾಕ್ಕೆ ವಿಶ್ವಪ್ರಕಾಶ ಮಲಗೊಂಡ ನಟನೆಯ ಜೊತೆಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.  ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ಸಹಯೋಗದಲ್ಲಿ ಮಲಗೊಂಡ ಫಿಲಂ ಪ್ರೊಡಕ್ಷನ್ ನಿರ್ಮಾಣ ಮಾಡಿದ್ದಾರೆ.  ಇನ್ನು ಮಂಜುಕವಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಾಹಿತ್ಯ ಸಂಭಾಷಣೆ ಪವನಕುಮಾರ ಬೂದಿಹಾಳ, ರವಿ ಕುಂಟೋಜಿ ಛಾಯಾಗ್ರಹಣ, ಚಂದು ಅವರ ಸಂಕಲನ, ಮಲಗೊಂಡ ಫಿಲಂ ಬ್ಯಾನರ್ ಅಡಿಯಲ್ಲಿ, ಸಹ ನಿರ್ದೇಶಕರಾಗಿ ಸುಧಾ ಅಣ್ಣಾಶೇಠ, ಉಮೇಶ ಕೆ. ಎನ್ ಅವರ ಪಬ್ಲಿಸಿಟಿ ಡೀಸೈನ್, ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವಿರೇಶ ಹಂಡಗಿ, ಹರೀಶ ಅರಸು.  ಪೋಸ್ಟರ್ ಡಿಸೈನ್ ವಿಶ್ವ ಬಿರಾದಾರ, ಪ್ರಸಾದ ತೋಟದ, ತಂಡದಲ್ಲಿ ಪೃಥ್ವಿರಾಜ ನಾಯಕ, ಚಂದ್ರಕಾಂತ ಬೂದಿಹಾಳ, ಶ್ರೇಯಶ ದೇಶಪಾಂಡೆ ತಾಂತ್ರಿಕ ಬಳಗವನ್ನು ಈ ಚಿತ್ರತಂಡ ಒಳಗೊಂಡಿದೆ.

Leave a Reply

ಹೊಸ ಪೋಸ್ಟ್‌