ವಿಶ್ವಕಪ್ ಕ್ರಿಕೆಟ್ ಫೈನಲ್- ಪಂದ್ಯ ವೀಕ್ಷಣೆಗೆ ಬೃಹತ್ ಎಲ್ಇಡಿ ಪರದೆ ಅಳವಡಿಸಿದ ಶ್ರೀ ಚಿದಂಬರೇಶ್ವರ ಯುವಕ ಮಂಡಳಿ ಹುಡುಗರು

ವಿಜಯಪುರ: ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಭಾರತ- ಆಸ್ಟ್ರೇಲಿಯಾ ಮ್ಯಾಚ್ ವೀಕ್ಷಣೆಗೆ ನಗರದ ಆಲಮಟ್ಟಿ ರಿಂಗ್ ರಸ್ತೆಯಲ್ಲಿರುವ ಶ್ರೀ ಚಿದಂಬರೇಶ್ವರ ನಗರದಲ್ಲಿ ಬೃಹತ್ ಎಲ್ಇಡಿ ಪರದೆ ಅಳವಡಿಸಲಾಗಿದೆ.

ಭಾರತ ಮೂರನೇ ಬಾರಿಗೆ ವಿಶ್ವಕಪ್ ಗೆಲ್ಲಲಿ ಎಂದು ಶುಭ ಹಾರೈಸಿ ರವಿವಾರ ಬೆಳಿಗ್ಗೆ 930ಕ್ಕೆ ಶ್ರೀ ಚಿದಂಬರೇಶ್ವರ ದೇವಸ್ಥಾನದಲ್ಲಿ ಯುವ ಮುಖಂಡ ವಿಜಯ ಜೋಶಿ ಮತ್ತು ಸ್ನೇಹಿತರು ವಿಶೇಷ ಪೂಜೆ ಆಯೋಜಿಸಿದ್ದಾರೆ.  ಅಲ್ಲದೇ, ಮಧ್ಯಾಹ್ನ ಪಂದ್ಯ ವೀಕ್ಷಿಸಲು 6 ಅಡಿ ಎತ್ತರ ಮತ್ತು 9 ಅಡಿ ಅಗಲದ ದೊಡ್ಡದಾದ ಎಲ್ಇಡಿ ಸ್ಕ್ರೀನ್ ಅಳವಡಿಸಿದ್ದಾರೆ.  ಈ ಬೃಹತ್ ಸ್ಕ್ರೀನ್ ಮೂಲಕ ಬಡಾವಣೆಯ ಜನರು ಕ್ರಿಕೆಟ್ ರಸದೌತಣ ಸವಿಯಲು ವ್ಯವಸ್ಥೆ ಮಾಡಿದ್ದಾರೆ.

ಶ್ರೀ ಚಿದಂಬರೇಶ್ವರ ಯುವಕ ಮಂಡಳಿ ಇದಕ್ಕಾಗಿ ದೊಡ್ಡದಾದ ಪೆಂಡಾಲ್ ಕೂಡ ಹಾಕಿದ್ದು, ಸುಮಾರು 100 ಜನ ಒಟ್ಟಿಗೆ ಕುಳಿತು ಪಂದ್ಯ ವೀಕ್ಷಿಸಬಹುದಾಗಿದೆ.  ಹಿರಿಯರಿಗೆ ಕುಳಿತುಕೊಳ್ಳಲು ಕುರ್ಚಿ ಮತ್ತು ಮಕ್ಕಳು ಹಾಗೂ ಯುವಕರು ನೆಲದ ಮೇಲೆ ಕುಳಿತಕೊಂಡು ನೋಡಲು ಮ್ಯಾಟ್ ಕೂಡ ಅಳವಡಿಸಲಲಾಗಿದೆ ಎಂದು ವಿಜಯ ಜೋಶಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌