ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗುವವರೆಗೆ ಯಾವುದೇ ತ್ಯಾಗಕ್ಕೂ ಸಿದ್ದ- ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ

ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಅನೇಕ ರೀತಿ ಹೋರಾಟ ಮಾಡಿದರೂ, ಯಾವುದೇ ಸರಕಾರ ಸರಿಯಾಗಿ ಸ್ಪಂಧಿಸಿಲ್ಲ.  ಬೇಡಿಕೆ ಈಡೇರುವವರೆಗೂ ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ತಿಕೋಟಾ ತಾಲೂಕಿನ ಕನಮಡಿ ಬಳಿಯ ಸುಕ್ಷೇತ್ರ ಗಡಿಭಾಗದಲ್ಲಿರುವ ಶ್ರೀ ಧರಿದೇವರ ದೇವಸ್ಥಾನದ ಬಳಿಯ ಪ್ರೌಢಶಾಲೆಯ ಆವರಣದಲ್ಲಿ ಇಷ್ಟಲಿಂಗ ಪೂಜೆಯೊಂದಿಗೆ ರಾಷ್ಟ್ರೀಯ ಹೆದ್ದಾರಿ ತಡೆ, ಚನ್ನಮ್ಮ ಜಯಂತಿ ವಿಜಯೋತ್ಸವ ಹಾಗೂ ಪಂಚಮಸಾಲಿ ಸಮಾಜದ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಮೀಸಲಾತಿ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ.  ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರ 2ಎ ಮೀಸಲಾತಿ ಮತ್ತು ಕೇಂದ್ರ ಸರಕಾರ ಲಿಂಗಾಯತ ಸಮಾಜದ ನಾನಾ ಪಂಗಡಗಳಿಗೆ ಓಬಿಸಿ ಪಟ್ಟಿಯಲ್ಲಿ ಸೇರಿಸದಿದ್ದರೆ ಯಾವುದೇ ತ್ಯಾಗಕ್ಕೂ ಸಿದ್ದ ಎಂದು ಅವರು ಎಚ್ಚರಿಕೆ ನೀಡಿದರು.

ಸರಕಾರ 2 ಎ ಮೀಸಲಾತಿ ನೀಡದ ಕಾರಣ ಸಮಾಜದ ವಿದ್ಯಾರ್ಥಿಗಳು, ವಿದ್ಯಾವಂತ ಯುವಕರು ಸರಕಾರದ ಯೋಜನೆಗಳು ಮತ್ತು ಉನ್ನತ ಹುದ್ದೆಗಳಿಂದ ವಂಚಿತರಾಗುತ್ತಿದ್ದಾರೆ.       ಮೀಸಲಾತಿಗಾಗಿ ನಾನಾ ಹಂತದ ಹೋರಾಟಗಳನ್ನು ಮಾಡಲಾಗಿದೆ.  ಕೂಡಲ ಸಂಗಮ ಧರ್ಮಕ್ಷೇತ್ರದಿಂದ ಬೆಂಗಳೂರಿನ ವಿಧಾನಸೌಧದವರೆಗೆ ಬಿಸಿಲು, ಮಳೆ, ಗಾಳಿ ಲೆಕ್ಕಿಸದೆ ಪಾದಯಾತ್ರೆ ಕೈಗೊಳ್ಳಲಾಗಿದೆ.  ಸುಮಾರು 10 ಲಕ್ಷ ಜನರು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಇತ್ತೀಚಿಗೆ ನಿಧನರಾದ ಕನಮಡಿ ಗ್ರಾಮದ ಸಮಾಜದ ಹಿರಿಯ ಮುಖಂಡ ಬೀರನಗೌಡ ಕಲ್ಲನಗೌಡ ಪಾಟೀಲ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಮಾಜದ ಜಿಲ್ಲಾಧ್ಯಕ್ಷ ಬಿ. ಎಂ. ಪಾಟೀಲ ದೇವರ ಹಿಪ್ಪರಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ಎಪಿಎಂಸಿ ಮಾಜಿ ಅಧ್ಯಕ್ಷ ಸುಭಾಸಗೌಡ ಪಾಟೀಲ, ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ, ಎಂ. ಎಸ್. ರುದ್ರಗೌಡ, ಸುಭಾಸಗೌಡ ಎಸ್. ಪಾಟೀಲ, ನಿಂಗಪ್ಪ ಪಿರೋಜಿ ಬೆಳಗಾವಿ, ಉಪನ್ಯಾಸಕಿ ಡಾ. ಮೈತ್ರಾಯಿಣಿ ಗದಿಗೆಪ್ಪಗೌಡರ, ಪ್ರಥಮ ದರ್ಜೆ ಗುತ್ತಿಗೆದಾರ ಬಿ. ಎಸ್.  ಬಿರಾದಾರ, ಬಾಬುರಾವ ಮಹಾರಾಜರು(ಹೊನವಾಡ), ಎಂ. ಪಿ. ಪಾಟೀಲ, ಬಾಬುಗೌಡ ಪಾಟೀಲ, ಎಂ. ಆರ್. ತುಂಗಳ, ಶಂಕರಗೌಡ ಬಿರಾದಾರ(ಕನಮಡಿ), ಪಂಚಸೇನೆ ರಾಜ್ಯಾಧ್ಯಕ್ಷ ರುದ್ರಗೌಡ ಸೋಲದಗೌಡರು(ಬಂಡಿ), ಜಿಲ್ಲಾಧ್ಯಕ್ಷ ಶರಣಬಸಪ್ಪ ಗಂಗಶೆಟ್ಟಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಮಲ್ಲಿಕಾರ್ಜುನ ಸಿಳ್ಳಿನ, ಸುನೀಲಗೌಡ ಅಶೋಕ ಬಿರಾದಾರ, ಸಿದಗೊಂಡ ಬಾಬಾನಗರ, ರಾಷ್ಟ್ರೀಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಬಿರಾದಾರ(ಬಸವನ ಬಾಗೇವಾಡಿ), ಸೊಮಶೇಖರ ದೇವರ, ಉಮಾ ಪಾಟೀಲ, ನ್ಯಾಯವಾದಿ ದಾನೇಶ ಅವಟಿ, ಶಿವಾನಂದ ಮರೋಳ, ಶ್ರೀಕಾಂತ ಕೊಟ್ಟರಶೇಟ್ಟಿ, ಡಾ. ಮಹಾಂತೇಶ ಜಾಲಗೇರಿ, ಡಾ. ಗಜಾನನ ಮೈಸಾಳೆ, ಅಪ್ಪಾಸಾಬ ಯರನಾಳ, ಸಿದ್ಧನಗೌಡ ಬಿರಾದಾರ, ಬಾಬುಗೌಡ ಪಾಟೀಲ, ನಿಂಗೊಂಡಗೌಡ ಸೊಲ್ಲಾಪುರ, ಗೌರೇಶ ಪಾಟೀಲ, ಅಶೋಕ ನಿಂಗನಗೌಡ ಬಿರಾದಾರ, ಸಿದ್ಧನಗೌಡ ರುದ್ರಗೌಡ, ಹರೀಶಗೌಡ ಬಿರಾದಾರ, ಬಾಬುಗೌಡ ಪಾಟೀಲ, ಪ್ರಶಾಂತಗೌಡ ಪಾಟೀಲ, ಶ್ರೀಶೈಲಗೌಡ ಪಾಟೀಲ ಇನ್ನು ಸುತ್ತಮುತ್ತಲಿನ ಗ್ರಾಮದ ಮುಖಂಡರು, ಗಡಿಭಾಗದ ಜತ್, ಚಡಚಣ, ಬಡಚಿ, ಬಾಬಾನಗರ, ಹೊನವಾಡ, ಕೋಟ್ಯಾಳ, ದಂಧರಗಿ, ಟಕ್ಕಳಕಿ ಮುಂತಾದ ಗ್ರಾಮಗಳ ಸಮಾಜ ಬಾಂಧವರು ಉಪಸ್ಥಿತರಿದ್ದರು.

ವಿರೇಶ ವಾಲಿ ಹಾಗೂ ತಂಡದವರು ಭಕ್ತಿಗೀತೆ, ಭಾವಗೀತೆ, ವಚನಗಳನ್ನು ಹೇಳಿ ಪ್ರಾರ್ಥಿಸಿದರು.  ಮಹೇಶ ಭಂಡರಕೋಟೆ ಕೊಟ್ಟಲಗಿ ನಿರೂಪಿಸಿದರು.  ಶಂಕರಗೌಡ ಬಿರಾದಾರ ವಂದಿಸಿದರು.

ಇದಕ್ಕೂ ಮೊದಲು ಬೆಳಿಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಚನ್ನಮ್ಮನ ಭಾವಚಿತ್ರವನ್ನು ಅಲಂಕರಿಸಿದ ಆನೆಯ ಮೇಲೇರಿಸಿ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿಯವರನ್ನು ರಥದಲ್ಲಿ ಕೂಡ್ರಿಸಿ ಸಕಲ ವಾಧ್ಯ ವೃಂಧದೊಂದಿಗೆ ಮಹಿಳೆಯರ ಪೂರ್ಣ ಕುಂಭದೊಂದಿಗೆ ಮೆರವಣಿಗೆ ನಡೆಸಲಾಯಿತು.  ಮಧ್ಯಾಹ್ನ ಇಷ್ಟಲಿಂಗ ಪೂಜ್ಯೆಯೊಂದಿಗೆ ಕೆಲಕಾಲ ರಾಷ್ಟ್ರೀಯ ಹೆದ್ದಾರಿ ತಡೆ ಮಾಡಲಾಯಿತು.  ರಾತ್ರಿ ಚನ್ನಮ್ಮನ ಕುರಿತು ಭಕ್ತಿಗೀತೆ ಲಾವಣಿಗೀತೆಗಳನ್ನು ಹಾಡಲಾಯಿತು.

Leave a Reply

ಹೊಸ ಪೋಸ್ಟ್‌