ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿ- ವಿಜಯಪುರ ಜಿಲ್ಲೆಗೆ ಕೀರ್ತಿತಂದ ಅಟಲ್ ಬಿರಾಹಿ ವಾಜಪೇಯಿ ಶಾಲೆಯ ವಿದ್ಯಾರ್ಥಿನಿ

ವಿಜಯಪುರ: ನಗರದ ಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಟಲ್ ಬಿಹಾರಿ ವಾಜಪೇಯಿ ಶಾಲೆಯ 6ನೆಯ ತರಗತಿ ವಿದ್ಯಾರ್ಥಿನಿ ಮುದ್ರಾ ಬಾಗಲಕೋಟ ನವದೆಹಲಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ 14 ವರ್ಷದೊಳಗಿನ 22 ಕೆಜಿ ವಿಭಾಗದ ಬಾಲಕಿಯರ ಕರಾಟೆ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ಈ ವಿದ್ಯಾರ್ಥಿನಿಯ ಸಾಧನೆಗೆ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಮತ್ತು ಶಾಸಕ ಬಸನಗೌಡ ಆರ್. ಪಾಟೀಲ ಯತ್ನಾಳ, ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಎಸ್. ಹಿರೇಮಠ, ಶ್ರೀ ಸಿದ್ದೇಶ್ವರ ಸಂಸ್ಥೆಯ ಶಾಲಾ ನಾಮನಿರ್ದೇಶಿತ ಅಧ್ಯಕ್ಷ ಬಸವರಾಜ ಸುಗೂರ, ಜಂಟಿ ಕಾರ್ಯದರ್ಶಿ ಎಂ. ಎಂ. ಸಜ್ಜನ ಮತ್ತು ಸಂಸ್ಥೆಯ ನಿರ್ದೇಶಕ ಹಾಗೂ ಶಾಲೆಯ ಸದಸ್ಯ ಮಡಿವಾಳಪ್ಪ ಕರಡಿ, ಸಂಸ್ಥೆಯ ನಿರ್ರೇಶಕ ಸಾಯಿಬಣ್ಣ ಎಸ್. ಭೋವಿ, ಸಂಸ್ಥೆಯ ನಿರ್ದೇಶಕ ಚಂದಪ್ಪ ಹುಂಡೇಕರ, ಮಲಕಪ್ಪ ಗಾಣಿಗೇರ, ಸದಸ್ಯ ನಾಗಪ್ಪ ಗುಗ್ಗರಿ, ಸುಧೀರ ಚಿಂಚಲಿ, ಶಾಲಾ ಆಡಳಿತಾಧಿಕಾರಿ ಡಾ. ಎಚ್. ವೆಂಕಟೇಶ, ಶಾಲಾ ಮುಖ್ಯ ಶಿಕ್ಷಕಿ ಐಶ್ವರ್ಯ ಸಂಗಮ, ಶಾಲೆಯ ಕರಾಟೆ ತರಬೇತುದಾರ ಪ್ರವೀಣ ವಠಾರ ಮತ್ತೀತರರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

ಹೊಸ ಪೋಸ್ಟ್‌