ವಿಜಯಪುರದ ಐಶ್ವರ್ಯ ನಗರದಲ್ಲಿ ರಾಮ ಮಂದಿರ ಉದ್ಘಾಟನೆ ಆಮಂತ್ರಣ ಮಂತ್ರಾಕ್ಷತೆ ವಿತರಣೆ

ವಿಜಯಪುರ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಸಿದ್ಧವಾಗಿದ್ದು, ಈ ಕಾರ್ಯಕ್ರಮದ ಮಂತ್ರಾಕ್ಷತೆ ಮತ್ತು ಆಮಂತ್ರಣ ಪತ್ರಿಕೆ ವಿತರಣೆ ಕಾರ್ಯಕ್ರಮ ನಗರದಲ್ಲಿ ನಡೆಯಿತು.

ನಗರದ ಜ್ಞಾನಯೋಗಾಶ್ರಮ ಬಳಿ ಇರುವ ಐಶ್ವರ್ಯ ನಗರದ ಶ್ರೀ ವೀರಾಂಜನೇಯ ದೇವಾಲಯದಲ್ಲಿ ಅಯೋಧ್ಯದಿಂದ ಬಂದಿರುವ ಮಂತ್ರಾಕ್ಷತೆ, ಆಮಂತ್ರಣ ಪತ್ರಿಕೆ, ಅಯೋಧ್ಯೆ ದೇವಾಲಯದ ಚಿತ್ರಗಳನ್ನು ವಿತರಿಸಲಾಯಿತು.  ಐಶ್ವರ್ಯ ನಗರದ ಸುತ್ತಲಿನ ಬಡಾವಣೆಗಳ ರಾಮಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು

ಈ ಸಂದರ್ಭದಲ್ಲಿ ಮುಖಂಡರಾದ ಗಿರೀಶ ಪಾಟೀಲ, ಸಿದ್ದು ಕರಲಗಿ, ವಿರಾಜ ಅಂಗಡಿ, ಜಯಪ್ರಕಾಶ ಅಂಬಲಿ, ರವಿ ಹಿತ್ತಲಮನಿ, ಶ್ರೀರಾಮ ಭಕ್ತರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌